Anchor Aparna: ಅಪರ್ಣಾ ಸಾವು: ಮೆಟ್ರೋ ರೈಲಿಗೆ ಕನ್ನಡ ಧ್ವನಿಗೆ ಹುಡುಕಾಟ- ನಿಮ್ಮದು ಕಂಚಿನ ಕಂಠವೇ ನಿಮಗಿದೆ ಸುವರ್ಣ ಅವಕಾಶ!
ಕಳೆದ ಶುಕ್ರವಾರ ಶ್ವಾಸಕೋಶದ ಕ್ಯಾನ್ಸರ್ನಿಂದ ಖ್ಯಾತ ನಿರೂಪಕಿ ಅಪರ್ಣಾ ನಿಧನರಾಗದ್ದಾರೆ. ಇವರ ಅನುಪಸ್ಥಿತಿ ನಿಜಕ್ಕೂ ಕರ್ನಾಟಕಕ್ಕೆ ಬಹುವಾಗಿ ಕಾಡಲಿದೆ. ಅದ್ರಲ್ಲೂ ನಮ್ಮ ಮೆಟ್ರೋ ವಿಭಾಗಕ್ಕಂತೂ ಕಾಡದೆ ಇರದು. ಏಕಂದ್ರೆ ಬಿಎಂಆರ್ಸಿಎಲ್ ಕಂಚಿನ ಕಂಠವೇ ತನ್ನ ಬಳಿ ಇದೆ ಎಂಬ ಹಿಗ್ಗಿನಲ್ಲಿತ್ತು. ಆದರೆ ಈಗ ಬಿಎಂಆರ್ಸಿಎಲ್ ಸಹ ಚಿಂತೆಗೆ ಜಾರಿದೆ.
ನಮ್ಮ ಮೆಟ್ರೋದ ಹಸಿರು ಹಾಗೂ ನೇರಳೆ ಮಾರ್ಗದಲ್ಲಿ ಕನ್ನಡದಲ್ಲಿ ಕೇಳಲಾಗುತ್ತಿದ್ದ ಅಚ್ಚ ಕನ್ನಡ ಧ್ವನಿ ಈಗ ಮರೆಯಾಗಿದೆ. ಈ ಚಿಂತೆ ನಿಜಕ್ಕೂ ಬಿಎಂಆರ್ಸಿಎಲ್ ಹೊಸ ಕೆಲಸವನ್ನು ನೀಡಿದಂತಾಗಿದೆ. ಇನ್ನು ಮೆಟ್ರೋ ಹೊಸ ಮಾರ್ಗಗಳಲ್ಲಿ ಕನ್ನಡ ವಾರ್ಯ್ಗಾಗಿ ಮೆಟ್ರೋ ಅಧಿಕಾರಿಗಳು ಹೊಸ ಧ್ವನಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಇದಕ್ಕಾಗಿ ಅಧಿಕಾರಿಗಳು ಕನ್ನಡದ ಎಫ್ಎಂ ರೆಡಿಯೋದ ಜಾಕಿಗಳು, ನಿರೂಪಕರು ಹಾಗೂ ಸಿಂಗರ್ಗಳ ವಾಯ್ಸ್ಗಳ ಧ್ವನಿಗಳ ಸ್ಯಾಂಪಲ್ ಕೇಳಿದೆ ಎಂಬ ಮಾಹಿತಿ ತಿಳಿದು ಬಂದಿದೆ.

