ಮೋಜಿಗಾಗಿ ಹುಸಿ ಬಾಂಬ್ ಕರೆ ಮಾಡುತ್ತಿದ್ದವನ ಬಂಧನ
ಬೆಂಗಳೂರು, ಆಗಸ್ಟ್ 29: ವಿಮಾನ ನಿಲ್ದಾಣಕ್ಕೆ, ರೈಲ್ವೆ ನಿಲ್ದಾಣಕ್ಕೆ ಹುಸಿ ಬಾಂಬ್ ಕರೆ ಮಾಡಿ ಮೋಜು ಅನುಭವಿಸುತ್ತಿದ್ದ ವಿಕೃತ ಸಂತೋಷಿಯನ್ನು ಪೊಲೀಸರು ಬಂಧಿಸಿದ್ದಾರೆ.
ವಾರದ ಹಿಂದೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆ ಮಾಡಿದ್ದ ಆದಿತ್ಯರಾವ್ ಎಂಬಾತ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಈತನೇ ಎರಡು ದಿನದ ಹಿಂದೆ ಬೆಂಗಳೂರಿನ ರೈಲ್ವೆ ಸ್ಟೇಷನ್ಗೂ ಹುಸಿ ಬಾಂಬ್ ಕರೆ ಮಾಡಿದ್ದ.
ಬೆಂಗಳೂರು ಕೆಂಪೇಗೌಡ ಏರ್ಪೋರ್ಟ್ಗೆ ಬಾಂಬ್ ಬೆದರಿಕೆ ಕರೆ
ಕರೆ ಮಾಡಿದ ಸಂಖ್ಯೆ ಪತ್ತೆ ಮಾಡಿ ಆರೋಪಿಯನ್ನು ಹುಡುಕಿದ್ದ ವಿಮಾನ ನಿಲ್ದಾಣ ಪೋಲೀಸರು ಬೈಯಪ್ಪನಹಳ್ಳಿ ಮೆಟ್ರೋ ಬಳಿ ಆದಿತ್ಯರಾವ್ನನ್ನು ಬಂಧಿಸಿದ್ದಾರೆ.
ಆದಿತ್ಯರಾವ್ ಮೋಜಿಗಾಗಿ ಈ ರೀತಿ ಕರೆ ಮಾಡಿದ್ದಾಗಿ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಆದರೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಏರ್ಪೋರ್ಟ್ನಲ್ಲಿ ಕಳೆದ ವಸ್ತುಗಳನ್ನು ಪಡೆಯಲು ಹೀಗೆ ಮಾಡಿ
ಆದಿತ್ಯರಾವ್ನ ಹುಸಿ ಬಾಂಬ್ ಕರೆಯಿಂದಾಗಿ ಏರ್ಪೋರ್ಟ್ಗೆ ಬಹಳ ನಷ್ಟವಾಗಿದೆ. ಹಲವು ವಿಮಾನಗಳನ್ನು ರದ್ದು ಮಾಡಲಾಗಿದೆ. ಸಿಬ್ಬಂದಿಯನ್ನು ಸಹ ಆತಂಕಕ್ಕೆ ತಳ್ಳಿತ್ತು ಈ ಹುಸಿ ಬಾಂಬ್ ಕರೆಗಳು.