ಕುಂ. ವೀರಭದ್ರಪ್ಪ ಹೊಸ ಕಾದಂಬರಿ 'ಕತ್ತೆಗೊಂದು ಕಾಲ'

ಬಳ್ಳಾರಿ, ಮಾರ್ಚ್ 10 : ವಿಭಿನ್ನ ಕಥಾವಸ್ತುಗಳನ್ನು ಆಯ್ಕೆ ಮಾಡಿಕೊಂಡು ಕಾದಂಬರಿಗಳನ್ನು ಬರೆಯುವ ಬಿಸಿಲೂರ ಕಾದಂಬರಿಕಾರ ಕುಂ. ವೀರಭದ್ರಪ್ಪ ಅವರ ಹೊಸ 'ಕತ್ತೆಗೊಂದು ಕಾಲ' ಶೀಘ್ರದಲ್ಲೇ ಬಿಡುಗಡೆ ಆಗಲಿದೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಆಕರ್ಷಕವಾದ ವ್ಯಂಗ್ಯಚಿತ್ರದ ಮುಖಪುಟವನ್ನು ಹೊಂದಿರುವ ಈ ಪುಸ್ತಕದ ಶೀರ್ಷಿಕೆಯೂ ಅಷ್ಟೇ ಗಮನಾರ್ಹವಾಗಿದೆ. ಅರಮನೆ, ರಾಯಲುಸೀಮ, ನಿಜಲಿಂಗ ಹೀಗೇ ಕನ್ನಡದ ನೆಲ, ಕರ್ನಾಟಕದ ಗಡಿಭಾಗದ ರಾಯಲಸೀಮೆ ಪ್ರಭಾವದಲ್ಲೇ ಬರಹವನ್ನು ಚಿತ್ರೀಕರಿಸಿ, ಖ್ಯಾತಿ ಪಡೆದಿರುವ ಅವರ 'ಕತ್ತೆಗೊಂದು ಕಾಲ' ಕಾದಂಬರಿ ಸಾಹಿತ್ಯಾಸಕ್ತರಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಲೇಖಕರ ಆಪ್ತರ ಪ್ರಕಾರ, 'ಪುಸ್ತಕದ ಮುದ್ರಣ ಬಹುತೇಕ ಪೂರ್ಣಗೊಂಡಿದೆ. ಪುಸ್ತಕ ಬಿಡುಗಡೆ ದಿನಾಂಕ ಮತ್ತು ಸ್ಥಳವೂ ನಿಗದಿ ಆಗುವ ಹಂತದಲ್ಲಿದೆ. ಎಲ್ಲ ಮಾಹಿತಿಯೂ ಶೀಘ್ರದಲ್ಲೇ ಬಹಿರಂಗಗೊಳ್ಳಲಿದೆ' ಎನ್ನುತ್ತಾರೆ.

Writer Kum Veerabhadrappa new novel Kattegondu Kaala will be release soon

ಕುಂ.ವೀರಭದ್ರಪ್ಪ ಅವರ ಕತೆ- ಕಾದಂಬರಿಗಳಲ್ಲಿ ಪಾತ್ರಗಳು ಅದ್ಭುತವಾಗಿರುತ್ತವೆ ಜತೆಗೆ ನಮ್ಮ ಮಧ್ಯೆಯೂ ನಿತ್ಯ ಕಾಣಸಿಗುವಂಥವಾಗಿರುತ್ತವೆ. ಭಳಾರೇ ವಿಚಿತ್ರಂ ಕಥಾ ಸಂಕಲನ, ಗಾಂಧಿಕ್ಲಾಸ್ ಕಾದಂಬರಿಯನ್ನು ಪದೇ ಪದೇ ನೆನಪಿಸಿಕೊಳ್ಳುವಂತಾಗುತ್ತದೆ. ಇವರ 'ಕೂರ್ಮಾವತಾರ' ಕಥೆಯು ಸಿನಿಮಾ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+