10 ದಿನದೊಳಗೆ ಬೆಳ್ಳಂದೂರು ಕೆರೆ ಉಳಿಸುವ ಪ್ಲ್ಯಾನ್ ನೀಡಲು ಸೂಚನೆ
ನವದೆಹಲಿ, ಆಗಸ್ಟ್ 23: ಬೆಳ್ಳಂದೂರು ಕೆರೆ ಪುನರುಜ್ಜೀವನಕ್ಕೆ ನಿರಾಸಕ್ತಿ ತೋರಿಸುತ್ತಿರುವ ಕರ್ನಾಟಕ ಸರಕಾರದ ಬಗ್ಗೆ ಆಕ್ರೋಶಗೊಂಡಿರುವ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಮುಂದಿನ ಹತ್ತು ದಿನಗಳ ಒಳಗೆ ಕೆರೆ ಪುನರುಜ್ಜೀವನದ ಸಂಪೂರ್ಣ ಯೋಜನೆಯ ವಿವರ ಸಲ್ಲಿಸುವಂತೆ ಖಡಕ್ ಸೂಚನೆ ನೀಡಿದೆ.
ಮಂಗಳವಾರ ವಿಚಾರಣೆ ನಡೆಸುದ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ (ಎನ್'ಜಿಟಿ) ಈ ಆದೇಶ ನೀಡಿದೆ. ಕೆರೆ ಉಳಿಸುವ ಸಂಬಂಧ ಸರಕಾರದ ಯೋಜನೆಗಳ ಸಂಪೂರ್ಣ ವಿವರಗಳನ್ನು ಸಲ್ಲಿಸುವಂತೆ ಸೂಚಿಸಿ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 10ಕ್ಕೆ ಮುಂದೂಡಿದೆ.

ಇನ್ನು ವಿಚಾರಣೆ ವೇಳೆ ಹಾಜರಾದ ಕರ್ನಾಟಕ ಸರಕಾರದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆದಿತ್ಯ ಸೋಧಿ, ಕೆರೆ ಸುತ್ತಮುತ್ತಲಿನ ಕಸವನ್ನು ಸರಕಾರ ತೆರವು ಮಾಡಿದೆ. ಆದರೆ ಕೆರೆಗೆ ಬಂದು ಸೇರುತ್ತಿರುವ 480 ಮಿಲಿಯನ್ ಲೀಟರ್ಸ್ ಪರ್ ಡೇ (ಎಂಎಲ್ ಡಿ) ಕೊಳಚೆ ನೀರಲ್ಲಿ ಕೇವಲ 308 ಎಂಎಲ್ ಡಿ ನೀರನ್ನು ಮಾತ್ರ ಶುದ್ಧೀಕರಿಸಲು ಸಾಧ್ಯವಾಗಿದೆ. ಹೀಗಾಗಿ ಕೆರೆ ಶುದ್ಧೀಕರಣ ಸಾಧ್ಯವಾಗಿಲ್ಲ ಎಂಬ ಮಾಹಿತಿ ನೀಡಿದರು.












Click it and Unblock the Notifications