ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಅಭಿವೃದ್ಧಿ ಕುರಿತು ಅಭ್ಯರ್ಥಿಗಳ ಕನಸು

By Prasad
|
Google Oneindia Kannada News

ಬಿಪ್ಯಾಕ್ 1ನೇ ಪ್ರಶ್ನೆ : ಅತಿಯಾದ ನಗರೀಕರಣದಿಂದ ಬೆಂಗಳೂರಿನ ಅಭಿವೃದ್ಧಿ ಕುಂಠಿತಗೊಂಡಿದೆ ಮತ್ತು ಬೆಂಗಳೂರಿನ ಜನತೆ ಈ ನಗರೀಕರಣದ ಬಲಿಪಶುಗಳಾಗುತ್ತಿದ್ದಾರೆ. ಈ ಸಮಸ್ಯೆಗೆ ಪರಿಹಾರವಾಗಿ ನಗರಾಭಿವೃದ್ಧಿ ಕುರಿತು ಅಭ್ಯರ್ಥಿಗಳು ಏನು ಯೋಜನೆ ಹಾಕಿಕೊಂಡಿದ್ದಾರೆ?

ಅನಂತ್ ಕುಮಾರ್ ನೀಡಿದ ಉತ್ತರಗಳು

* ಮಾಜಿ ಪ್ರಧಾನಿ ವಾಜಪೇಯಿ ಅಧಿಕಾರಾವಧಿಯಲ್ಲಿ ನಮ್ಮ ಮೆಟ್ರೋಗೆ ಚಾಲನೆ ನೀಡಲಾಗಿತ್ತು. 4ನೇ ಹಂತದ ಕಾವೇರಿ ನೀರು ಸರಬರಾಜು ಮಾಡಲು ಯೋಜನೆ ಮಂಜೂರಾಯಿತು. ಇದರಿಂದ ಬೆಂಗಳೂರಿಗೆ 500 ಎಂಎಲ್‌ಡಿ (ಮಿಲಿಟನ್ ಲೀಟರ್ ಪರ್ ಡೇ) ನೀರು ನಗರಕ್ಕೆ ದೊರೆಯಲಿದೆ.

* ವಾಜಪೇಯಿ ಕಾಲದಲ್ಲಿ ಜೆಎಚ್ ಪಟೇಲ್ ಅವರ ಸರಕಾರದೊಡನೆ ಮಾಡಿಕೊಂಡ ಒಪ್ಪಂದದಿಂದಾಗಿ ಇಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲೆಯೆತ್ತಿ ನಿಂತಿದೆ. ಈಗ ಪ್ರತಿದಿನ ಲಕ್ಷಾಂತರ ಜನರು ಬಂದುಹೋಗುತ್ತಿದ್ದಾರೆ.

Bangalore South candidates meet citizen : BPAC initiative - part2

* ಹುಡ್ಕೋ ಮಾಡಿದ ಹಣಕಾಸು ಸಹಾಯದಿಂದಾಗಿ 50ಕ್ಕೂ ಹೆಚ್ಚು ಫ್ಲೈಓವರುಗಳು, 57 ಕೆರೆಗಳು ಬೆಂಗಳೂರಿನಲ್ಲಿ ನಿರ್ಮಾಣವಾಗಿವೆ. ನಿಲೇಕಣಿ ರೂಪಿಸಿದ ನಿರ್ಮಲ ಶೌಚಾಯಲಕ್ಕೆ ಕೂಡ ಹುಡ್ಕೋ ಹಣ ನೀಡಿದೆ.

* ಬೆಂಗಳೂರು ಮತ್ತು ದೆಹಲಿ ನಡುವೆ ಬುಲೆಟ್ ರೈಲು ತರುತ್ತೇನೆ. ಇದಕ್ಕಾಗಿ ಕೇಂದ್ರದಿಂದ 10 ಸಾವಿರ ಕೋಟಿ ರು. ಮಂಜೂರು ಮಾಡಿಸುತ್ತೇನೆ. ರೈಲು ಮತ್ತು ಇಂಡಸ್ಟ್ರಿಯಲ್ ಕಾರಿಡಾರ್ ನಿರ್ಮಿಸುತ್ತೇನೆ.

ನಂದನ್ ನಿಲೇಕಣಿ ನೀಡಿದ ಉತ್ತರಗಳು

* ಬೆಂಗಳೂರು ನಗರದ ಜೀವನಾಡಿಯಾಗಿರುವ ನೀರು ಎಲ್ಲರಿಗೂ ಸಿಗಬೇಕು. ಅಂತರ್ಜಲ ಹೆಚ್ಚಾಗಬೇಕು, ನೀರಿನ ಮರುಬಳಕೆಗೆ ಚಾಲನೆ ನೀಡಬೇಕು, ಮಳೆನೀರು ಕೊಯ್ಲು ಪ್ರತಿ ಮನೆಯಲ್ಲಿ ನಿರ್ಮಾಣವಾಗಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಸಾಯುತ್ತಿರುವ ಕೆರೆಗಳು ಮತ್ತೆ ಜೀವಂತಿಕೆಯಿಂದ ಉಸಿರಾಡಬೇಕು.

* ಮೆಟ್ರೋ, ಬಸ್ ಮತ್ತು ಆಟೋ ಸಂಚಾರ ವ್ಯವಸ್ಥೆ ಏಕೀಕೃತವಾಗಬೇಕು. ಮೂರೂ ಕನೆಕ್ಟ್ ಆಗಿ, ಜನರು ಸರಾಗವಾಗಿ ಸಂಚರಿಸುವಂತಾಗಬೇಕು.

