ಕೆಂಚನಗುಡ್ಡದ ಜಲರಾಶಿಯ ವೈಭವ ನೋಡಲು ಮುಗಿಬಿದ್ದ ಪ್ರವಾಸಿಗರು
ಬಳ್ಳಾರಿ, ಜುಲೈ.23: ನೀರಿನ ಏರಿಳಿತ, ರಭಸದ ಸದ್ದು, ನಿಶ್ಯಬ್ಧವನ್ನು ಬೇಧಿಸಿ ಝೇಂಕರಿಸುವ ಜುಳುಜುಳು ನಿನಾದ, ನೊರೆಯಾಗಿ ಹರಿಯುವ ನೀರನ್ನು ನೋಡಲು ಪ್ರಕೃತಿ ಪ್ರಿಯರು ಹಾತೊರೆಯುತ್ತಿರುತ್ತಾರೆ.
ಇದನ್ನೆಲ್ಲಾ ಕಣ್ತುಂಬಿಕೊಳ್ಳಲೆಂದೆ ಪ್ರವಾಸಿಗರು ಹಳ್ಳ-ಕೊಳ್ಳ, ಜಲಾಶಯಗಳಿಗೆ ಲಗ್ಗೆ ಇಡುತ್ತಾರೆ, ಪ್ರಕೃತಿಯಲ್ಲಿ ಮಿಂದೆದ್ದು ವಿಶ್ರಮಿಸುತ್ತಾರೆ.
ಈ ನಿಟ್ಟಿನಲ್ಲಿ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಕೆಂಚನಗುಡ್ಡ ಪ್ರದೇಶದಲ್ಲಿ ವಿಜಯನಗರ ಅರಸರ ಕಾಲದಲ್ಲಿ ನಿರ್ಮಾಣ ಮಾಡಲಾಗಿರುವ, ಇಂದಿಗೂ ಸುಭದ್ರವಾಗಿರುವ 'ಚೆಕ್ಡ್ಯಾಂ' ತುಂಬಿ, ನೀರು ಡ್ಯಾಂನ ಮೇಲೆ ಹರಿಯುತ್ತಿದೆ.

ಡ್ಯಾಂ ಯುವಮನಸ್ಸುಗಳಿಗೆ, ಪ್ರಕೃತಿ ಪ್ರಿಯರಿಗೆ ಮಿಂದೆದ್ದು, ವಿಶ್ರಮಿಸಲು ಆಹ್ವಾನ ನೀಡುತ್ತಿದೆ.
ತುಂಗಭದ್ರಾ ಜಲಾಶಯದಿಂದ ಕಳೆದ ಗುರುವಾರ ಸಂಜೆ ನೀರು ಹರಿಬಿಟ್ಟ ಕಾರಣ ತುಂಗಭದ್ರಾ ನದಿಯ ಮೂಲಕ ನೀರು ಶುಕ್ರವಾರ ನಸುಕಿನಲ್ಲಿ ಕೆಂಚನಗುಡ್ಡ ಸೇರಿ, ಐತಿಹಾಸಿಕ ಪ್ರಸಿದ್ಧಿ ಪಡೆದಿರುವ ಚೆಕ್ಡ್ಯಾಂ ತುಂಬಿ, ಮೇಲ್ಮಟ್ಟದಲ್ಲಿ ಹರಿಯುತ್ತಿದೆ.

ಜಲರಾಶಿಯ ಈ ದೃಶ್ಯವನ್ನು ಕಣ್ಣಾರೆ ಅನುಭವಿಸಿ, ರಿಲ್ಯಾಕ್ಸ್ ಆಗಲಿಕ್ಕಾಗಿ ಸಿರುಗುಪ್ಪದ ಅನೇಕರು ಕೆಂಚನಗುಡ್ಡದತ್ತ ಹೆಜ್ಜೆ ಹಾಕುತ್ತಿದ್ದಾರೆ.
ಕೆಂಚನಗುಡ್ಡದಲ್ಲಿ ವಸುದೇಂದ್ರ ತೀರ್ಥರ ಬೃಂದಾವನವೂ ಇದೆ. ಅಲ್ಲದೇ, ಇದು, ಸಿರುಗುಪ್ಪ ಮತ್ತು ಸುತ್ತಲಿನ ಪ್ರಕೃತಿ ಪ್ರಿಯರಿಗೆ ಪಿಕ್ ನಿಕ್ ಸ್ಪಾಟ್ ಕೂಡ ಹೌದು. ಸಿರುಗುಪ್ಪ ಪೊಲೀಸರು, ಈ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಹಾಕಿದ್ದು, ನೀರಿಗಿಳಿಯುವ ಉತ್ಸಾಹಿಗಳನ್ನು ದಡದಲ್ಲಿಯೇ ತಡೆಯುತ್ತಿದ್ದಾರೆ.

ಆದರೂ ಅನೇಕ ಯುವಕರು ಈ ಸ್ಥಳಕ್ಕೆ ಶುಕ್ರವಾರ ಬೆಳಗ್ಗೆಯಿಂದಲೇ ಲಗ್ಗೆ ಹಾಕುತ್ತಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications