'ಬಡವರ ಬಗ್ಗೆ ಕಾಂಗ್ರೆಸ್ ತಮಾಷೆ ಮಾಡುತ್ತದೆ'
(ಮೋದಿ ಭಾಷಣ ಪೂರ್ಣಪಾಠ - ಭಾಗ 4) ಭಾರತ ರತ್ನ ಲತಾ ಮಂಗೇಷ್ಕರ್ ಅವರ ಹಾಡು ಕೇಳಿದ ತಕ್ಷಣ ರೋಮಾಂಚನವಾಗಲ್ವಾ? ನೀವು ಕನ್ನಡ ಭಾಷಿಕರು. ನಿಮಗೆ ಅವರ ಬಗ್ಗೆ ಗೊತ್ತಿರಬೇಕು. ಅವರ ಹಾಡು ಕೇಳಿದ ತಕ್ಷಣ ಸಂತಸವಾಗಲ್ವಾ? ಶಾಂತಿ ಸಿಗಲ್ವಾ? ಹೇ ಮೇರೇ ವತನ್ ಕೇ ಲೋಗೋ ಹಾಡು ಕೇಳಿದಾಗ ಭಾರತೀಯ ಸೇನೆಯ ಮುಂದೆ ತಲೆ ಬಾಗಿಸಿ ನಿಲ್ಲಬೇಕೆಂದು ಅನ್ನಿಸುತ್ತದೆ.
ಆದರೆ ಲತಾ ಮಂಗೇಷ್ಕರ್ ಮೋದಿ ಪ್ರಧಾನಿಯಾದರೆ ಒಳ್ಳೆಯದಾಗುತ್ತದೆ ಎಂದು ಕೆಲ ದಿನಗಳ ಹಿಂದೆ ಹೇಳಿದರು. ಆದರೆ ಕಾಂಗ್ರೆಸ್ ಗೆ ಇದು ಸಹ್ಯವಾಗಲಿಲ್ಲ. ಪ್ರಜಾತಂತ್ರದಲ್ಲಿ ಇಷ್ಟು ಮಾತು ಹೇಳುವ ಅಧಿಕಾರವಿಲ್ಲವಾ. ಯಾರಾದರೂ ಮೋದಿ ಜೀವನಪೂರ್ತಿ ಜೈಲಲ್ಲಿರಬೇಕು ಎನ್ನುವುದು ತಪ್ಪಾ? ಮೋದಿಗೆ ಮರಣ ದಂಡನೆಯಾಗಲಿ ಎಂದು ಹೇಳುವ ಅಧಿಕಾರವಿಲ್ಲವಾ? ಮೋದಿ ಪ್ರಧಾನಿ ಮಾಡಬೇಕು ಎಂದು ಹೇಳುವ ಅಧಿಕಾರವಿಲ್ಲವಾ? ಮೋದಿಗೆ ಬೆಂಬಲಿಸಿದ್ದಕ್ಕೆ ಭಾರತ ರತ್ನ ವಾಪಸ್ ಪಡೆಯಬೇಕು ಎಂದು ಕಾಂಗ್ರೆಸ್ ಹೇಳುತ್ತದೆ.
ಕಾಂಗ್ರೆಸ್ ಪಕ್ಷಕ್ಕೆ ಪ್ರಜಾತಂತ್ರದ ಮೇಲೆ ಶ್ರದ್ಧೆ, ಭರವಸೆಯಿಲ್ಲ. ಅಂತಾರಾಷ್ಟ್ರೀಯ ಸಂಸ್ಥೆಯೊಂದು ಇತ್ತೀಚೆಗೆ ಸಮೀಕ್ಷೆ ನಡೆಸಿತು. ಮೋದಿ ಹೆಸರು ಘೋಷಣೆಯಾದ ನಂತರ ಬಿಜೆಪಿ ವೇಗವಾಗಿ ಹೋಗುತ್ತಿದೆ. ಮೋದಿ ಜೊತೆ ಹೋದರೆ ಅರ್ಥ ವ್ಯವಸ್ಥೆ ಒಳ್ಳೆಯದಾಗುತ್ತದೆ ಎಂದು ಸಮೀಕ್ಷೆ ಹೇಳಿತು. ಆದರೆ ಇದನ್ನು ಒಪ್ಪಲು ಕಾಂಗ್ರೆಸ್ ಸಿದ್ಧವಿಲ್ಲ.

