Get Updates
Get notified of breaking news, exclusive insights, and must-see stories!

ಬೆಳಗಾವಿ : ಭಾರಿ ಕಾವೇರಲಿದೆ ಕಲಾಪ

ಬೆಳಗಾವಿ, ನವೆಂಬರ್ 23 : ಚಳಿಗಾಲದ ಅಧಿವೇಶನ ಇಂದು (ನವೆಂಬರ್ 23) ಎರಡೂ ಸದನದಲ್ಲಿ ಚರ್ಚೆ ಕಾವೇರುವ ಸಂಭವವಿದೆ.

ಅಧಿವೇಶನದ ಪ್ರಮುಖ ಉದ್ದೇಶಗಳಲ್ಲೊಂದಾದ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಬಗ್ಗೆ, ಹಾಗೂ ಇನ್ನಿತರ ವಿಷಯಗಳ ಬಗ್ಗೆ ಉಭಯ ಸದನದಲ್ಲಿ ಮುಖ್ಯಮಂತ್ರಿಗಳು ಸುದೀರ್ಘ ಉತ್ತರ ನಿಡಲಿದ್ದಾರೆ.

ಚಿತ್ರಗಳು : ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ

Estimated high debate final day of winter session

ನಿನ್ನೆ (ನವೆಂಬರ್ 22) ವಿಧಾನಸಭೆಯಲ್ಲಿ ಅಂಗೀಕಾರವಾದ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಕಾಯ್ದೆ ಮತ್ತು ಬಡ್ತಿ ಮೀಸಲಾತಿ ಕಾಯ್ದೆ ವಿಧಾನಪರಿಷತ್ ನಲ್ಲಿ ಇಂದು (ನವೆಂಬರ್ 23) ಮಂಡನೆ ಆಗಲಿದೆ.

ಇಂದು ಸದನದಲ್ಲಿ ಭಾರಿ ಚರ್ಚೆ, ವಾಗ್ವಾದಗಳು ಜರುಗುವ ಎಲ್ಲ ಮುನ್ಸೂಚನೆಗಳೂ ಇವೆ. ಆದರೆ ಜೆಡಿಎಸ್ ಸದಸ್ಯರು ಈಗಾಗಲೇ ತಾವು ಪ್ರತಿಭಟನೆ ಮಾಡಿ ಸದನದ ಸಮಯ ವ್ಯರ್ಥ ಮಾಡುವುದಿಲ್ಲವೆಂದು ಹೇಳಿರುವ ಕಾರಣ ಹಾಗೂ ಬಿ.ಜೆ.ಪಿ ಸದಸ್ಯರೂ ಕೂಡ ಇದಕ್ಕೆ ಒಪ್ಪಿಗೆ ನೀಡಿರುವುದರಿಂದ ಸದನ ಇಂದು ಸುಸೂತ್ರವಾಗಿ ನಡೆಯುತ್ತದೆ ಎಂಬ ವಿಶ್ವಾಸವಿದೆ.

ಇಂದು ಪ್ರಮುಖವಾಗಿ ಉತ್ತರ ಕರ್ನಾಟಕ ಭಾಗದ ಕಬ್ಬು ಬೆಳೆಗಾರರ ಸಮಸ್ಯೆ, ಕುಡಿಯುವ ನೀರು, ಮಹದಾಯಿ ಯೋಜನೆ, ಹೈದರಾಬಾದ್ ಕರ್ನಾಟಕ ಭಾಗದ ಅಭಿವೃದ್ಧಿಯ ಬಗ್ಗೆ ಚರ್ಚೆ ಆಗಲಿವೆ.

ಉತ್ತರ ಕರ್ನಾಟಕ ಭಾಗದಲ್ಲಿ ವೈದ್ಯಕೀಯ ಎಂಜಿನಿಯರಿಂಗ್ ಕಾಲೇಜುಗಳ ನಿರ್ಮಾಣದ ಬಗೆಗಿನ ಬಹುದಿನಗಳ ಬೇಡಿಕೆಗೆ ಇಂದು ಅನುಮೋದನೆ ಸಿಗಲಿದೆ ಎನ್ನುವ ಆಶಾಭಾವನೆ ಇದೆ.

ಉತ್ತರ ಕರ್ನಾಟಕ ಅಭಿವೃದ್ಧಿ ನಿರ್ಲಕ್ಷ್ಯ, ಮಹಾದಾಯಿ ಯೋಜನೆ, ಬಡ್ತಿ ಮೀಸಲಾತಿ ಕಾಯ್ದೆ ಮತ್ತು ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆಗಳು ಉಭಯ ಸದನದಲ್ಲಿ ಗದ್ದಲಕ್ಕೆ ಕಾರಣವಾಗಬಹುದು.

10 ದಿನಗಳಿಂದ ಸದಸ್ಯರ ಹಾಜರಾತಿ ಕೂಡ ಈ ಬಾರಿ ಅಧಿವೇಶನದ ವಿವಾದಗಳಲ್ಲೊಂದು ಹಾಗಾಗಿ ಪ್ರಮುಖ ಚರ್ಚೆಗಳು ನಡೆಯುತ್ತಿರುವ ಇಂದಾದರೂ (ನವೆಂಬರ್ 23) ಹೆಚ್ಚಿನ ಸದಸ್ಯರು ಕಲಾಪದಲ್ಲಿ ಭಾಗಿಯಾಗುತ್ತಾರೆಯೇ ಕಾದು ನೋಡಬೇಕು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+