ಚಿಕ್ಕೋಡಿಯಲ್ಲಿ ಹುಕ್ಕೇರಿ ಭರ್ಜರಿ ಮತಬೇಟೆ
ಬೆಳಗಾವಿ, ಏ. 3 : ತಾನು ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹಠ ಹಿಡಿದು, ಕೊನೆಗೆ ನಾಯಕರ ಒತ್ತಾಯದ ಮೇಲೆ ಚುನಾವಣೆಗೆ ಸ್ಪರ್ಧಿಸಿರುವ ಸಚಿವ ಪ್ರಕಾಶ್ ಹುಕ್ಕೇರಿ ಚಿಕ್ಕೋಡಿ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಕಾರ್ಯಕರ್ತರು ಸಹ ಅವರೊಂದಿಗೆ ಕೈ ಜೋಡಿಸಿದ್ದು ಪ್ರಚಾರದಲ್ಲಿ ಇತರ ಪಕ್ಷಗಳಿಗಿಂತ ಅವರು ಮುಂದಿದ್ದಾರೆ.
ಸಕ್ಕರೆ ಮತ್ತು ಸಣ್ಣ ಕೈಗಾರಿಕಾ ಸಚಿವ ಪ್ರಕಾಶ್ ಹುಕ್ಕೇರಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಹುಕ್ಕೇರಿ ಪುತ್ರ ಗಣೇಶ್ ಹುಕ್ಕೇರಿ ಸಹ ತಂದೆಯ ಬೆಂಬಲಕ್ಕೆ ನಿಂತು ಕ್ಷೇತ್ರದ ತುಂಬಾ ಪ್ರಚಾರ ಕೈಗೊಂಡಿದ್ದಾರೆ. ಚಿತ್ರಗಳಲ್ಲಿ ನೋಡಿ ಹುಕ್ಕೇರಿ ಪ್ರಚಾರ [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ನಿಪ್ಪಾಣಿಯಲ್ಲಿ ಹುಕ್ಕೇರಿ ಪಾದಯಾತ್ರೆ
ಚಿಕ್ಕೋಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ನಿಪ್ಪಾಣಿಯಲ್ಲಿ ಪಾದಯಾತ್ರೆ ನಡೆಸುವ ಮೂಲಕ ಪ್ರಚಾರ ನಡೆಸಿದರು. ಹಲವಾರು ಸ್ಥಳೀಯ ಕಾಂಗ್ರೆಸ್ ನಾಯಕರು ಹುಕ್ಕೇರಿ ಅವರ ಜೊತೆ ಪಾಲ್ಗೊಂಡಿದ್ದರು.

ಮನೆ-ಮನೆ ಭೇಟಿ
ಪ್ರಕಾಶ್ ಹುಕ್ಕೇರಿ ಕಂಕನವಾಡಿಯಲ್ಲಿ ಮನೆ-ಮನೆ ಪ್ರಚಾರ ನಡೆಸಿದರು ನಂತರ ಗ್ರಾಮಸ್ಥರ ಸಭೆ ನಡೆಸಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸುವಂತೆ ಮನವಿ ಮಾಡಿದರು.

ಜಾರಕಿಹೊಳಿ ಬೆಂಬಲ
ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಪ್ರಕಾಶ್ ಹುಕ್ಕೇರಿ ಅವರ ಬೆಂಬಲಕ್ಕೆ ನಿಂತಿದ್ದಾರೆ. ನಿಪ್ಪಾಣಿಯಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಜಾರಕಿಹೊಳಿ ಹುಕ್ಕೇರಿ ಪರವಾಗಿ ಮತ ಯಾಚಿಸಿದರು.

ಪ್ರತಿಸ್ಪರ್ಧಿಗಳು
ಚಿಕ್ಕೋಡಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ರಮೇಶ್ ಕತ್ತಿ ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಪ್ರಕಾಶ್ ಹುಕ್ಕೇರಿ ಕಣಕ್ಕೆ ಇಳಿದಿದ್ದರೆ, ಶ್ರೀಮಂತ ಪಾಟೀಲ್ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ. ಕತ್ತಿ ಮತ್ತು ಹುಕ್ಕೇರಿ ಕುಟುಂಬದ ನಡುವಿನ ಪೈಪೋಟಿ ಎಂದು ಚುನವಣೆಯನ್ನು ಬಿಂಬಿಸಲಾಗುತ್ತಿದೆ.

ಹಳೆ ಹುಲಿಗಳು
ಪ್ರಕಾಶ್ ಹುಕ್ಕೇರಿ ಮತ್ತು ರಮೇಶ್ ಕತ್ತಿ 2009ರ ಚುನಾವಣೆಯಲ್ಲಿಯೂ ಮುಖಾಮುಖಿಯಾಗಿದ್ದರು. ಸದ್ಯ ಮತ್ತೊಮ್ಮೆ 2014ರ ಚುನಾವಣೆಯಲ್ಲಿಯೂ ಎದುರಾಳಿಗಳಾಗಿದ್ದಾರೆ. ಪಕ್ಷದಿಂದ ಟಿಕೆಟ್ ನೀಡಿದರೂ ತಾವು ಸ್ಪರ್ಧಿಸುವುದಿಲ್ಲ ಎಂದ ಹಠ ಹಿಡಿದಿದ್ದ ಹುಕ್ಕೇರಿ, ಕೊನೆ ಕ್ಷಣದಲ್ಲಿ ನಾಯಕರ ಒತ್ತಾಯಕ್ಕೆ ಮಣಿದು ಚುನಾವಣೆ ಅಖಾಡಕ್ಕೆ ಧುಮುಕಿದ್ದಾರೆ.












Click it and Unblock the Notifications