ಈ ನಿವೇಶನ ಬಿಬಿಎಂಪಿ ಸ್ವತ್ತು' ಫಲಕ ಹಾಕುವ ಮೊದಲು ತೆರಿಗೆ ಪಾವತಿಸಿ
ಬೆಂಗಳೂರು, ಡಿಸೆಂಬರ್ 21 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಆಸ್ತಿ ತೆರಿಗೆ ಕಟ್ಟಲು ಇನ್ನೂ ವಿಳಂಬ ಮಾಡದಿರಿ. ಇಲ್ಲವಾದಲ್ಲಿ ನಿಮ್ಮ ನಿವೇಶನಗಳ ಮುಂದೆ 'ಈ ನಿವೇಶನ ಬಿಬಿಎಂಪಿ ಸ್ವತ್ತು' ಎನ್ನುವ ನಾಮಫಲಕ ಬೀಳುವುದೊಂದು ಗ್ಯಾರಂಟಿ.
ದಾಖಲೆ ಪ್ರಕಾರ ನಿವೇಶನ ನಿಮ್ಮದೆ, ಆದರೆ ಅದರ ಮುಂದೆ ಈ ನಿವೇಶನ ಬಿಬಿಎಂಪಿ ಸ್ವತ್ತು ಎಂಬ ಫಲಕ ಮಾತ್ರ ನಮ್ಮದು ಇರಲಿದೆ. ನಿವೇಶನ ಎಂಬ ಕಾರಣಕ್ಕೆ ಆಸ್ತಿ ತೆರಿಗೆ ಪಾವತಿಸದೆ ವಂಚಿಸುತ್ತಿರುವವರಿಗೆ ಪಾಠ ಕಲಿಸಲು ಬಿಬಿಎಂಪಿ ಈ ರೀತಿಯ ಆಲೋಚನೆ ಮಾಡಿದೆ. ನಿವೇಶನಗಳ ಮಾಲೀಕರಿಂದ ತೆರಿಗೆ ಪಾವತಿ ಆಗಿರದಿದ್ದರೆ ಅವುಗಳ ಮುಂದೆ ಫಲಕ ಅಳವಡಿಸುವಂತೆ ವಾರ್ಡ್ ಮಟ್ಟದ ಅಧಿಕಾರಿಗಳಿಗೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಸೂಚಿಸಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿನ ಆಸ್ತಿಗಳ ಪತ್ತೆ ಮತ್ತು ತೆರಿಗೆ ವಸೂಲಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಈಗಾಗಲೇ ಸಾಕಷ್ಟು ಕ್ರಮ ಕೈಗೊಂಡಿದ್ದಾರೆ. ಅದರಂತೆ 19 ಲಕ್ಷ ಆಸ್ತಿಗಳನ್ನು ಪತ್ತೆ ಹಚ್ಚಿ ಅವುಗಳಿಂದ ತೆರಿಗೆ ವಸೂಲಿ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಲೆಕ್ಕಕ್ಕೆ ಸಿಗದ ನಿವೇಶನಗಳಿಂದ ತೆರಿಗೆ ವಸೂಲು ಮಾಡುವುದು ಅಧಿಕಾರಿಗಳಿಗೆ ಸವಾಲಾಗಿದೆ. ನಿವೇಶನ ಮಾಲೀಕರು ಕೂಡ ಪತ್ತೆಯಾಗದೆ ತೆರಿಗೆ ವಸೂಲಿ ಆಗುವುದಿಲ್ಲ. ಹೀಗಾಗಿ ನಿವೇಶನ ಮಾಲೀಕರು ತಾವಾಗಿಯೇ ಬಿಬಿಎಂಪಿಗೆ ಬರುವಂತೆ ಮಾಡಲು ಹೊಸ ಪ್ಲ್ಯಾನ್ ರೂಪಿಸಲಾಗಿದೆ.
2 ಲಕ್ಷಕ್ಕೂ ಹೆಚ್ಚು ನಿವೇಶನಗಳು: ಬಿಬಿಎಂಪಿ ಅಧಿಕಾರಿಗಳ ಮಾಹಿತಿಯಂತೆ ಈಗಾಗಲೇ ಲೆಕ್ಕ ಹಾಕಿರುವ 19 ಲಕ್ಷ ಆಸ್ತಿಗಳಲ್ಲಿ 2017-18 ನೇ ಸಾಲಿನಲ್ಲಿ 16 ಲಕ್ಷ ಆಸ್ತಿ ಮಾಲೀಕರು ತೆರಿಗೆ ಪಾವತಿಸುತ್ತಿದ್ದರು. ಇನ್ನು 3 ಲಕ್ಷ ಆಸ್ತಿಗಳಿಂದ ತೆರಿಗೆ ವಸೂಲು ಮಾಡಬೇಕಿದೆ. ಲೆಕ್ಕಕ್ಕೆ ಸಿಗದ ಆಸ್ತಿಗಳೆಂದರೆ ನಿವೇಶನಗಳಾಗಿದ್ದು ಬಿಬಿಎಂಪಿ ಅಂದಾಜಿನ ಪ್ರಕಾರ 2 ಲಕ್ಷಕ್ಕೂ ಹೆಚ್ಚು ನಿವೇಶನಗಳು ಬೆಂಗಳೂರಿನಲ್ಲಿದೆ.
ದಾಖಲೆಗಳಿಲ್ಲದ ನಿವೇಶನ ಮಾಲೀಕರನ್ನು ಪತ್ತೆ ಮಾಡಲು ಯಾವುದೇ ರೀತಿಯ ದಾಖಲೆಗಳು ಬಿಬಿಎಂಪಿಯ ಬಳಿ ಇಲ್ಲ. ಅದರಲ್ಲೂ ಹೆಚ್ಚು ನಿವೇಶನಗಳು ಹೊಸ ವಾರ್ಡ್ ಗಳಲ್ಲಿದ್ದು ಅವುಗಳ ಖಾತೆ ಮಾಡಿಕೊಂಡಿರುವುದು ಸೇರಿ ಇನ್ನಿತರೆ ದಾಖಲೆಗಳು ದೊರೆಯುತ್ತಿಲ್ಲ.
ನಿವೇಶನ ಮಾಲೀಕರು ವಿದೇಶದಲ್ಲಿ, ಬೇರೆ ಊರುಗಳಲ್ಲಿ ವಾಸಿಸುತ್ತಿರುವುದರಿಂದ ಅವರ ಪತ್ತೆಯೂ ಆಗುತ್ತಿಲ್ಲ. ಬಿಬಿಎಂಪಿ ಸ್ವತ್ತು ನಾಮಫಲಕ ಹಾಕಿದರೆ ನಿವೇಶನ ಮಾಲೀಕರು ಬಿಬಿಎಂಪಿ ಕಚೇರಿಯನ್ನು ಸಂಪರ್ಕಿಸುತ್ತಾರೆ ಎಂಬ ವಿಶ್ವಾಸವನ್ನು ಬಿಬಿಎಂಪಿ ಅಧಿಖಾರಿಗಳು ವ್ಯಕ್ತಪಡಿಸಿದ್ದಾರೆ.
-
GBA: ಜಿಬಿಎ ವ್ಯಾಪ್ತಿಯಲ್ಲಿ ಪೂರ್ವ ಮುಂಗಾರು ಮಳೆಯ ಪೂರ್ವ ಸಿದ್ಧತೆಗೆ ಕ್ರಮ: ಮಹೇಶ್ವರ್ ರಾವ್ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ











Click it and Unblock the Notifications