Get Updates
Get notified of breaking news, exclusive insights, and must-see stories!

Benagalur: ಕೇರಳದಿಂದ ಬೆಂಗಳೂರಿಗೆ ವಲಸೆ ಬರುವವರ ಸಂಖ್ಯೆ ಶೇ.45, ಏನಿದು ಚರ್ಚೆ!

ಬೆಂಗಳೂರು: ಬೆಂಗಳೂರಿಗೆ ಉತ್ತರ ಭಾರತದ ರಾಜ್ಯಗಳಿಂದ ಹಾಗೂ ದಕ್ಷಿಣ ಭಾರತದ ವಿವಿಧ ರಾಜ್ಯಗಳಿಂದ ವಲಸೆ ಬರುವವರ ಸಂಖ್ಯೆ ಹೆಚ್ಚಳವಾಗುತ್ತಲೇ ಇದೆ. ಇದೀಗ ಕೇರಳದಿಂದ ಬೆಂಗಳೂರಿಗೆ ಬರುವವರ ಸಂಖ್ಯೆಯಲ್ಲಿ ಅದರಲ್ಲೂ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಈ ರೀತಿ ಬಂದವರಲ್ಲಿ ಹಲವರು ವಿದ್ಯಾಭ್ಯಾಸ ಮುಗಿದ ಮೇಲೂ ಹಿಂದಿರುಗುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ಇದಕ್ಕೆ ಪ್ರತಿಕ್ರಿಯೆ ಉದ್ಯಮಿ ಮೋಹನ್ ದಾಸ್ ಪೈ ಅವರು ಸಹ ದನಿಗೂಡಿಸಿದ್ದಾರೆ. ಏನಿದು ಚರ್ಚೆ ಬೆಂಗಳೂರಿಗೆ ಯಾವ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ ಎನ್ನುವ ವಿವರ ಇಲ್ಲಿದೆ.

ಬೆಂಗಳೂರು ಹಾಗೂ ವಿವಿಧ ನಗರಗಳ ನಡುವಿನ ಪೈಪೋಟಿ ಹಾಗೂ ಬೆಂಗಳೂರಿಗೆ ವಲಸಿಗರ ಸಂಖ್ಯೆ ಹೆಚ್ಚಳ ವಿಚಾರವು ಇತ್ತೀಚಿನ ದಿನಗಳಲ್ಲಿ ಭಾರೀ ಚರ್ಚೆ ಆಗುತ್ತಿದೆ. ಅಲ್ಲದೇ ಬೆಂಗಳೂರಿಗೆ ಹೊರಗಿನಿಂದ ಬರುವವರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಮೂಲಸೌಕರ್ಯದ ಮೇಲೆ ಒತ್ತಡ ಹೆಚ್ಚಾಗುತ್ತಿದೆ ಎನ್ನುವ ಆತಂಕವೂ ಶುರುವಾಗಿದೆ. ಇದರೊಂದಿಗೆ ಬೆಂಗಳೂರಿನಲ್ಲಿ ಕೆಲ ಪರಭಾಷಿಕರು ಭಾಷಾ ವಿವಾದ ಸೃಷ್ಟಿ ಮಾಡುತ್ತಿದ್ದು. ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಈ ನಡುವೆ ಕೇರಳದಿಂದ ವಲಸೆ ಹೋಗುವವರಲ್ಲಿ ಶೇ.45 ರಷ್ಟು ಜನರು ಕರ್ನಾಟಕಕ್ಕೆ ಬರುತ್ತಾರೆ. ಅದರಲ್ಲಿ ವಿದ್ಯಾರ್ಥಿಗಳೇ ಹೆಚ್ಚು ಎನ್ನುವ ಡೇಟಾ ಚರ್ಚೆಗೆ ಕಾರಣವಾಗಿದೆ. ಆದರೆ ಒಟ್ಟಾರೆ ಪ್ರಮಾಣದಲ್ಲಿ ಮಲಯಾಳಿಗಳಿಗಿಂತಲೂ ತೆಲುಗು ಹಾಗೂ ತಮಿಳು ಭಾಷಿಕರು ಬೆಂಗಳೂರಿಗೆ ವಲಸೆ ಬರುವ ಪ್ರಮಾಣ ಹೆಚ್ಚಾಗಿದೆ. ಇದರ ವಿವರ ನೋಡೋಣ.

