ಬೇಸಿಗೆ ರಜೆ ಮುಗಿದಿಲ್ಲ, ಆದರೂ ಬೆಂಗಳೂರಿನಲ್ಲಿ ಶಾಲೆ ಶುರುವಾಗಿದೆ!
ಬೆಂಗಳೂರಿನ ಹಲವು ಶಾಲೆಗಳು ಮೇ ಮೊದಲ ವಾರದಲ್ಲೇ ಆರಂಭವಾಗಿಬಿಟ್ಟಿವೆ. ರಜೆಯ ಮೋಜಿನಲ್ಲಿದ್ದ ಮಕ್ಕಳು, ಮತ್ತದೇ ಮಣಬಾರದ ಬ್ಯಾಗು ಹೊತ್ತು ಶಾಲೆಯತ್ತ ಒಲ್ಲದ ಮನಸ್ಸಿನಿಂದ ಮುಖ ಮಾಡಿದ್ದಾರೆ.
ಬೆಂಗಳೂರು, ಮೇ 18: ವಾರ್ಷಿಕ ಪರೀಕ್ಷೆ ಮುಗಿದು ರಜೆ ಆರಂಭವಾಗುತ್ತಿದ್ದಂತೆಯೇ ಮಕ್ಕಳ ಮುಖದಲ್ಲಿ ಎಲ್ಲಿಲ್ಲದ ಖುಷಿ ಎದ್ದುಕಾಣುತ್ತದೆ. ಇನ್ನೆರಡು ತಿಂಗಳು ಹಾಯಾಗಿರಬಹುದಪ್ಪ ಎಂದು ಸ್ಕೂಲ್ ಬ್ಯಾಗ್ ಗಳನ್ನು ಮೂಲೆಯಲ್ಲಿಟ್ಟು ಆಟದಲ್ಲಿ ಮೈಮರೆಯುತ್ತಾರೆ. ಆದರೆ ಈ ಭಾಗ್ಯ ಬೆಂಗಳೂರಿನ ಹಲವು ಶಾಲೆಯ ಮಕ್ಕಳಿಗಿಲ್ಲ ಎಂದರೆ ನಂಬುತ್ತೀರಾ?
ಹೌದು, ಬೆಂಗಳೂರಿನ ಹಲವು ಶಾಲೆಗಳು ಮೇ ಮೊದಲ ವಾರದಲ್ಲೇ ಆರಂಭವಾಗಿಬಿಟ್ಟಿವೆ. ರಜೆಯ ಮೋಜಿನಲ್ಲಿದ್ದ ಮಕ್ಕಳು, ಮತ್ತದೇ ಮಣಬಾರದ ಬ್ಯಾಗು ಹೊತ್ತು ಶಾಲೆಯತ್ತ ಒಲ್ಲದ ಮನಸ್ಸಿನಿಂದ ಮುಖ ಮಾಡಿದ್ದಾರೆ.[ಜಯನಗರದಲ್ಲಿ ಅವಿಸ್ಮರಣೀಯ ಬೇಸಿಗೆಯ ರಜಾ ದಿನಗಳು]

ಕರ್ನಾಟಕ ಶಿಕ್ಷಣ ಸಂಸ್ಥೆಗಳ ನೀತಿ -1995 ಮತ್ತು ಮಕ್ಕಳ ಹಕ್ಕಿನ ಬಗೆಗಿನ ವಿಶ್ವ ಸಂಸ್ಥೆ ನಿಬಂಧನೆಯ ಪ್ರಕಾರ ಮಕ್ಕಳ ಬೇಸಿಗೆ ರಜೆಯನ್ನು ಮೊಟುಕುಗೊಳಿಸುವಂತಿಲ್ಲ. ಈ ವಿಷಯ ತಿಳಿದಿದ್ದರೂ ಬೆಂಗಳೂರಿನ ಲಗ್ಗೇರೆ ಮತ್ತು ಸುಂಕದಕಟ್ಟೆ ಭಾಗದ ಕೆಲವು ಶಾಲೆಗಳು ಮೇ ಮೊದಲ ವಾರದಲ್ಲೇ ಆರಂಭವಾಗಿವೆ.
ಈ ಬಗ್ಗೆ ಶಾಲೆಯ ಆಡಳಿತ ಮಂಡಳಿಯನ್ನು ವಿಚಾರಿಸಿದರೆ, ನಾವು ಕಳೆದ ವರ್ಷದ ಪಠ್ಯವನ್ನು ಮತ್ತೊಮ್ಮೆ ಮಕ್ಕಳಿಗೆ ರಿವೈಸ್ ಮಾಡಿಸುತ್ತಿದ್ದೇವೆ ಎನ್ನುತ್ತಾರೆ. ಮಕ್ಕಳ ಕ್ರಿಯಾಶೀಲತೆಗೆ ಚಿಗುರುವುದಕ್ಕೆ ಸ್ವಲ್ಪ ಸಮಯಾವಕಾಶ ಬೇಡವೇ? ಎಂದರೆ ಅವರ ಬಳಿ ಉತ್ತರವಿಲ್ಲ.
ಒಟ್ಟಿನಲ್ಲಿ ಹಾಸ್ಟೆಲ್ ನಲ್ಲಿದ್ದುಕೊಂಡು ಓದುತ್ತಿರುವ ಮಕ್ಕಳಿಗೆಲ್ಲ ನೆಮ್ಮದಿಯಿಂದ ಕೆಲ ಕಾಲ ಕುಟುಂಬದವರೊಡನೆ ಇರುವುದಕ್ಕೂ ಬಿಡದ ಇಂಥ ಶಾಲೆಗಳ ಬಗ್ಗೆ ಪಾಲಕರೂ, ಮಕ್ಕಳೂ ಹಿಡಿಶಾಪ ಹಾಕುತ್ತಿರುವುದಂತೂ ಸುಳ್ಳಲ್ಲ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
School Land Bill: ಸರ್ಕಾರಿ ಶಾಲೆಗಳ ಭೂರಕ್ಷಣ ವಿಧೇಯಕ ಜಾರಿ; ಕನ್ನಡದ ಹಿತದೃಷ್ಠಿಯಿಂದ ಮಹತ್ವದ ಹೆಜ್ಜೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
ಶಾಲಾ ಮಕ್ಕಳ ಮೊಬೈಲ್ ಬಳಕೆ ನಿರ್ಬಂಧ: 'ಡಿಜಿಟಲ್ ಕರಡು ನೀತಿ' ಬಿಡುಗಡೆಗೊಳಿಸಿದ ರಾಜ್ಯ ಸರ್ಕಾರ










Click it and Unblock the Notifications