ಮೊಮ್ಮಗನಿಗೆ ಸುಟ್ಟು ಹಿಂಸಿಸಿದ್ದ ಅಜ್ಜಿ ಈಗ ಜೈಲುಪಾಲು
ಬೆಂಗಳೂರು, ಆ. 30: ಅಳಿಯನ ಮೇಲಿನ ಕೋಪಕ್ಕೆ ಮೊಮ್ಮಗನನ್ನು ಸುಟ್ಟು, ಹಿಂಸೆ ಕೊಡುತ್ತಿದ್ದ ಖತರ್ನಾಕ್ ಮುದುಕಿಯೊಬ್ಬಳು ಸುದ್ದಗುಂಟೆ ಪಾಳ್ಯ ಪೊಲೀಸರ ಅತಿಥಿಯಾಗಿದ್ದಾಳೆ.
ಬೆಂಗಳೂರಿನ ಗುರಪ್ಪನಪಾಳ್ಯದಲ್ಲಿ ವಾಸವಿರುವ ಅಜ್ಜಿ ಮೊಮ್ಮಗನಿಗೆ ಮನಬಂದಂತೆ ಥಳಿಸಿದ್ದಳು. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಜೊತೆಗೆ, ಅಜ್ಜಿ ವಿರುದ್ಧ ತೀವ್ರ ಆಕ್ರೋಶವೂ ವ್ಯಕ್ತವಾಗಿತ್ತು. ಮಾನವೀಯತೆಯೇ ಇಲ್ಲದವಳಂತೆ ಪುಟಾಣಿ ಮಗುವಿನ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದ ಅಜ್ಜಿ, ಆ ಪುಟ್ಟ ಬಾಲಕನ ಕೈ ಹಾಗೂ ಮೈಮೇಲೆ ಸುಟ್ಟಿದ್ದಳು.
ಬಾಲಕನ ತಲೆಗೆ ರಾಕ್ಷಸಿಯಂತೆ ಮುಂಗೈಯಿಂದ ಮೊಟಕಿದ್ದಲ್ಲದೆ, ಬೆನ್ನಿಗೆ ಗುದ್ದುವ ದೃಶ್ಯ ಎದೆ ನಡುಗಿಸುವಂತಿತ್ತು. ತಕ್ಷಣ ಎಚ್ಚೆತ್ತು ಘಟನೆಯ ಬಗ್ಗೆ ತನಿಖೆ ಆರಂಭಿಸಿದ್ದ ಸುದ್ದಗುಂಟೆ ಪೊಲೀಸರು ಅಜ್ಜಿಯನ್ನು ಬಂಧಿಸಿದ್ದಾರೆ. ಅಜ್ಜಿ ಬಂಧನದ ಜೊತೆಗೆ ಫ್ಯಾಮಿಲಿ ಫೈಟ್ ಕೂಡ ರಿವೀಲ್ ಆಗಿದ್ದು, ಅಪ್ಪ-ಅಮ್ಮನ ಜಗಳದಲ್ಲಿ ಎಂಟ್ರಿಯಾಗಿದ್ದ ಕಿರಾತಕಿ ಮುದುಕಿ ಮಗುವನ್ನು ಹಿಂಸೆ ಮಾಡುತ್ತಿದ್ದಳು ಎಂಬುದು ಈಗ ಬೆಳಕಿಗೆ ಬಂದಿದೆ.

ಮಗು ಊಟ ಕೇಳಿದ್ದಕ್ಕೆ ಹಿಂಸೆ..?
ಬಾಲಕನ ಮೇಲೆ ಹಲ್ಲೆ ಮಾಡಿರುವ ಅಜ್ಜಿಯನ್ನು ಮುಬೀನಾ ಅಂತಾ ಗುರುತಿಸಲಾಗಿದೆ. ಬಾಲಕ ಹೆಚ್ಚು ಊಟ ಕೇಳುತ್ತಾನೆ ಎಂದು ಆತನ ಅಜ್ಜಿ ಹಲ್ಲೆ ಮಾಡಿದ್ದಳಂತೆ. ಆದರೆ ಸತ್ಯ ಬೇರೆನೇ ಇತ್ತು. ಇನ್ನು ಹಲ್ಲೆ ಬಗ್ಗೆ ಬಾಲಕನ ಅಪ್ಪಇಮ್ರಾನ್ ಪಾಷ ಪ್ರಶ್ನಿಸಿದರೆ, ನಿನ್ನ ಮಕ್ಕಳ ಜೊತೆ ಮನೆ ಖಾಲಿ ಮಾಡು ಅನ್ನುತ್ತಿದ್ದಳು. ಅನಿವಾರ್ಯವಾಗಿ ಸುಮ್ಮನಿದ್ದ ಬಾಲಕನ ತಂದೆ ವೀಡಿಯೋ ಚಿತ್ರಿಸಿಕೊಂಡಿದ್ದಾನೆ. ಇನ್ನು ಘಟನೆ ನಡೆಯುವಾಗ ಮಗುವಿನ ಅಳುವಿನ ಸದ್ದು ಕೇಳಿದ ಸ್ಥಳೀಯರು ಬಾಲಕನನ್ನು ರಕ್ಷಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿ, ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದರು.

