ಬೆಳಗಾವಿ ಕಾಂಗ್ರೆಸ್ ನಾಯಕರ ಸಭೆ: ಸತೀಶ್ ಜಾರಕಿಹೊಳಿ ಹೇಳಿದ್ದೇನು?
ಬೆಂಗಳೂರು, ಜನವರಿ 03: ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಒಟ್ಟು 35 ಶಾಸಕರ ಸಮ್ಮುಖದಲ್ಲಿ ಬೆಳಗಾವಿ ಸಚಿವರ ಮನೆಯಲ್ಲಿಯೇ ಸಭೆ ನಡೆದಿತ್ತು. ಡಿಸಿಎಂ ಡಿಕೆ ಶಿವಕುಮಾರ್ ಅವರು ವಿದೇಶದಲ್ಲಿರುವಾಗ ನಡೆದ ಈ ಸಭೆಯು ರಾಜಕಾರಣದಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿದೆ. ಇದೀಗ ಈ ಬಗ್ಗೆ ಸ್ವತಃ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.
ಮುಖ್ಯಮಂತ್ರಿಗಳು ನಮ್ಮ ಮನೆಗೆ ಬರುವುದು, ಬೆಳಗಾವಿಗೆ ಬರುವುದು ಹೊಸದೇನಲ್ಲ. ಅನೇಕ ಬಾರಿ ಸಿಎಂ ಸಿದ್ದರಾಮಯ್ಯ ಅವರು ನಮ್ಮ ಮನೆಗೆ ಬಂದಿದ್ದಾರೆ. ನಾವು ಬೇರೆ ಬೇರೆ ಕಡೆ ಹೋಗಿರುತ್ತೇವೆ. ಅಲ್ಲದೇ ಹೊಸ ವರ್ಷವಾದ್ದರಿಂದ ಎಲ್ಲರೂ ಸಿಕ್ಕು, ಕೂಡಬೇಕು ಎಂಬ ಕಾರಣಕ್ಕೆ ಸಿಕ್ಕಿದ್ದೇವೆ ಹೊರತು ಬೇರೆನು ಅಲ್ಲ ಎಂದಿದ್ದಾರೆ.

ಮುಖ್ಯಮಂತ್ರಿಗಳನ್ನು, ಕೆಪಿಸಿಸಿ ಅಧ್ಯಕ್ಷರನ್ನು ಬದಲಾವಣೆ ಮಾಡುವ ಬಗ್ಗೆ ನಮಗೆ ಗೊತ್ತಿಲ್ಲ. ಎಲ್ಲರೂ ಕೂಡಿದ ಮೇಲೆ ರಾಜಕೀಯ ಬಗ್ಗೆ, ಸಂಘಟನೆ ಬಗ್ಗೆ ಸ್ವಾಭಾವಿಕವಾಗಿ ಚರ್ಚೆ ನಡೆದೆ ನಡೆದಿರುತ್ತದೆ. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಮುಂದಿನ ಬಾರಿ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರಬೇಕು ಎಂಬುದರ ಕುರಿತು ಚರ್ಚೆ ಆಗಿದೆ. ಒಂದೇ ಹುದ್ದೆ ಇರಬೇಕು ಎಂದೇನಿಲ್ಲ. ಯಾರಿಗೆ ಸಾಮರ್ಥ್ಯ ಇದೆಯೋ ಅವರಿಗೆ ಆಯಾ ಹುದ್ದೆ ನೀಡಬಹುದು. ಈಗಾಗಲೇ ಡಿಕೆ ಶಿವಕುಮಾರ್ ಒಬ್ಬರಿಗೆ ಒಂದೇ ಹುದ್ದೆ ಎಂದು ಮಾಡಿದ್ದಾರೆ. ಇದರಲ್ಲಿ ಬದಲಾವಣೆ ಏನು ಇಲ್ಲ ಎಂದರು.
ಯಾವುದೇ ಹಂತದಲ್ಲಿ ನಮ್ಮಗಳ ನಿರ್ಧಾರ ಏನು ಇಲ್ಲ. ಪಕ್ಷ ಕೈಗೊಂಡ ನಿರ್ಧಾರಕ್ಕೆ ಬದ್ಧ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಕುರಿತು ನೆನ್ನೆ ಸಭೆಯಲ್ಲಿ ಯಾವುದೇ ಸಭೆ ನಡೆಸಿಲ್ಲ. ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆ ಬಂದಿಲ್ಲ. ನಮ್ಮನ್ನು ಹೈಕಮಾಂಡ್ ಕರೆದಾಗಲೂ ಚರ್ಚೆ ಮಾಡಬೇಕಾಗುತ್ತದೆ. ಚರ್ಚೆ ಮಾಡಿ ನಿರ್ಧಾರ ಮಾಡಬೇಕಾಗುತ್ತದೆ. ಸದ್ಯ ರಾಜ್ಯ ಕೆಪಿಸಿಸಿ ಅಧ್ಯಕ್ಷರೇ ಇದ್ದಾರೆ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆ ಬಗ್ಗೆ ಮುಖ್ಯಮಂತ್ರಿಗಳು ಹೈಕಮಾಂಡ್ ನಾಯಕರ ಜೊತೆಗೆ ಮಾಡಬೇಕು. ಇದು ಅವರ ಜವಾಬ್ದಾರಿ. ಅಹಿಂದ ನಾಯಕರು ಎಂದೇನಿಲ್ಲ, ಸಚಿವ ಸಂಪುಟ ಸಭೆ ನಂತರ ದಿಢೀರ್ ಸಭೆ ನಡೆಸಲಾಯಿತು. ಕೆಲವರು ವಿದೇಶಿ ಟೂರ್ ಗೆ ಹೋಗಿದ್ದಾರೆ ಬರಲು ಆಗಿಲ್ಲ. ಈ ರೀತಿ ಏಳೆಂಟು ಬಾರಿ ಊಟಕ್ಕೆ ಸೇರಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.












Click it and Unblock the Notifications