ಈ ನಿವೇಶನ ಬಿಬಿಎಂಪಿ ಸ್ವತ್ತು' ಫಲಕ ಹಾಕುವ ಮೊದಲು ತೆರಿಗೆ ಪಾವತಿಸಿ
ಬೆಂಗಳೂರು, ಡಿಸೆಂಬರ್ 21 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಆಸ್ತಿ ತೆರಿಗೆ ಕಟ್ಟಲು ಇನ್ನೂ ವಿಳಂಬ ಮಾಡದಿರಿ. ಇಲ್ಲವಾದಲ್ಲಿ ನಿಮ್ಮ ನಿವೇಶನಗಳ ಮುಂದೆ 'ಈ ನಿವೇಶನ ಬಿಬಿಎಂಪಿ ಸ್ವತ್ತು' ಎನ್ನುವ ನಾಮಫಲಕ ಬೀಳುವುದೊಂದು ಗ್ಯಾರಂಟಿ.
ದಾಖಲೆ ಪ್ರಕಾರ ನಿವೇಶನ ನಿಮ್ಮದೆ, ಆದರೆ ಅದರ ಮುಂದೆ ಈ ನಿವೇಶನ ಬಿಬಿಎಂಪಿ ಸ್ವತ್ತು ಎಂಬ ಫಲಕ ಮಾತ್ರ ನಮ್ಮದು ಇರಲಿದೆ. ನಿವೇಶನ ಎಂಬ ಕಾರಣಕ್ಕೆ ಆಸ್ತಿ ತೆರಿಗೆ ಪಾವತಿಸದೆ ವಂಚಿಸುತ್ತಿರುವವರಿಗೆ ಪಾಠ ಕಲಿಸಲು ಬಿಬಿಎಂಪಿ ಈ ರೀತಿಯ ಆಲೋಚನೆ ಮಾಡಿದೆ. ನಿವೇಶನಗಳ ಮಾಲೀಕರಿಂದ ತೆರಿಗೆ ಪಾವತಿ ಆಗಿರದಿದ್ದರೆ ಅವುಗಳ ಮುಂದೆ ಫಲಕ ಅಳವಡಿಸುವಂತೆ ವಾರ್ಡ್ ಮಟ್ಟದ ಅಧಿಕಾರಿಗಳಿಗೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಸೂಚಿಸಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿನ ಆಸ್ತಿಗಳ ಪತ್ತೆ ಮತ್ತು ತೆರಿಗೆ ವಸೂಲಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಈಗಾಗಲೇ ಸಾಕಷ್ಟು ಕ್ರಮ ಕೈಗೊಂಡಿದ್ದಾರೆ. ಅದರಂತೆ 19 ಲಕ್ಷ ಆಸ್ತಿಗಳನ್ನು ಪತ್ತೆ ಹಚ್ಚಿ ಅವುಗಳಿಂದ ತೆರಿಗೆ ವಸೂಲಿ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಲೆಕ್ಕಕ್ಕೆ ಸಿಗದ ನಿವೇಶನಗಳಿಂದ ತೆರಿಗೆ ವಸೂಲು ಮಾಡುವುದು ಅಧಿಕಾರಿಗಳಿಗೆ ಸವಾಲಾಗಿದೆ. ನಿವೇಶನ ಮಾಲೀಕರು ಕೂಡ ಪತ್ತೆಯಾಗದೆ ತೆರಿಗೆ ವಸೂಲಿ ಆಗುವುದಿಲ್ಲ. ಹೀಗಾಗಿ ನಿವೇಶನ ಮಾಲೀಕರು ತಾವಾಗಿಯೇ ಬಿಬಿಎಂಪಿಗೆ ಬರುವಂತೆ ಮಾಡಲು ಹೊಸ ಪ್ಲ್ಯಾನ್ ರೂಪಿಸಲಾಗಿದೆ.
2 ಲಕ್ಷಕ್ಕೂ ಹೆಚ್ಚು ನಿವೇಶನಗಳು: ಬಿಬಿಎಂಪಿ ಅಧಿಕಾರಿಗಳ ಮಾಹಿತಿಯಂತೆ ಈಗಾಗಲೇ ಲೆಕ್ಕ ಹಾಕಿರುವ 19 ಲಕ್ಷ ಆಸ್ತಿಗಳಲ್ಲಿ 2017-18 ನೇ ಸಾಲಿನಲ್ಲಿ 16 ಲಕ್ಷ ಆಸ್ತಿ ಮಾಲೀಕರು ತೆರಿಗೆ ಪಾವತಿಸುತ್ತಿದ್ದರು. ಇನ್ನು 3 ಲಕ್ಷ ಆಸ್ತಿಗಳಿಂದ ತೆರಿಗೆ ವಸೂಲು ಮಾಡಬೇಕಿದೆ. ಲೆಕ್ಕಕ್ಕೆ ಸಿಗದ ಆಸ್ತಿಗಳೆಂದರೆ ನಿವೇಶನಗಳಾಗಿದ್ದು ಬಿಬಿಎಂಪಿ ಅಂದಾಜಿನ ಪ್ರಕಾರ 2 ಲಕ್ಷಕ್ಕೂ ಹೆಚ್ಚು ನಿವೇಶನಗಳು ಬೆಂಗಳೂರಿನಲ್ಲಿದೆ.
ದಾಖಲೆಗಳಿಲ್ಲದ ನಿವೇಶನ ಮಾಲೀಕರನ್ನು ಪತ್ತೆ ಮಾಡಲು ಯಾವುದೇ ರೀತಿಯ ದಾಖಲೆಗಳು ಬಿಬಿಎಂಪಿಯ ಬಳಿ ಇಲ್ಲ. ಅದರಲ್ಲೂ ಹೆಚ್ಚು ನಿವೇಶನಗಳು ಹೊಸ ವಾರ್ಡ್ ಗಳಲ್ಲಿದ್ದು ಅವುಗಳ ಖಾತೆ ಮಾಡಿಕೊಂಡಿರುವುದು ಸೇರಿ ಇನ್ನಿತರೆ ದಾಖಲೆಗಳು ದೊರೆಯುತ್ತಿಲ್ಲ.
ನಿವೇಶನ ಮಾಲೀಕರು ವಿದೇಶದಲ್ಲಿ, ಬೇರೆ ಊರುಗಳಲ್ಲಿ ವಾಸಿಸುತ್ತಿರುವುದರಿಂದ ಅವರ ಪತ್ತೆಯೂ ಆಗುತ್ತಿಲ್ಲ. ಬಿಬಿಎಂಪಿ ಸ್ವತ್ತು ನಾಮಫಲಕ ಹಾಕಿದರೆ ನಿವೇಶನ ಮಾಲೀಕರು ಬಿಬಿಎಂಪಿ ಕಚೇರಿಯನ್ನು ಸಂಪರ್ಕಿಸುತ್ತಾರೆ ಎಂಬ ವಿಶ್ವಾಸವನ್ನು ಬಿಬಿಎಂಪಿ ಅಧಿಖಾರಿಗಳು ವ್ಯಕ್ತಪಡಿಸಿದ್ದಾರೆ.
-
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ












Click it and Unblock the Notifications