* ಉದ್ಯೋಗಕ್ಕೆ ಬಂಡವಾಳ ಹರಿದುಬರಬೇಕು. ಎಲ್ಲರೂ ಅವಕಾಶಗಳ ಬಗ್ಗೆ ಮಾತಾಡುತ್ತಾರೆ, ಆದರೆ ಜನರಿಗೆ ಕೆಲಸವೇ ಇಲ್ಲದಂತಾಗಿದೆ. ಆಧಾರ್ ಯೋಜನೆಯಲ್ಲಿ 6 ಕೋಟಿ ಜನರಿಗೆ, ಇನ್ಫೋಸಿಸ್ ನಲ್ಲಿ ಸಹಸ್ರಾರು ಜನರಿಗೆ, ಬಿಎಟಿಎಫ್ ನಲ್ಲಿ ಕೂಡ ಜನರಿಗೆ ಉದ್ಯೋಗ ಸೃಷ್ಟಿಸಿದ ಅನುಭವ ನನಗಿದೆ. ನಾನು ನೀಡಿದ ಮಾತನ್ನು ಉಳಿಸಿಕೊಳ್ಳುವಂಥ ಮನುಷ್ಯ.

ರುತ್ ಮನೋರಮಾ ನೀಡಿದ ಉತ್ತರಗಳು

* ನಗರಾಡಳಿತ ನಿರ್ವಹಣೆ ಎಲ್ಲಕ್ಕಿಂತ ಮುಖ್ಯವಾದದ್ದು. ಎಲ್ಲರಿಗೂ ಸಮವಾದ ಅವಕಾಶ ಸಿಗಬೇಕು ಮತ್ತು ಬಂಡವಾಳ ಹರಿದು ಬರಬೇಕು. ಬಡವರಿಗೆ, ಮಧ್ಯಮ ವರ್ಗದವರಿಗೆ ಮನೆ, ಜಾಗ ಸಿಗುವಂತಾಗಬೇಕು. ಇದಕ್ಕೆಲ್ಲ ಮಾಸ್ಟರ್ ಪ್ಲಾನ್ ರೂಪಿಸಬೇಕು.

* ಅನಧಿಕೃತ ನಿರ್ಮಾಣಗಳು ಬಹಳವಾಗಿವೆ. ಗೋಡೆಗಳು ನಡುವೆ ಸ್ಥಳವಿರುವುದಿಲ್ಲ, ಉಸಿರಾಡಲು ಜಾಗವಿರುವುದಿಲ್ಲ. ಒಂದರ ಮೇಲೊಂದು ಅನಧಿಕೃತವಾಗಿ ಮನೆ ಕಟ್ಟುತ್ತಲೇ ಇದ್ದಾರೆ. ಇದು ನಿಲ್ಲಬೇಕು. ಬೆಂಗಳೂರು ವಿಶ್ವದರ್ಜೆಯ ನಗರವಾಗಬೇಕು.

* ಭ್ರಷ್ಟಾಚಾರದ ಬಗ್ಗೆ ಮಾತಾಡ್ತೀವಿ, ಆದರೆ ನಾವೇ ತಗೋತೀವಿ. ಜನರ ಹಣ ಲೂಟಿ ಆಗುವುದು ನಿಲ್ಲಬೇಕು. ಭ್ರಷ್ಟಾಚಾರ ನಿಂತು ಆಡಳಿತ ಪಾರದರ್ಶಕವಾಗಿರಬೇಕು. ಅಲ್ಲದೆ, ರಸ್ತೆಯಲ್ಲಿ ಸಂಚರಿಸುವ, ಉದ್ಯೋಗಸ್ಥ ಮತ್ತು ಮನೆಯಲ್ಲಿರುವ ಮಹಿಳೆಯರು ಸುರಕ್ಷಿತವಾಗಿರಬೇಕು.

ನೀನಾ ನಾಯಕ್ ನೀಡಿದ ಉತ್ತರಗಳು

* ಬೆಂಗಳೂರಿನ ಅಭಿವೃದ್ಧಿಗಾಗಿ ಉತ್ತಮ ಮೂಲಭೂತ ಸೌಕರ್ಯ ದೊರೆಯಬೇಕು. ಇದಕ್ಕಾಗಿ ಹಣವೇನೋ ಸಾಕಷ್ಟು ಹರಿದುಬರುತ್ತಿದೆ. ಆದರೆ, ಅದರ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಪಾರದರ್ಶಕತೆ ಎಂಬುದೇ ಇಲ್ಲವಾಗಿದೆ. ಇದರ ಬಗ್ಗೆ ಯಾವ ಪಕ್ಷವೂ ಗಮನಹರಿಸಿಲ್ಲ.

* ಧಾರವಾಡ, ಹುಬ್ಬಳ್ಳಿ, ಬೆಳಗಾವಿಯಂಥ ನಗರಗಳಲ್ಲಿಯೂ ಅಭಿವೃದ್ಧಿಯಾಗಬೇಕು. ಬೆಂಗಳೂರಿನಲ್ಲಿ ಇರುವಂಥ ಉತ್ತಮ ಜೀವನಮಟ್ಟ ಉಳಿದ ನಗರಗಳಿಗೂ ಸಿಗಬೇಕು.

English summary
Bangalore Political Action Committee (BPAC) organized program to debate issues related to Bangalore South Lok Sabha Constituency ended in utter chaos as workers belonging to BJP and Congress clashed. Program was arranged in NMKRV college, which was attended by full packed audience.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X