ಬೆಂಗಳೂರು: ರಾತ್ರಿ ಕಳ್ಳರ ಕೈಚಳಕ - 5 ಲಕ್ಷ ಕಳ್ಳತನ

ವಿಜಯನಗರದ, ರೆಂಮ್ಕೋಲೇಔಟ್ 5ನೇ ಎ ಕ್ರಾಸ್ನಲ್ಲಿರುವ ಬಿ.ಆರ್.ಕೃಷ್ಣಮೂರ್ತಿ ಅವರ ಮನೆಗೆ ಐದು ಜನ ಕಳ್ಳರು ಮೇ 7 ಬುಧವಾರ ರಾತ್ರಿ ನುಗ್ಗಿ ಕಳ್ಳತನ ಮಾಡಿದ್ದಾರೆ.
ಆಗಿದ್ದೇನು? : ರಾತ್ರಿ 9.30 ಗಂಟೆಗೆ ಬಿ.ಆರ್.ಕೃಷ್ಣಮೂರ್ತಿ ಅವರ ಅಕ್ಕ ಭಾವ ರವರೊಂದಿಗೆ ಮನೆಯಲ್ಲಿರುವಾಗ ಸುಮಾರು 5 ಜನ ಅಪರಿಚಿತರು ಮಂಕಿ ಕ್ಯಾಪ್ ಧರಿಸಿ, ಕೈಯಲ್ಲಿ ಲಾಂಗ್ಗಳನ್ನು ಹಿಡಿದುಕೊಂಡು ಮನೆಯನ್ನು ಪ್ರವೇಶಿಸಿದ್ದಾರೆ.[ಬೆಂಗಳೂರು:14 ಕಳ್ಳರ ಬಂಧನ, 2.5 ಕೆಜಿ ಚಿನ್ನ ಜಪ್ತಿ]
ಮನೆಯಲ್ಲಿದ್ದ ಎಲ್ಲಾ ಸದಸ್ಯರಿಗೆ ಲಾಂಗ್ ತೋರಿಸಿ ಎರಡನೇ ಮಹಡಿಯ ರೂಮ್ನಲ್ಲಿ ಕೂಡಿ ಹಾಕಿದ್ದಾರೆ. ಈ ಹೊತ್ತಿಗೆ ಕೃಷ್ಣಮೂರ್ತಿಯವರ ಮೂರನೇ ಮಗ ಬಂದಿದ್ದು ಆತನಿಗೂ ಲಾಂಗ್ ತೋರಿಸಿ ರೂಮಿನಲ್ಲಿ ಕೂಡಿ ಹಾಕಿ ಮನೆಯ ಬೀರಿನಲ್ಲಿದ್ದ ಐದು ಲಕ್ಷ ನಗದು ಮತ್ತು 360 ಗ್ರಾಂ ಚಿನ್ನವನ್ನು ದರೋಡೆ ಮಾಡಿ ಪರಾರಿಯಾಗಿದ್ದಾರೆ.
ವಿಜಯನಗರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದ್ದು ಪೊಲೀಸರು ಪತ್ತೆ ಕಾರ್ಯ ಆರಂಭಿಸಿದ್ದಾರೆ.












Click it and Unblock the Notifications