ವೈದ್ಯರಿಂದಲೇ ಬ್ಲ್ಯಾಕ್ ಫಂಗಸ್ ಔಷಧಿ ಕಳವು: ಏನಾಗುತ್ತಿದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ?
ಬೆಂಗಳೂರು, ಜೂನ್ 2: ಮೊದಲೇ ಔಷಧಿ ಅಭಾವದಿಂದ ಪರದಾಡುತ್ತಿರುವ ವೇಳೆ, ಜೀವ ಕಾಪಾಡಬೇಕಾಗಿದ್ದ ವೈದ್ಯರೇ ಆಮಿಷಕ್ಕೆ ಒಳಗಾಗಿ ಔಷಧಿಯನ್ನು ಕಳವು ಮಾಡಿದರೇ?
ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬ್ಲ್ಯಾಕ್ ಫಂಗಸ್ ರೋಗಿಗಳಿಗೆಂದು ತೆಗೆದಿಡಲಾಗಿದ್ದ ಔಷಧಿಯು ಕಳ್ಳತನವಾಗಿದ್ದು, ವಿ.ವಿ.ಪುರಂ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ವೈದ್ಯರನ್ನು ಬಿಟ್ಟು ಬೇರೆಯವರಿಗೆ ಪ್ರವೇಶವಿರದ ಸ್ಟೋರ್ ರೂಂನಲ್ಲಿ ಇಡಲಾಗಿದ್ದ ಲಿಪೋಸೋಮಲ್ ಆಂಪೊಟೆರಿಸಿನ್ ಬಿ ಔಷಧಿಯ ಹತ್ತು ವಯಾಲ್ಸ್ ಕಳುವಾಗಿದೆ.
ಆಸ್ಪತ್ರೆಯ ಮೆಡಿಕಲ್ ಆಫೀಸರ್ ಡಾ.ಶ್ರೀನಿವಾಸ್ ಅವರು ಈ ಸಂಬಂಧ ಠಾಣೆಗೆ ದೂರು ನೀಡಿದ್ದು, ಪೊಲೀಸರು ಕೆಲವು ವೈದ್ಯರನ್ನು ವಿಚಾರಣೆ ನಡೆಸಿದ್ದಾರೆ.

ಬ್ಲ್ಯಾಕ್ ಫಂಗಸ್ ರೋಗಿಗಳಿಗಾಗಿ ಈ ವಯಾಲ್ಸ್
ಬ್ಲ್ಯಾಕ್ ಫಂಗಸ್ ರೋಗಿಗಳಿಗಾಗಿ ಈ ವಯಾಲ್ಸ್ ಅನ್ನು ಸ್ಟೋರ್ ರೂಂನಲ್ಲಿ ತೆಗೆದಿಡಲಾಗಿತ್ತು. ಈ ವಯಾಲ್ಸ್ ಬೆಲೆ ಸುಮಾರು ಏಳು ಸಾವಿರ ರೂಪಾಯಿ. ಕಾಳಸಂತೆಕೋರರಿಗೆ ಈ ವಯಾಲ್ಸ್ ಮಾರಾಟವಾಗಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ವಿ ವಿ ಪುರಂ ಪೋಲಿಸರಿಂದ ವಿಚಾರಣೆ
ವಯಾಲ್ಸ್ ಇರುವ ಬಗ್ಗೆ ಮಾಹಿತಿ ವೈದ್ಯರಿಗೆ ಬಿಟ್ಟು ಇನ್ಯಾರಿಗೂ ಇರುವುದಿಲ್ಲ. ಹಾಗಾಗಿ, ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ಸೇರಿ ಈ ಕೆಲಸವನ್ನು ಮಾಡಿರಬಹುದು ಎನ್ನುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆ ಆಯಾಮದಲ್ಲಿ ವಿಚಾರಣೆಯೂ ನಡೆಯುತ್ತಿದೆ.

ವಯಾಲ್ಸ್ ಕಳವು ಮೇ 30ರಂದು ನಡೆದ ಘಟನೆಯಾಗಿದೆ
ಆಸ್ಪತ್ರೆಯ ಆಫೀಸರ್ ಡಾ.ಶ್ರೀನಿವಾಸ್ ನೀಡಿದ ದೂರಿನ ಅನ್ವಯ, ವಯಾಲ್ಸ್ ಕಳುವಾದ ದಿನ/ಸಮಯ ಯಾರು ಪಾಳಿಯಲ್ಲಿ ಇದ್ದರೋ ಅವರನ್ನು ಮೊದಲು ಪೊಲೀಸರು ವಿಚಾರಣೆ ನಡೆಸಲು ಆರಂಭಿಸಿದ್ದಾರೆ. ಇದು ಮೇ 30ರಂದು ನಡೆದ ಘಟನೆಯಾಗಿದೆ.
Recommended Video

ಹತ್ತು ವಯಾಲ್ಸ್ ಗಳು ಕಳುವಾಗಿದ್ದು ಬೆಳಕಿಗೆ ಬಂದಿದೆ
ಮೇ 30ರಂದು 'ಲಿಪೋಸೋಮಲ್ ಆಂಪೊಟೆರಿಸಿನ್ ಬಿ' ವಯಾಲ್ಸ್ 43 ಸಂಖ್ಯೆಯಲ್ಲಿದ್ದವು. ಅಂದು ರಾತ್ರಿ ಏಳೂವರೆ ಸುಮಾರಿಗೆ ವೈದ್ಯರ ಮುಂದೆಯೇ ಇದನ್ನು ಪರಿಶೀಲಿಸಿ ಲಾಕ್ ಮಾಡಲಾಗಿತ್ತು. ಇದಾದ ಸ್ವಲ್ಪ ಹೊತ್ತಿನಲ್ಲಿ ಮತ್ತೊಂದು ಪಾಳಿಯ ವೈದ್ಯರು ಬಂದು ಸ್ಟಾಕ್ ಚೆಕ್ ಮಾಡಿದಾಗ ಹತ್ತು ವಯಾಲ್ಸ್ ಗಳು ಕಳುವಾಗಿದ್ದು ಬೆಳಕಿಗೆ ಬಂದಿದೆ.
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
Lockdown: ಭಾರತದಲ್ಲಿ ಲಾಕ್ಡೌನ್ ಇಲ್ಲ: ವದಂತಿಗಳಿಗೆ ಕೇಂದ್ರ ಸರ್ಕಾರ ಸ್ಪಷ್ಟನೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು












Click it and Unblock the Notifications