ಒಂದೇ ದಿನ 13 ರೈತರ ಆತ್ಮಹತ್ಯೆ, ಸಾವಿನಲ್ಲೂ ರಾಜ್ಯ ಹೊಸ ದಾಖಲೆ
ಬೆಂಗಳೂರು, ಜುಲೈ, 25 : ರಾಜ್ಯದಲ್ಲಿ ಒಂದೇ ದಿನ 13 ಜನ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.. ಸಾವಿನ ಸಂಖ್ಯೆಯಲ್ಲಿಯೂ ರಾಜ್ಯ ದಾಖಲೆ ಮಾಡಲು ಹೊರಟಿದ್ದು, ಒಂದೇ ದಿನ 13 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಇದೇ ಮೊದಲು. ಅಲ್ಲದೇ ಶನಿವಾರವೂ ಕೂಡ ರೈತರ ಸಾವು ಮುಂದುವರೆದಿದೆ.
ಸಾಲಬಾಧೆ, ಬೆಲೆ ಕುಸಿತ, ಕೈಕೊಟ್ಟ ಬೆಳೆ, ಸಾಮಾಜಿಕ ಅವಮಾನ ತಾಳಲಾರದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದು ಒಂದೆಡೆಯಾದರೆ, ರಾಜಕೀಯ ಪಕ್ಷಗಳು, ಸರ್ಕಾರ, ಭಾಷಣ, ಭೇಟಿಯಲ್ಲಿಯೇ ಮುಳುಗಿ, ಸಾವಿನ ಸಂಖ್ಯೆ ಕಡಿಮೆ ಮಾಡುವಲ್ಲಿ ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಸರ್ಕಾರ ನಿರ್ಲಕ್ಷ್ಯ ಭಾವ ತಳೆದಿರುವುದಕ್ಕೆ ಸಾಕ್ಷಿಯಾಗಿದೆ.[ಹವ್ಯಾಸಿ ಕೃಷಿಕರಿಗಾಗಿ ಫೇಸ್ ಬುಕ್ ವೇದಿಕೆಯಿಂದ ಕರೆ]

ರಾಜ್ಯದ 13 ಕೃಷಿಕರ ಸಾವನ್ನಪ್ಪಿದ್ದು, ಶುಭ ಶುಕ್ರವಾರ ಅಶುಭತೆಯನ್ನು ನೀಡಿದ್ದು 13 ಮಂದಿ ರೈತರ ಮನೆಯಲ್ಲಿ ಸೂತಕದ ವಾತಾವರಣ ಸೃಷ್ಟಿಸಿದ್ದು, ಸ್ಮಶಾನ ಮೌನ ಮಡುಗಟ್ಟಿದೆ.
ಎಲ್ಲೆಲ್ಲಿ, ಯಾರು, ಎಷ್ಟು ಮಂದಿ ?
ಕೊಪ್ಪಳದಲ್ಲಿ ಮಲ್ಲಯ್ಯ, ವೆಂಕಟ ನಾರಾಯಣ, ಮೈಸೂರಿನಲ್ಲಿ ಮಂಜುನಾಥ್, ಜಗದೀಶ್, ಶಿವರಾಜೇಗೌಡ, ಬೆಳಗಾವಿಯಲ್ಲಿ ಈರಪ್ಪ ಬಸವಂತಪ್ಪ, ರಾಮನಗರದಲ್ಲಿ ರಮೇಶ್, ಮಂಡ್ಯದಲ್ಲಿ ಪುಟ್ಟಸ್ವಾಮಿ, ವಿಜಯಪುರ(ಬಿಜಾಪುರ)ದಲ್ಲಿ ಶಂಕರಗೌಡ, ಮಹದೇವಪ್ಪ ಗೌಡ, ಬಳ್ಳಾರಿಯಲ್ಲಿ ಎಲ್ ಜೆಮ್ಲಾನಾಯ್ಕ್, ಚಾಮರಾಜನಗರದಲ್ಲಿ ಮರಿಸ್ವಾಮಿ, ಹಾಸನದಲ್ಲಿ ಸಹದೇವ ಎಂಬುವವರು ಶುಕ್ರವಾರ ಸಾವನ್ನಪ್ಪಿದ ರೈತರು.[ರೈತನಿಗೆ ಗುಣಮಟ್ಟದ ಬೀಜ ಒದಗಿಸುವ 'ಬಿಗ್ ಹ್ಯಾಟ್']
2 ತಿಂಗಳಿನಿಂದ (ಜೂನ್ 1ರಿಂದ ಜುಲೈ 25ರವರೆಗೆ) ರೈತರ ಆತ್ಮಹತ್ಯೆ ಸಂಖ್ಯೆ:
ಹಾವೇರಿ- 14, ಗದಗ- 06, ಧಾರವಾಡ- 05, ಬೆಳಗಾವಿ-04, ಉತ್ತರಕನ್ನಡ- 01, ಶಿವಮೊಗ್ಗ- 03, ಚಿಕ್ಕಮಗಳೂರು- 05, ವಿಜಯಪುರ- 05, ಬಾಗಲಕೋಟೆ- 05, ದಾವಣಗೆರೆ- 03, ಚಿತ್ರದುರ್ಗ- 08, ರಾಯಚೂರು- 06, ಬಳ್ಳಾರಿ- 04, ಚಾಮರಾಜನಗರ- 03, ಹಾಸನ- 07, ಮಂಡ್ಯ-29, ಮೈಸೂರು- 13, ಕೊಡಗು- 01, ಬೀದರ್-05, ಕಲಬುರಗಿ- 06, ಯಾದಗಿರಿ- 03, ರಾಮನಗರ- 01. ಒಟ್ಟು 137 ಮಂದಿ ರೈತರು ಇದುವರೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಯಾವ ವರ್ಷ ಎಷ್ಟು ಸಾವು?
2010-11 - 243
2011-12 - 187
2013-14 - 130
2014-15 - 61
-
ಔಷಧಿ ಪೂರೈಸುವ ಕೆಸ್ಎಂಸಿಎಲ್ಗೆ ಐಎಎಸ್ ಅಧಿಕಾರಿ ಮುಖ್ಯಸ್ಥ, ಇ-ಔಷಧಿ ಸಾಫ್ಟವೇರ್ ಜಾರಿ: ದಿನೇಶ್ ಗುಂಡೂರಾವ್ -
Ugadi 2026: ಹಬ್ಬದ ಕಳೆ ಹೆಚ್ಚಿಸುವ ಸುಂದರ ರಂಗೋಲಿಗಳು; ಸರಳ, ಚುಕ್ಕಿ ಹಾಗೂ ಬಣ್ಣದ ರಂಗೋಲಿ ಐಡಿಯಾ ಇಲ್ಲಿದೆ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ












Click it and Unblock the Notifications