ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾಮಾಜಿಕ ಅಂತರ ಕಾಪಾಡಲು ಬನ್ನೇರುಘಟ್ಟದಲ್ಲಿ ಹೊಸ ತಂತ್ರ

|
Google Oneindia Kannada News

ಬೆಂಗಳೂರು, ಏಪ್ರಿಲ್ 29 : ಕೊರೊನಾ ದೇಶಕ್ಕೆ ಕಾಲಿಟ್ಟ ಮೇಲೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಮನವಿ ಮಾಡಲಾಗುತ್ತದೆ. ಜನರಲ್ಲಿ ಸಾಮಾಜಿಕ ಅಂತರದ ಬಗ್ಗೆ ಜಾಗೃತಿ ಮೂಡಿಸಲು ಹಲವು ಕಾರ್ಯಕ್ರಮ ರೂಪಿಸಲಾಗಿದೆ.

Recommended Video

ಸರ್ಕಾರ ಮಾಡಬೇಕಿರೋ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದ ಡಿಕೆಶಿ | DKS | Oneindia Kannada

ಲಾಕ್ ಡೌನ್ ಮುಗಿದ ಬಳಿಕವೂ ಕೆಲವು ತಿಂಗಳ ಕಾಲ ಜನರು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ಆದರೆ, ಜನರು ಇದನ್ನು ಎಷ್ಟರ ಮಟ್ಟಿಗೆ ಪಾಲನೆ ಮಾಡುತ್ತಾರೆ? ಎಂಬುದನ್ನು ಕಾದು ನೋಡಬೇಕು.

ಚೀನಾ ಶಾಲೆಯಲ್ಲಿ ಸಾಮಾಜಿಕ ಅಂತರ: ಮಕ್ಕಳ ಮೇಲೆ ಟೋಪಿ ಚೀನಾ ಶಾಲೆಯಲ್ಲಿ ಸಾಮಾಜಿಕ ಅಂತರ: ಮಕ್ಕಳ ಮೇಲೆ ಟೋಪಿ

ಬನ್ನೇರುಘಟ್ಟ ಮೃಗಾಲಯ ಲಾಕ್ ಡೌನ್ ಪರಿಣಾಮ ಈಗ ಬಂದ್ ಆಗಿದೆ. ಮೃಗಾಲಯ ಪ್ರವಾಸಿಗರಿಗೆ ತೆರೆದ ಬಳಿಕ ಸಾಮಾಜಿಕ ಅಂತರ ಕಾಪಾಡಲು ಹೊಸ ತಂತ್ರವನ್ನು ಅನುಸರಿಸಲಾಗುತ್ತಿದೆ. ಇದಕ್ಕಾಗಿ ಬಣ್ಣ-ಬಣ್ಣದ ಛತ್ರಿಗಳು ಬಂದಿವೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮಂಗಳೂರು ಕೈದಿಗಳ ಸ್ಥಳಾಂತರಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮಂಗಳೂರು ಕೈದಿಗಳ ಸ್ಥಳಾಂತರ

 Bannerghatta Park To Provide Umbrella To Maintain Social Distancing

ಲಾಕ್ ಡೌನ್ ಮುಗಿದ ಬಳಿಕ ಮೃಗಾಲಯಕ್ಕೆ ಬರುವ ಪ್ರವಾಸಿಗರಿಗೆ ಛತ್ರಿ ನೀಡಲಾಗುತ್ತದೆ. ಒಂದು ಕುಟುಂಬಕ್ಕೆ ವಿಶಿಷ್ಟ ಅಂಕಿಯ ಛತ್ರಿಯನ್ನು ನೀಡಲಾಗುತ್ತದೆ. ಜನರು ಛತ್ರಿಯನ್ನು ಬಿಚ್ಚಿ ಹಿಡಿದು ನಡೆಯುವುದರಿಂದ ಸಾಮಾಜಿಕ ಅಂತರವೂ ಪಾಲನೆಯಾಗಲಿದೆ.

ಹನುಮಂತನಿಗೂ ಕೊರೊನಾ ಭೀತಿ; ಪೂಜೆಗೆ ಸಾಮಾಜಿಕ ಅಂತರ ಹನುಮಂತನಿಗೂ ಕೊರೊನಾ ಭೀತಿ; ಪೂಜೆಗೆ ಸಾಮಾಜಿಕ ಅಂತರ

ಲಾಕ್‍ ಡೌನ್‌ಗೆ ಮುನ್ನವೂ ಬನ್ನೇರುಘಟ್ಟ ಮೃಗಾಲಯದಲ್ಲಿ ಪ್ರವಾಸಿಗರಿಗೆ ಛತ್ರಿಗಳನ್ನು ನೀಡಲಾಗುತ್ತಿತ್ತು. ಈಗ ಕೊರೊನಾ ಬಂದ ಮೇಲೆ ಛತ್ರಿಯನ್ನು ಸಾಮಾಜಿಕ ಅಂತ ಕಾಯ್ದುಕೊಳ್ಳಲು ಬಳಕೆ ಮಾಡಲು ತೀರ್ಮಾನಿಸಲಾಗಿದೆ.

 Bannerghatta Park To Provide Umbrella To Maintain Social Distancing

ಬನ್ನೇರುಘಟ್ಟ ಮೃಗಾಲಯದ ಸಿಬ್ಬಂದಿಗಳು ಛತ್ರಿ ಹಿಡಿದು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡೇ ಈಗ ಪ್ರಾಣಿಗಳ ಪಾಲನೆ ಮಾಡುತ್ತಿದ್ದಾರೆ. ಲಾಕ್ ಡೌನ್ ಮುಗಿದ ಬಳಿಕ ಬರುವ ಪ್ರವಾಸಿಗರಿಗೆ ಛತ್ರಿ ನೀಡಲಾಗುತ್ತದೆ ಎಂದು ಮೃಗಾಲಯದ ಆಡಳಿತ ಮಂಡಳಿ ಹೇಳಿದೆ.

ಕೇರಳದ ಹಲವು ಜಿಲ್ಲೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಛತ್ರಿ ಕಡ್ಡಾಯಗೊಳಿಸಲಾಗಿದೆ. ಜನರು ಅಂಗಡಿಗಳಿಗೆ ಬರುವಾಗ ಕೈಯಲ್ಲಿ ಛತ್ರಿ ಹಿಡಿದು ಬರುತ್ತಿದ್ದಾರೆ. ಇಂತಹ ವ್ಯವಸ್ಥೆಯನ್ನು ಬನ್ನೇರುಘಟ್ಟದಲ್ಲಿಯೂ ಜಾರಿಗೊಳಿಸಲಾಗುತ್ತಿದೆ.

English summary
Post lockdown umbrellas will be provided to each family group visiting the park. it will help to maintain social distancing between two groups said Bannerghatta Biological Park, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X