Get Updates
Get notified of breaking news, exclusive insights, and must-see stories!

ಕಾಲೇಜುಗಳ ವಿರುದ್ಧ ಬೆಂಗಳೂರು ವಿವಿ ಕುಲಪತಿ ಗರಂ

ಬೆಂಗಳೂರು, ಡಿ. 13: ಉತ್ತರ ಪತ್ರಿಕೆ ಮೌಲ್ಯಮಾಪನಕ್ಕೆ ಪ್ರಾಧ್ಯಾಪಕರನ್ನು ಕಳುಹಿಸಲು ಕಾಲೇಜುಗಳು ಆಸಕ್ತಿ ತೋರುತ್ತಿಲ್ಲ. ಇದರಿಂದ ಬೆಂಗಳೂರು ವಿಶ್ವವಿದ್ಯಾಲಯ ಅಸಮಾಧಾನ ವ್ಯಕ್ತಪಡಿಸಿದೆ. ಕಾಲೇಜುಗಳ ಈ ಧೋರಣೆಯನ್ನು ವಿಶ್ವವಿದ್ಯಾಲಯ ಗಂಭೀರವಾಗಿ ಪರಿಗಣಿಸಿದೆ.

ಮೌಲ್ಯಮಾಪನಕ್ಕೆ ಅಧ್ಯಾಪಕರನ್ನು ಕಳುಹಿಸದ ಕಾಲೇಜುಗಳಿಗೆ ಬೆಂಗಳೂರು ವಿವಿಯ ಸಂಯೋಜನಾ ನವೀಕರಣಕ್ಕೆ ಸ್ಥಳೀಯ ವಿಚಾರಣಾ ಸಮಿತಿ ಕಳುಹಿಸುವುದಿಲ್ಲ. ಈ ಕಾಲೇಜುಗಳ ಫಲಿತಾಂಶವನ್ನೂ ತಡೆಹಿಡಿಯಲಾಗುವುದೆಂದು ಕುಲಪತಿ ಪ್ರೊ. ಬಿ. ತಿಮ್ಮೇಗೌಡ ಎಚ್ಚರಿಕೆ ನೀಡಿದ್ದಾರೆ.

university

ಸೆಂಟ್ರಲ್ ಕಾಲೇಜು ಆವರಣದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಸಿಂಡಿಕೇಟ್ ಸಭೆ ಬಳಿಕ ಪತ್ರಕರ್ತರೊಂದಿಗೆ ಈ ವಿಷಯ ತಿಳಿಸಿದರು.

1,500 ಮೌಲ್ಯಮಾಪಕರ ಕೊರತೆ: ಮೌಲ್ಯಮಾಪನಕ್ಕೆ ಪ್ರತಿ ಬಾರಿ ಸುಮಾರು 5000 ಮೌಲ್ಯಮೌಪಕರು ಬೇಕು. ಈ ಬಾರಿ ಕೇವಲ 3,500 ಜನ ಮಾತ್ರ ಮೌಲ್ಯಮಾಪನ ನಡೆಸುತ್ತಿದ್ದಾರೆ. ಈ ಕೊರತೆಯಿಂದ ಫಲಿತಾಂಶ ಬರುವುದು ತಡವಾಗುತ್ತಿದೆ. ಆದ್ದರಿಂದ ಮೌಲ್ಯಮಾಪನ ಕಳುಹಿಸದ ಕಾಲೇಜುಗಳ ಸಂಯೋಜನೆ ಹಾಗೂ ಸಂಜೋಯನೆ ನವೀಕರಣ ನೀಡಲು ಎಲ್ಐಸಿ ಸಮಿತಿ ಕಳುಹಿಸುವುದಿಲ್ಲ ಎಂದು ಪ್ರೊ. ತಿಮ್ಮೇಗೌಡ ಸ್ಪಷ್ಟಪಡಿಸಿದ್ದಾರೆ.

ವಿಶ್ವವಿದ್ಯಾಲಯ ಜ್ಞಾನಭಾರತಿ ಆವರಣದಲ್ಲಿ ಬಿಎಂಟಿಸಿ ಡಿಪೋ ಸ್ಥಾಪನೆಗೆ 3 ಎಕರೆ, ಕನ್ನಡ ಶಾಸ್ತ್ರೀಯ ಅಧ್ಯಯನ ಕೇಂದ್ರಕ್ಕೆ 2 ಎಕರೆ ಹಾಗೂ ಎನ್‌ಸಿಸಿ ಭವನಕ್ಕೆ 2 ಎಕರೆ ಸ್ಥಳ ನೀಡಲಾಗುವುದು ಎಂದು ತಿಳಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+