Get Updates
Get notified of breaking news, exclusive insights, and must-see stories!

Turmeric Price: ದಾಖಲೆ ಮಟ್ಟಕ್ಕೆ ಮಾರಾಟವಾದ ಬೆಳಗಾವಿ ರೈತ ಬೆಳೆದ ಅರಿಶಿಣ

ಬೆಳಗಾವಿ, ಮಾರ್ಚ್ 22: ಈ ಬಾರಿ ರಾಜ್ಯದಲ್ಲಿ ಎದುರಾದ ಬರಗಾಲ ರೈತರಿಗೆ ಸಂಕಷ್ಟವನ್ನು ತಂದೊಡ್ಡಿದೆ. ಬೆಳೆಗೆ ನೀರಿಲ್ಲ, ಏನೇ ಮಾಡಿದರು ಉತ್ತಮ ಗುಣಮಟ್ಟದ ಬೆಳೆ ಸಿಗುತ್ತಿಲ್ಲ, ಕಷ್ಟಪಟ್ಟು ಬೆಳೆದ ಬೆಳೆಗೆ ಬೆಲೆ ಸಿಗುತ್ತಿಲ್ಲ ಈ ಎಲ್ಲಾ ಕಾರಣಗಳಿಂದ ರೈತರು ಹೈರಾಣಾಗಿ ಹೋಗಿದ್ದಾರೆ. ಆದರೆ ಈ ಎಲ್ಲಾ ಗೋಳಾಟಗಳ ನಡುವೆ ಇಲ್ಲೊಬ್ಬ ರೈತ ತಾವು ಬೆಳೆದ ಬೆಳೆಗೆ ನಿರೀಕ್ಷೆಗೂ ಮೀರಿದ ಲಾಭ ಗಳಿಸಿ ನೆಮ್ಮದಿಯ ನಗು ಬೀರಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದ ರೈತನೊಬ್ಬ ಬೆಳೆದ ಅರಿಶಿಣ ಇಡೀ ಭಾರತದಲ್ಲಿ ದಾಖಲೆ ಮಟ್ಟಕ್ಕೆ ಮಾರಾಟವಾಗಿ ಎಲ್ಲರ ಗಮನ ಸೆಳೆಯುವಂತೆ ಮಾಡಿದ್ದಾರೆ. ಕೋಹಳ್ಳಿ ಗ್ರಾಮದ ರೈತ ಸೈಬಣ್ಣ ಭೂಪತಿ ಪೂಜಾರಿ ಅವರ ಅರಿಶಿನ ಭಾರತದಲ್ಲಿ ಅಚ್ಚರಿಯ ದರಕ್ಕೆ ಮಾರಾಟವಾಗಿದೆ. ಪ್ರತಿ ಕ್ವಿಂಟಲ್​ಗೆ ಬರೋಬ್ಬರಿ 41,101 ರೂಪಾಯಿಯ ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ.

Belagavi Farmer Sold Turmeric At The Highest Price In This Year

ರೈತ ಸೈಬಣ್ಣ ಭೂಪತಿ ಪೂಜಾರಿ ಶೈಲಂ ತಳಿಯ ಅರಿಶಿನ ಬಿಜ ನಾಟಿ ಮಾಡಿ ಉತ್ತಮ ಇಳುವರಿ ಪಡೆದಿದ್ದಾರೆ. ಈಗಾಗಲೇ 18 ಕ್ವಿಂಟಲ್ ಅರಿಶಿನ ಮಾರಾಟವಾಗಿದ್ದು 7ಲಕ್ಷ ರೂ. ನಿವ್ವಳ ಲಾಭ ಪಡೆದಿದ್ದಾರೆ. ಪ್ರತಿ ಎಕ್ಕರೆಗೆ 30 ಸಾವಿರ ಖರ್ಚು ಮಾಡಿದ ಇವರು ಮೂರು ಎಕ್ಕರೆ ಅರಿಶಿನದಿಂದ ಅಂದಾಜು 30 ಲಕ್ಷ ಆದಾಯದ ನಿರೀಕ್ಷೆಯಲ್ಲಿದ್ದಾರೆ.