ಅಪರ್ಣಾ ಧ್ವನಿ ಬದಲಿಸುವುದು ಯಾರು?
ಈಗಾಗಲೇ ಮೆಟ್ರೋ ನಿಲ್ದಾಣಗಳಲ್ಲಿ ಕೇಳಿ ಬರಲಾಗುತ್ತಿದ್ದ ಅಪರ್ಣಾ ಅವರ ಧ್ವನಿಯನ್ನೇ ಮುಂದಿನ ಹೊಸ ಮಾರ್ಗಗಳಿಗೂ ಬಳಸಿಕೊಳ್ಳಲು ಮೆಟ್ರೋ ನಿರ್ಧರಿಸಿತ್ತು. ಆದರೆ ಅಪರ್ಣಾ ಅವರ ನಿಧನದಿಂದಾಗಿ ನಮ್ಮ ಮೆಟ್ರೋಗೆ ಹೊಸ ಧ್ವನಿ ಹುಡುಕುವುದು ದೊಡ್ಡ ತಲೆ ನೋವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಆರ್ವಿ ರೋಡ್ ನಿಂದ ಬೊಮ್ಮಸಂದ್ರ, ನಾಗಸಂದ್ರದಿಂದ ಮಾದವಾರ (ಹಳದಿ ಮಾರ್ಗ) ಸಿದ್ಧವಾಗಿದೆ. ಈ ನಿಲ್ದಾಣದಲ್ಲಿ ಯಾರು ಧ್ವನಿ ಬಳಿಸಬೇಕು ಎಂಬುದು ಸದ್ಯ ಬಿಎಂಆರ್ಸಿಎಲ್ ಚಿಂತೆಯನ್ನು ದ್ವಿಗುಣಗಳಿಸಿದೆ. ಈಗಾಗಲೆ ಹಲವು ಜನರು ತಮ್ಮ ಧ್ವನಿಯ ಸ್ಯಾಂಪಲ್ ನೀಡುವುದಾಗಿ ಸಂಸ್ಥೆಗೆ ಮನವಿ ಮಾಡಿಕೊಂಡಿದ್ದಾರೆ.
ಸದ್ಯ ಅಪರ್ಣಾ ಅವರ ಧ್ವನಿಯನ್ನು ಹೊಂದಿರುವ ಮಾರ್ಗಗಳಲ್ಲಿ ಅವುಗಳನ್ನೇ ಮುಂದುವರೆಸಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಆದರೆ ಹೊಸ ಮಾರ್ಗದಲ್ಲಿ ಯಾರಿಂದ ವಾಯ್ಸ್ ಓವರ್ ಕೊಡಿಸಬೇಕು ಎಂಬುದೇ ದೊಡ್ಡ ಸಮಸ್ಯೆ ಎಂತೆ ಪರಿಣಮಿಸಿದೆ. ಈ ಹಿನ್ನೆಲೆ ಮೆಟ್ರೋ ಉತ್ತಮ ಧ್ವನಿ ಹುಡುಕಾಟ ನಡೆಸಿದೆ.

ಅಪರ್ಣಾ ನಿಧನರಾದ ಬಳಿಕ ನಮ್ಮ ಮೆಟ್ರೋ ಸಹ ಧ್ವನಿ ನಮನ ಸಲ್ಲಿಸಿತ್ತು. ಪ್ರಯಾಣಿಕರು ಸಹ ಅಪರ್ಣಾ ಅವರ ಧ್ವನಿ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ವಾಯ್ಸ್ ಓವರ್ಗಾಗಿ ಕನ್ನಡಿಗರಿಗೆ ಅವಕಾಶ ನೀಡಬೇಕು. ಬೇರೆಯವರಿಗೆ ನೀಡಬೇಡಿ ಎಂದು ಮನವಿಯನ್ನು ಸಹ ಮಾಡಿಕೊಂಡಿದ್ದಾರೆ. ಅದೇನಾದ್ರೂ ಬೆಂಗಳೂರಿಗೆ ಬಂದ ಹೊಸ ಸಖಿಯಂತೆ ಕೈ ಹಿಡಿದು ನಡೆಸುತ್ತಿದ್ದ ವಾಯ್ಸ್ ಮಿಸ್ ಆಗಿದ್ದಂತೂ ಸುಳ್ಳು ಅಲ್ಲವೇ ಅಲ್ಲ.
-
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ?












Click it and Unblock the Notifications