ಬೆಳಗಾವಿ : ಗುಂಡು ಹಾರಿಸಿಕೊಂಡು ಪೇದೆ ಆತ್ಮಹತ್ಯೆ
ಬೆಳಗಾವಿ, ಜ. 9 : ಜಿಲ್ಲಾ ಸಶಸ್ತ್ರ ಮೀಸಲು ಪಡೆ ಪೇದೆಯೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ. ಎಪಿಎಂಸಿ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ಕೈಗೊಂಡಿದ್ದಾರೆ.
ಆತ್ಮಹತ್ಯೆ
ಮಾಡಿಕೊಂಡವರನ್ನು
ರಮೇಶ್
ಗಸ್ತಿ
(56)
ಎಂದು
ಗುರುತಿಸಲಾಗಿದೆ.
ಜಿಲ್ಲಾಸ
ಶಸ್ತ್ರಾಸ್ತ್ರ
ಸಂಗ್ರಹಣಾಗಾರದಲ್ಲಿ
ಕಾರ್ಯನಿರ್ವಹಿಸುತ್ತಿದ್ದ
ರಮೇಶ್
ಶುಕ್ರವಾರ
ತಮ್ಮ
ಬಂದೂಕಿನಿಂದ
ಎದೆಗೆ
ಗುಂಡುಹೊಡೆದುಹೊಂಡು
ಆತ್ಮಹತ್ಯೆ
ಮಾಡಿಕೊಂಡಿದ್ದಾರೆ.
[ರಾಷ್ಟ್ರೀಯ
ವಿದ್ಯಾರ್ಥಿ
ಕಾಂಗ್ರೆಸ್
ರಾಜ್ಯಾಧ್ಯಕ್ಷ
ಆತ್ಮಹತ್ಯೆಗೆ
ಶರಣು]
ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಕೌಟುಂಬಿಕ ಸಮಸ್ಯೆಯ ಹಿನ್ನಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಎಪಿಎಂಸಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. [ಆತ್ಮಹತ್ಯೆಗೆ ಯತ್ನಿಸುವುದು ಇನ್ನು ಅಪರಾಧವಲ್ಲ!]
ಸ್ಪೈಸ್ಜೆಟ್ ಹಾರಾಟ 3ತಿಂಗಳು ವಿಸ್ತರಣೆ : ಸ್ಪೈಸ್ಜೆಟ್ ವಿಮಾನ ಸಂಚಾರ ರದ್ದಾಗುವ ಆತಂಕದ ಸದ್ಯ ದೂರವಾಗಿದ್ದು, ಮಾರ್ಚ್ 31ರವರೆಗೆ ಬೆಳಗಾವಿಯಲ್ಲಿ ವಿಮಾನ ಸೇವೆ ಮುಂದುವರೆಯಲಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸಣ್ಣಪುಟ್ಟ ಕೆಲಸಗಳು ಬಾಕಿ ಉಳಿದಿರುವ ಹಿನ್ನಲೆಯಲ್ಲಿ ಮೂರು ವಿಮಾನಗಳ ಚಲನವಲನಕ್ಕೆ ಹುಬ್ಬಳ್ಳಿ ನಿಲ್ದಾಣದಲ್ಲಿ ಅವಕಾಶ ನೀಡಲು ನಿರಾಕರಿಸಲಾಗಿದೆ. ಆದ್ದರಿಂದ ಅವುಗಳು ಬೆಳಗಾವಿಯಿಂದ ಹಾರಾಟ ನಡೆಸಲಿವೆ.
ಬೆಳಗ್ಗೆ ಬೆಳಗಾವಿ-ಬೆಂಗಳೂರು-ಚೆನೈ(3318), ಮಧ್ಯಾಹ್ನದ ಬೆಳಗಾವಿ-ಮುಂಬೈ-ದಿಲ್ಲಿ(2456) ಹಾಗೂ ಸಂಜೆಯ ಬೆಳಗಾವಿ-ಬೆಂಗಳೂರು-ಚೆನ್ನೈ(1086) ಮೂರು ಸ್ಪೈಸ್ಜೆಟ್ ವಿಮಾನಗಳು ಮೂರು ತಿಂಗಳು ಎಂದಿನಂತೆ ಹಾರಾಟ ನಡೆಸಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.