ಬೆಂಗಳೂರು ಕ್ರೈಂ ಬೀಟ್ : ಮಾಂಗಲ್ಯ ಸರ ಕಳ್ಳತನ

Mangalsutra
ಬೆಂಗಳೂರು, ಮೇ.10: ತರಕಾರಿ ತರಲು ಹೋಗಿದ್ದ ಮಹಿಳೆಯೊಬ್ಬರ ಕುತ್ತಿಗೆಯಿಂದ ಅಪರಿಚಿತ ವ್ಯಕ್ತಿಗಳು ಆಟೋ ರಿಕ್ಷಾದಲ್ಲಿ ಬಂದು ಮಾಂಗಲ್ಯ ಸರವನ್ನು ಕಿತ್ತು ಪರಾರಿಯಾದ ಘಟನೆ ಕೆ.ಹೆಚ್.ಬಿ.ಕಾಲೋನಿ ಬಸವೇಶ್ವರನಗರದಲ್ಲಿ ನಡೆದಿದೆ.

ಬಸವೇಶ್ವರ ನಗರದ ನಿವಾಸಿ ಆಶಾಕುಮಾರಿ ಮೇ. 9 ಶನಿವಾರ ರಾತ್ರಿ ರಿಲಾಯನ್ಸ್‌ ಫ್ರೆಶ್‌ಗೆ ತರಕಾರಿ ತರಲು ಕೆ.ಹೆಚ್.ಬಿ.ಕಾಲೋನಿಯಲ್ಲಿ 1ನೇ ಮೈನ್ 1ನೇಸ್ಟೇಜ್‌‌ನಲ್ಲಿ ಒಬ್ಬರೇ ನಡೆದುಕೊಂಡು ಹೋಗುತ್ತಿರುವಾಗ ಕೆಎ.05-ಸಿ.7328 ನಂಬರಿನ ಆಟೋ ರಿಕ್ಷಾದಲ್ಲಿ ಬಂದ ಅಪರಿಚಿತರು ಮಾಂಗಲ್ಯ ಸರವನ್ನು ಕಿತ್ತುಗೊಳ್ಳಲು ಪ್ರಯತ್ನಿಸಿದ್ದಾರೆ.[ಬೆಂಗಳೂರು: ರಾತ್ರಿ ಕಳ್ಳರ ಕೈಚಳಕ - 5 ಲಕ್ಷ ಕಳ್ಳತನ]

ಈ ಸಂದರ್ಭದಲ್ಲಿ ಆಶಾಕುಮಾರಿ ಗಟ್ಟಿಯಾಗಿ ಕೂಗಿ ಸರವನ್ನು ಹಿಡಿದುಕೊಂಡ ಪರಿಣಾಮ, 15 ಗ್ರಾಂ ಚಿನ್ನದ ಸರವಷ್ಟೇ ಕಿತ್ತು ಕಳ್ಳರು ಪರಾರಿಯಾಗಿದ್ದಾರೆ.[ಪಾನಮತ್ತರ ಲೈಸೆನ್ಸ್ ಕಿತ್ತ ಬೆಂಗಳೂರು ಪೊಲೀಸರು]

ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಪತ್ತೆ ಕಾರ್ಯ ಆರಂಭಿಸಿದ್ದಾರೆ.[ಈ ಟ್ರಾಫಿಕ್‌ ಪೊಲೀಸ್‌ ಅಂದ್ರೆ ಜನರಿಗೆ ಅಚ್ಚುಮೆಚ್ಚು]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+