ಲವ್ ಸ್ಟೋರಿ ಕಿಚ್ಚು ಹಚ್ಚಿತ್ತು
ಹಲ್ಲೆಗೆ ಒಳಗಾಗಿರುವ ಬಾಲಕನ ತಂದೆ ಇಮ್ರಾನ್ ಪಾಷ ಹಾಗೂ ತಾಯಿ ಅಜೀರಾ ದಂಪತಿ ಗುರಪ್ಪನಪಾಳ್ಯದಲ್ಲಿ ವಾಸವಾಗಿದ್ದರು. ಪ್ರೀತಿಸಿ ಮದುವೆಯಾಗಿದ್ದ ಇವರ ಮದುವೆ ವಿಲನ್ ಅಜ್ಜಿಗೆ ಇಷ್ಟವಿರಲಿಲ್ಲವಂತೆ. ಅತ್ತೆ ಮತ್ತು ಅಳಿಯನ ನಡುವೆ ವೈಮನಸ್ಸಿತ್ತು. ಪತ್ನಿ ಅಜೀರಾ ಕೂಡ ತಾಯಿ ಜೊತೆ ಸೇರಿ ಗಂಡನ ಜೊತೆ ಜಗಳ ಮಾಡುತ್ತಿದ್ದಳು.

ಹೆತ್ತ ಮಗುವಿನ ಮೇಲೆ ಹಲ್ಲೆ
ಬಾಲಕನ ತಂದೆ ಹಾಗೂ ತನ್ನ ಪತಿ ಇಮ್ರಾನ್ ಪಾಷ ಇಲ್ಲದಿದ್ದ ವೇಳೆ ತಾನೇ ಹೆತ್ತ ಮಗುವಿನ ಮೇಲೆ ಅಜೀರಾ ಹಲ್ಲೆ ಮಾಡಿ ಕೋಪ ತೀರಿಸಿಕೊಳ್ಳುತ್ತಿದ್ದಳಂತೆ. ಹೀಗಾಗಿಯೇ ಮಗು ಅಜ್ಜಿ ಹಾಗೂ ತಾಯಿ ಹತ್ತಿರ ಸೇರುತ್ತಿರಲಿಲ್ಲ. ಹೀಗಾಗಿ ಮತ್ತಷ್ಟು ಕೋಪಗೊಂಡಿದ್ದ ಬಾಲಕನ ತಾಯಿ ಹಾಗೂ ಅಜ್ಜಿ ಹೇಯ ಕೃತ್ಯ ನಡೆಸಿದ್ದಾರೆ.

ಹೆತ್ತ ಕರುಳು ಕರಗಲೇ ಇಲ್ಲ
ತನ್ನ ಮಗುವಿನ ಮೇಲೆ ಕಣ್ಣೆದುರೇ ಇಷ್ಟೆಲ್ಲಾ ಹಲ್ಲೆ ನಡೆಯುತ್ತಿದ್ದರೂ ತಾಯಿ ಸೈಲೆಂಟ್ ಆಗಿರುತ್ತಿದ್ದಳಂತೆ. ಮಗುವಿನ ಮೈ ಸುಟ್ಟು ಹಲ್ಲೆ ನಡೆಸುತ್ತಿದ್ದರೂ ಹೆತ್ತ ಕರುಳು ಕರಗಲಿಲ್ಲ. ಹೀನ ಕೃತ್ಯ ನೋಡುತ್ತಲೇ ಸುಮ್ಮನಿದ್ದ ಈಕೆ, ಗಂಡ ಪ್ರಶ್ನಿಸಿದರೆ ಬೆದರಿಕೆ ಹಾಕುತ್ತಿದ್ದಳು. ಮೊಮ್ಮಕ್ಕಳು ಎತ್ತಿ ಆಡಿಸಬೇಕಿದ್ದ ಅಜ್ಜಿಯೇ ಅಕ್ಷರಶಃ ರಾಕ್ಷಸಿಯಂತೆ ಮೊಮ್ಮಗನ ಮೇಲೆ ಹಲ್ಲೆ ನಡೆಸಿದ್ದಾಳೆ. ಮಗುವಿನ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಹಾಗೇ ರಾಕ್ಷಸಿ ಅಜ್ಜಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
-
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು












Click it and Unblock the Notifications