ಆರ್ಯ ವೈಶ್ಯ ಟ್ರಸ್ಟ್ ನಿಂದ ಉನ್ನತ ಶಿಕ್ಷಣ ವಿದ್ಯಾರ್ಥಿ ವೇತನ ವಿತರಣೆ
ಬೆಂಗಳೂರು, ನವೆಂಬರ್ 29 : ಕರ್ನಾಟಕ ಆರ್ಯ ವೈಶ್ಯ ಚಾರಿಟಬಲ್ ಟ್ರಸ್ಟ್ ವಾರ್ಷಿಕ ಉನ್ನತ ಶಿಕ್ಷಣ ವಿದ್ಯಾರ್ಥಿ ವೇತನ ವಿತರಣೆ ಸಮಾರಂಭವನ್ನು ಆಯೋಜಿಸಿದೆ.
ಜಯನಗರದ ಎನ್ ಎಂಕೆ ಆರ್ ವಿ ಕಾಲೇಜು ಆವರಣದಲ್ಲಿ ಡಿ.10 ರಂದು ನಡೆಯಲಿದೆ. ಆರ್ಯ ವೈಶ್ಯ ಚಾರಿಟಬಲ್ ಟ್ರಸ್ಟ್ 2008 ರಿಂದ 2016 ರವರೆಗೆ ಕಳೆದ ಒಂಭತ್ತು ವರ್ಷಗಳಿಂದ ಸುಮಾರು 7900 ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ನೀಡಿದೆ.
200 ಜನ ದಾನಿಗಳ ಸಹಾಯದಿಂದ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಜಿಎಂಆರ್ ಗ್ರೂಪ್ ಮುಖ್ಯಸ್ಥ ಜಿ. ಮಲ್ಲಿಕಾರ್ಜುನ ರಾವ್, ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಪಿ. ಮುರಳೀಧರ ರಾವ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಏನು-ಉನ್ನತ ಶಿಕ್ಷಣ ಶಿಷ್ಯವೇತನ ವಿತರಣೆ ಸಮಾರಂಭ
ಎಲ್ಲಿ- ಎನ್ ಎಂ ಕೆ ಆರ್ ವಿ ಕಾಲೇಜು, ಆವರಣ, ಮೂರನೇ ಬ್ಲಾಕ್, ಜಯನಗರ
ಯಾವಾಗ-ಡಿಸೆಂಬರ್ 10 ಭಾನುವಾರ ಬೆಳಗ್ಗೆ10.30.












Click it and Unblock the Notifications