4 ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ. ಒಪೀನಿಯನ್ ಪೋಲ್ ಬಂದಿದೆ. ಚುನಾವಣಾ ಪೂರ್ವ ಸಮೀಕ್ಷೆಗೂ ತಡೆ ಹಾಕಲು ಬಂದರು. ಕಾಂಗ್ರೆಸಿಗರೇ ಎಷ್ಟು ದಿನ ತಲೆ ಮರೆಸಿಕೊಂಡಿರುತ್ತೀರಿ. ಈಗ ನೀವು ಹೊರಡುವ ಸಮಯ ಬಂದಿದೆ. ಟಿವಿಯ ಪರದೆಯಲ್ಲಿ ಅಭಿಪ್ರಾಯ ಬರುತ್ತದೋ ಇಲ್ವೋ, ಆದರೆ ದೇಶದ ಅಭಿಪ್ರಾಯ ಸಿದ್ಧವಾಗಿದೆ.
ದೆಹಲಿಯ ಯುಪಿಎ ಸರ್ಕಾರ ಬಹುಮತದಿಂದ ಉಳಿದಿಲ್ಲ, ಸಿಬಿಐ ಮೂಲಕ ಉಳಿದಿದೆ. ಸರ್ಕಾರ ಬೀಳುತ್ತೆ ಅಂದಾಗ ಸಿಬಿಐಯನ್ನು ಬಳಸುತ್ತಾರೆ. ಈ ಭಯದಿಂದ ಮಿತ್ರ ಪಕ್ಷಗಳು ಕಾಂಗ್ರೆಸ್ ಜೊತೆಗಿರುತ್ತದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಉಳಿದಿದೆ. ಕೇಂದ್ರ ಸರ್ಕಾರಕ್ಕೆ ವಿಜ್ಞಾನದಲ್ಲಿ ವಿಶ್ವಾಸವಿಲ್ಲ, ಪ್ರಜಾತಂತ್ರದಲ್ಲಿ ವಿಶ್ವಾಸವಿಲ್ಲ. 15 ರೂ.ಗೆ ಬಿಸ್ಲೇರಿ ಕುಡಿಯುತ್ತಿದ್ದರೆ 20 ರೂ.ಗೆ ಐಸ್ ಕ್ರೀಂ ತಿನ್ನುತ್ತೀರಿ ಎಂದಾದರೆ, 26 ರೂ. ಆದಾಯವಿದ್ದರೆ ಅವರು ಬಡವರಲ್ಲ ಎಂದು ಸರ್ಕಾರ ಹೇಳಿತು. 26 ರೂ. ಆದಾಯವಿದ್ದರೂ ಆ ಮನೆಯಲ್ಲಿ 5 ಜನವಿದ್ದರೆ ಅವರು ಬಡವರಲ್ಲವೇ? ಆದರೆ ಕೇಂದ್ರ ಸರ್ಕಾರ ಇದನ್ನು ಒಪ್ಪಲ್ಲ. 26 ರೂ.ಗೆ 300 ಗ್ರಾಂ ಈರುಳ್ಳಿ ಸಿಗಲ್ಲ ಅನ್ನೋದು ಗೊತ್ತಿಲ್ವೇ?
ಬಡವರಲ್ಲಿ ಬಡವರ ಬಗ್ಗೆಯೂ ಚಿಂತೆ ಮಾಡುವುದು ಬಿಜೆಪಿಯ ಧರ್ಮ. ಕಾಂಗ್ರೆಸ್ ಸರ್ಕಾರ ಬಡತನವೆಂದರೆ ಮಾನಸಿಕ ಅವಸ್ಥೆ ಎನ್ನುತ್ತದೆ. ಕಾಂಗ್ರೆಸ್ ಬಡವರ ಬಗ್ಗೆ ತಮಾಷೆ ಮಾಡುತ್ತದೆ. ಅವರಿಗೆ ಅವರ ವೈಯಕ್ತಿಕ ಕೆಲಸವೇ ಮುಖ್ಯವಾಗುತ್ತದೆ.
-
SWR: ಏಪ್ರಿಲ್ 2-5 ಬೆಂಗಳೂರು, ಹುಬ್ಬಳ್ಳಿಯಿಂದ ವಿಶೇಷ ಎಕ್ಸ್ಪ್ರೆಸ್ ರೈಲು ಕಾರ್ಯಾಚರಣೆ, ವೇಳಾಪಟ್ಟಿ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications