ಕನ್ನಹಳ್ಳಿ ತ್ಯಾಜ್ಯ ಘಟಕ ಪರಿವರ್ತಿಸಿ ವಿದ್ಯುತ್ ಘಟಕ ಸ್ಥಾಪನೆ
ಬೆಂಗಳೂರು, ಮೇ.2: ತ್ಯಾಜ್ಯದಿಂದ ಗೊಬ್ಬರ ತಯಾರಿಕಾ ಘಟಕ ತಯಾರಿಕೆ ಕ್ರಿಯೆ ವಿಳಂಬವಾಗುತ್ತಿದೆ. ಅದಕ್ಕೆ ಪರಿಹಾರವಾಗಿ ಈಗಿರುವ ಘಟಕವನ್ನು ವಿದ್ಯುತ್ ತಯಾರಿಕಾ ಘಕಟವನ್ನಾಗಿ ಪರಿವರ್ತಿಸಲು ಬಿಬಿಎಂಪಿ ಮುಂದಾಗಿದೆ.
ಇದೀಗ ಕನ್ನಹಳ್ಳಿ ತ್ಯಾಜ್ಯಘಟಕವನ್ನು ಪರಿವರ್ತಿಸಲು ಯೋಜನೆ ರೂಪಿಸಿದೆ. ಈಗಾಗಲೇ 2-3 ಬಾರಿ ಟೆಂಡರ್ ಆಹ್ವಾನಿಸಿದ್ದರೂ ಗುತ್ತಿಗೆದಾರರು ಆಸಕ್ತಿ ತೋರಿರಲಿಲ್ಲ. ಈಗ ಮರಳಿ ಯತ್ನವ ಮಾಡು ಎಂಬಂತೆ ಮತ್ತೊಮ್ಮೆ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಿದೆ.
ತ್ಯಾಜ್ಯ ಸಂಸ್ಕರಣಾ ಘಟಕ ಸುತ್ತ ಬಫರ್ ವಲಯ: 6 ಘಟಕ ಪುನರಾರಂಭ
500 ಅನ್ ಸಂಸ್ಕರಣೆ: ಕನ್ನಹಳ್ಳಿ ಘಟಕಕ್ಕೆ ಸದ್ಯ 500 ಟನ್ ತ್ಯಾಜ್ಯ ಸರಬರಾಜು ಮಾಡಲಾಗುತ್ತಿದೆ ಆ ತ್ಯಾಜ್ಯವನ್ನು ಗೊಬ್ಬರವನ್ನಾಗಿ ಮಾರ್ಡಡಿಸಲು ಕನಿಷ್ಠ 45 ದಿನ ಬೇಕು. ಆ ವೇಳೆಯಲ್ಲಿ ತ್ಯಾಜ್ಯದಿಂದ ಹೊರಹೊಮ್ಮವು ದುರ್ವಾಸನೆ ತಡೆದು ಜನರಿಗಾಗುವ ತೊಂದರೆ ನಿವಾರಿಸಲು ಬಿಬಿಎಂಪಿ ಹರಸಾಹಸ ಪಡುತ್ತಿದೆ.
ಯುರೋಪ್ ಪರಿಸರ ನಿಯಮ ಅಳವಡಿಕೆ: ತ್ಯಾಜ್ಯ ಸಂಸ್ಕರಣಾ ಘಟಕಗಳಲ್ಲಿ ಪರಿಸರ ಸಂರಕ್ಷಣೆಗೆ ಸಮರ್ಪಕ ನಿಯಮ ಪಾಲಿಸುತ್ತಿಲ್ಲ. ಹೀಗಾಗಿಯೇ ಸುತ್ತಲಿನ ಜಲ ಸಂಪನ್ಮೂಲ ಹಾಳಾಗುತ್ತಿದೆ ಎಂಬ ಮಾತುಗಳಿವೆ.
ಹೀಗಾಗಿಯೇ ಕನ್ನಹಳ್ಳಿಯಲ್ಲಿ ತ್ಯಾಜ್ಯದಿಂದ ವಿದ್ಯುತ್ ತಯಾರಿಕಾ ಘಟಕ ಸ್ಥಾಪಿಸಿರುವ ಸಂಸ್ಥೆ ಯುರೋಪಿಯನ್ ಪರಿಸರ ನಿಯಮ ಮತ್ತು ಮಾನದಂಡಗಳನ್ನು ಅಳವಡಿಸಿಕೊಳ್ಳುವಂತೆ ಸೂಚಿಸಲಾಗುತ್ತಿದೆ.