45 of Kerala s Migrants Choose Karnataka as Their Destination Social Media Discussion

ಪಿಣರಾಯಿ ವಿಜಯನ್‌ಗೆ ಮೋಹನ್‌ದಾಸ್‌ಪೈ ಕ್ಲಾಸ್

ಇನ್ನು ಬೆಂಗಳೂರಿಗೆ ಕೇರಳದಿಂದ ವಲಸೆ ಬರುವವರ ಸಂಖ್ಯೆ ಹೆಚ್ಚಳವಾಗಿದೆ ಎನ್ನುವ ಟ್ವೀಟ್ ಹಂಚಿಕೊಂಡಿರುವ ಉದ್ಯಮಿ ಮೋಹನ್‌ದಾಸ್ ಪೈ ಅವರು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಸರ್ಕಾರದ ದೊಡ್ಡ ವೈಫಲ್ಯ.

ಕೇರಳದಿಂದ ಜನ ವಲಸೆ ಹೋಗುವ ಪ್ರಮಾಣ ಯಾಕೆ ಹೆಚ್ಚಳವಾಗಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಕೇರಳದ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್‌ ಚಂದ್ರಶೇಖರ್ ಅವರಿಗೂ ಟ್ಯಾಗ್‌ ಮಾಡಲಾಗಿದ್ದು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಯುವಕರು ಯಾಕೆ ಕೇರಳ ತೊರೆಯುತ್ತಿದ್ದರೆ, ಭವಿಷ್ಯವೇನು ಎಂದು ಪ್ರಶ್ನೆ ಮಾಡಿದ್ದಾರೆ.

ವೈರಲ್ ಆಗಿರುವ ಡೇಟಾದಲ್ಲಿ ಏನಿದೆ ?

ಇನ್ನು ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಟ್ವೀಟ್‌ನಲ್ಲಿ 2023ರ ಲಿಂಗವಾರು ವಲಸಿಗರ ಪ್ರಮಾಣದ್ದು ಎಂದು ಹೇಳಲಾಗಿದೆ. ಕೇರಳದಿಂದ ಹೆಚ್ಚಿನ ಸಂಖ್ಯೆಯ ವಲಸೆಗಾರು ಕರ್ನಾಟಕಕ್ಕೆ (45.2 ಪ್ರತಿಶತ) ಬರುತ್ತಿದ್ದಾರೆ. ಕೇರಳದಿಂದ ವಲಸೆ ಬರುವವರು ಕರ್ನಾಟಕ, ತಮಿಳುನಾಡು ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ಹೋಗುತ್ತಿದ್ದಾರೆ. ಒಟ್ಟು ಅಂದಾಜು 218,386 ವಲಸಿಗರು, ಅಂದರೆ ಒಟ್ಟು ಆಂತರಿಕ ವಲಸೆಗಾರರಲ್ಲಿ ಶೇ. 45.2 ರಷ್ಟು ಕರ್ನಾಟಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ನಂತರ ತಮಿಳುನಾಡು 79,697 (ಶೇ. 16.6) ಮತ್ತು ಮಹಾರಾಷ್ಟ್ರ 48,868 (ಶೇ. 10.5) ಇವೆ. ಕಡಿಮೆ ಪ್ರಮಾಣದಲ್ಲಿ ವಲಸೆ ಬರುವವರಿರುವ ತಾಣಗಳಲ್ಲಿ ನಾಗಾಲ್ಯಾಂಡ್ (ಶೇ. 0.2), ಸಿಕ್ಕಿಂ (ಶೇ. 0.2), ಮಣಿಪುರ (ಶೇ. 0.1) ಮತ್ತು ಮೇಘಾಲಯ (ಶೇ. 0.1) ಸೇರಿವೆ. ರಾಷ್ಟ್ರ ರಾಜಧಾನಿ ದೆಹಲಿ ಕೂಡ ಪ್ರಮುಖ ಪ್ರದೇಶಗಳಲ್ಲಿ ಒಂದಾಗಿದೆ. ಅಂದಾಜು 25,584 (ಶೇ. 5.3) ವಲಸಿಗರು ಈ ಪ್ರದೇಶಕ್ಕೆ ಬರುತ್ತಿದ್ದಾರೆ ಎಂದು ಹೇಳಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+