25 ಸಾವಿರ ರೂಪಾಯಿಗೆ ಅರಶಿನ ಮಾರಾಟ ಮಾಡಿದ ಭರಮನಕೊಡಿ ರೈತ

ರಾಜ್ಯಾದ್ಯಂತ ದಟ್ಟವಾದ ಬರಗಾಲದ, ಇಂತಹದರಲ್ಲಿ ಅರಿಶಿನ ಬೆಳೆ ಬೆಳೆದು ಮಾದರಿಯಾಗಿದ್ದು ಶ್ಲಾಘನೀಯವಾಗಿದೆ. ಉತ್ತರ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಈ ಅರಿಶಿನ ಬೆಳೆಯಲಾಗುತ್ತದೆ. ಇದೀಗ ಅರಿಶಿನಕ್ಕೆ ಚಿನ್ನದ ದರ ಕಂಡ ರೈತರು ಫುಲ್ ಖುಷಿಯಾಗಿದ್ದಾರೆ.

ಈ ವರ್ಷ ಅರಿಶಿನ ಎರಡು ದಶಕಗಳಲ್ಲಿ ಇಲ್ಲದ ಇತಿಹಾಸ ಸೃಷ್ಟಿಸಿದೆ. ರೈತರ ನಿರೀಕ್ಷೆಗೂ ಮೀರಿ ದುಬಾರಿ ಬೆಲೆಗೆ ಮಾರಾಟವಾಗುತ್ತಿದೆ. ಪ್ರತಿವರ್ಷ ಕೇವಲ ಐದರಿಂದ ಆರು ಸಾವಿರ ದರಕ್ಕೆ ಮಾರಾಟವಾಗುತ್ತಿದ್ದ ಅರಿಶಿನ, ಈ ವರ್ಷ ಕ್ವಿಂಟಾಲ್‍ಗೆ ಬರೋಬ್ಬರಿ 25 ಸಾವಿರ ರೂಪಾಯಿ ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ. ಅದಕ್ಕೆ ಬೆಳಗಾವಿ ರೈತರು ಖುಷಿಯಾಗಿದ್ದಾರೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಭರಮನಕೊಡಿ ಗ್ರಾಮದ ರೈತ ಸಿದ್ರಾಯ ಕೈರಿ ಕೇವಲ 30 ಗುಂಟೆಯಲ್ಲಿ 20 ಕ್ವಿಂಟಾಲ್‌ ಅರಿಶಿನ ಬೆಳೆದು, ಉತ್ತಮ ಲಾಭ ಗಳಿಸಿದ್ದಾರೆ. 4 ಲಕ್ಷ ಆದಾಯದ ನಿರೀಕ್ಷೆಯಲ್ಲಿದ್ದಾರೆ.

ಅರಿಶಿನ 11 ತಿಂಗಳ ವಾರ್ಷಿಕ ಬೆಳೆಯಾಗಿದ್ದು, ಪ್ರಕೃತಿ ಸಹಕಾರದ ಜೊತೆ ಜೊತೆಗೆ ರೈತರು ಕಷ್ಟ ಪಡುತ್ತಾರೆ. ಅರಿಶಿನ ಬೆಳೆ ಬೆಳೆಯುವ ಪೂರ್ವ ಸಿದ್ಧತೆಗೆ ಮೊದಲು, ಗದ್ದೆಗೆ ಕೊಟ್ಟಿಗೆ ಗೊಬ್ಬರ ಬಹಳ ಅವಶ್ಯಕವಾಗಿರುತ್ತದೆ. ಅರಿಶಿನ ನಾಟಿಗೂ ಮುನ್ನ ಗದ್ದೆಯನ್ನ ಸಂಪೂರ್ಣ ಹದಗೊಳಿಸಬೇಕು. ಸಾಲಿನಿಂದ ಸಾಲಿಗೆ 3 ಅಡಿ ಅಂತರದಲ್ಲಿ ಸಾಲು ಕೊರೆಯಿಸಿ ಪ್ರತಿ ಬೀಜದಿಂದ ಬೀಜಕ್ಕೆ 1 ಅಡಿ ಅಂತರ ಬಿಟ್ಟು ನಾಟಿ ಮಾಡಬೇಕು. ಒಟ್ಟು 30 ಗುಂಟೆ ಅರಿಶಿನ ನಾಟಿ ಮಾಡಲು 15 ಕ್ವಿಂಟಲ್‌ ಕಡಪಾ ಥಳಿಯ ಬೀಜ ಬಳಸಲಾಗಿದೆ ಎನ್ನಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+