ಹಿಂಡಲಗಾ ಜೈಲಿನಿಂದ ಎಸ್ಕೇಪ್ ಪ್ಲಾನ್: ಬೆಳಗಾವಿ ಪೊಲೀಸರಿಂದ ತಪಾಸಣೆ
ಜೈಲು ವಾಸಿಯಾಗಿರುವ ಭೂಗತ ದೊರೆ ರವಿ ಪೂಜಾರಿ ಬಂಟ, ದಿನೇಶ್ ಶೆಟ್ಟಿಯನ್ನು ಅಲ್ಲಿಂದ ಪಾರು ಮಾಡಲು ಷಡ್ಯಂತ್ರ ಬಹಿರಂಗೊಂಡ ಹಿನ್ನೆಲೆಯಲ್ಲಿ ತಪಾಸಣೆ.
ಬೆಳಗಾವಿ, ಫೆಬ್ರವರಿ 3: ಹಿಂಜಲಗಾ ಜೈಲಿನಲ್ಲಿ ಬಂಧಿತನಾಗಿರುವ, ಭೂಗತ ದೊರೆ ರವಿ ಪೂಜಾರಿ ಬಂಟ ದಿನೇಶ್ ಶೆಟ್ಟಿಯನ್ನು ಅಲ್ಲಿಂದ ಪರಾರಿಯಾಗಿಸಲು ಆತನ ಸಹಚರರು ರೂಪಿಸಿದ್ದ ಯೋಜನೆಯ ಬಹಿರಂಗಗೊಂಡ ಹಿನ್ನೆಲೆಯಲ್ಲಿ ಬೆಳಗಾವಿ ಪೊಲೀಸ್ ಅಧಿಕಾರಿಗಳು ಶುಕ್ರವಾರ ಜೈಲಿನ ತಪಾಸಣೆ ನಡೆಸಿದ್ದಾರೆ.
ಇತ್ತೀಚೆಗೆ, ಪೊಲೀಸರಿಗೆ ಸಿಕ್ಕಿಬಿದ್ದಿದ್ದ, ದಿನೇಶ್ ಶೆಟ್ಟಿಯ ಆಪ್ತರೆಂದು ಹೇಳಲಾದ ಆರು ಜನರು ದಿನೇಶ್ ಶೆಟ್ಟಿಯನ್ನು ಜೈಲಿನಿಂದ ಪರಾರಿಗೊಳಿಸುವ ಪ್ಲಾನ್ ಹಾಕಿದ್ದಾಗಿ ಪೊಲೀಸರ ಬಳಿ ಬಾಯಿಬಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಡಿಸಿಪಿ ಜಿ. ರಾಧಿಕಾ, ಅಮರ್ ನಾಥ ರೆಡ್ಡಿ, ಎಸಿಪಿ ಜಯ ಕುಮಾರ್ ಹಾಗೂ ಸಿಸಿಬಿ ನಿರೀಕ್ಷಕರಾದ ಬಿ.ಆರ್. ಗಡ್ಡೇಕರ್ ಅವರು ಜೈಲು ಹಾಗೂ ದಿನೇಶ್ ಶೆಟ್ಟಿ ಇರುವ ಸೆಲ್ ಅನ್ನು ತಪಾಸಣೆ ನಡೆಸಿದರು.

ತಪಾಸಣೆ ವೇಳೆ, ದಿನೇಶ್ ಶೆಟ್ಟಿ ಬಳಿ ಮೊಬೈಲ್ ಫೋನ್ ಸಿಕ್ಕಿದ್ದು, ಅದನ್ನು ಜಪ್ತಿಗೊಳಿಸಲಾಗಿದೆ. ಈ ಮೊಬೈಲ್ ಫೋನ್ ಬಗ್ಗೆ ಇತ್ತೀಚೆಗೆ ಬಂಧಿಸಲ್ಪಟ್ಟಿರುವ ಆರು ಮಂದಿ ಯುವಕರು ಬಾಯಿಬಿಟ್ಟಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಚಿತ್ರ ಕೃಪೆ: @allaboutbelgaum












Click it and Unblock the Notifications