Get Updates
Get notified of breaking news, exclusive insights, and must-see stories!

ಮರಳಲ್ಲಿ ಮೂಡುತ್ತಿರುವ ತಾಜ್‍ ಮಹಲ್ ನೋಡಲು ಬನ್ನಿ

ಬಳ್ಳಾರಿ, ಜನವರಿ 09 : ಹಂಪಿ ಉತ್ಸವದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ಜೊತೆಗೆ ವಿವಿಧ ಕಲೆಗಳ ಸಮಾಗಮವು ನಡೆಯುತ್ತದೆ. ಈ ಬಾರಿಯ ಉತ್ಸವದಲ್ಲಿ ಮರಳು ಕಲಾ ಪ್ರದರ್ಶನವನ್ನು ಬಳ್ಳಾರಿ ಜಿಲ್ಲಾಡಳಿತ ಆಯೋಜನೆ ಮಾಡಿದೆ.

ಗ್ರಾಮ ಪಂಚಾಯತಿ ಮುಂಭಾಗದ ಮಾತಂಗ ಪರ್ವತ ಮೈದಾನದಲ್ಲಿ ಸಜ್ಜಾಗುತ್ತಿರುವ ಮರಳು ಕಲಾ ಪ್ರದರ್ಶನವು ಈ ಬಾರಿಯ ಮುಖ್ಯ ಆಕರ್ಷಣೆ. ಒಡಿಶಾಸದ ಕಲಾವಿದ ನಾರಾಯಣ ಸಾಹು ನೇತೃತ್ವದ ತಂಡವು ವಿವಿಧ ಕಲಾಕೃತಿಗಳನ್ನು ರಚನೆ ಮಾಡುತ್ತಿದೆ.

ಮರಳಿನಲ್ಲಿ ಹಂಪಿ ವಿರುಪಾಕ್ಷ ದೇವಾಲಯದ ಗೋಪುರ, ಉಗ್ರ ನರಸಿಂಹ, ಆನೆಲಾಯ ಮತ್ತು ಹಂಪಿಯ ಕಲ್ಲಿನ ರಥದ ಜೊತೆಗೆ ವಿಶ್ವದ 7 ಅದ್ಭುತಗಳಲ್ಲಿ ಒಂದಾದ ಆಗ್ರಾದ ತಾಜ್ ಮಹಲ್ ನಿರ್ಮಾಣ ಮಾಡಲಾಗುತ್ತಿದೆ.

ಜನವರಿ 10ರಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ 2020ನೇ ಸಾಲಿನ ಹಂಪಿ ಉತ್ಸವವನ್ನು ಉದ್ಘಾಟಿಸಲಿದ್ದಾರೆ. ಮರಳು ಕಲಾ ಪ್ರದರ್ಶನವು ಎರಡು ದಿನಗಳ ಕಾಲ ನಡೆಯುವ ನಡೆಯುವ ಹಂಪಿ ಉತ್ಸವದ ಮೆರಗನ್ನು ಮತ್ತಷ್ಟು ಹೆಚ್ಚಿಸಲಿದೆ.

ಮರಳು ಕಲಾ ಪ್ರದರ್ಶನ

ಮರಳು ಕಲಾ ಪ್ರದರ್ಶನ

ಜನವರಿ 10ರಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ 2020ನೇ ಸಾಲಿನ ಹಂಪಿ ಉತ್ಸವ ಉದ್ಘಾಟಿಸಲಿದ್ದಾರೆ. ಮರಳು ಕಲಾ ಪ್ರದರ್ಶನವು ಎರಡು ದಿನಗಳ ಕಾಲ ನಡೆಯುವ ನಡೆಯುವ ಹಂಪಿ ಉತ್ಸವದ ಮೆರಗನ್ನು ಮತ್ತಷ್ಟು ಹೆಚ್ಚಿಸಲಿದೆ. ಉಗ್ರ ನರಸಿಂಹ, ಆನೆಲಾಯ ಮತ್ತು ಹಂಪಿಯ ಕಲ್ಲಿನ ರಥದ ಕಲಾಕೃತಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ.

ಗಣಿ ನಾಡಿನಲ್ಲಿ ಮತ್ಸ್ಯ ಮೇಳ

ಗಣಿ ನಾಡಿನಲ್ಲಿ ಮತ್ಸ್ಯ ಮೇಳ

ಹಂಪಿ ಉತ್ಸವದ ಅಂಗವಾಗಿ ಈ ಬಾರಿ ವಿಶೇಷವಾಗಿ ಮತ್ಸ್ಯಮೇಳ ಆಯೋಜನೆ ಮಾಡಲಾಗಿದೆ. ಜಿಲ್ಲಾಡಳಿತ ಬಳ್ಳಾರಿ ಹಾಗೂ ಮೀನುಗಾರಿಕೆ ವತಿಯಿಂದ ಆಯೋಜಿಸಲಾಗಿರುವ ಮತ್ಸ್ಯಮೇಳ ಹಂಪಿಯ ಗ್ರಾಮ ಪಂಚಾಯತಿ ಮುಂಭಾಗದ ಮಾತಂಗ ಪರ್ವತ ಮೈದಾನದಲ್ಲಿ ನಡೆಯಲಿದೆ.

ಜನವರಿ 10ರಂದು ಮತ್ಸ್ಯಮೇಳ ಉದ್ಘಾಟನೆಯಾಗಲಿದೆ. ಮೇಳದಲ್ಲಿ 11 ಅಡಿಯ ಸುರಂಗ ಮಾದರಿಯ ಅಕ್ವೇರಿಯಮ್ ನಿರ್ಮಿಸಲಾಗಿದೆ. 50ಕ್ಕೂ ಹೆಚ್ಚು ಫಿಶ್‌ ಟ್ಯಾಂಕ್‌ಗಳಲ್ಲಿ 10 ರಿಂದ 15 ಬಗೆಬಗೆಯ ಜಾತಿಯ ಮೀನುಗಳನ್ನು ಪ್ರದರ್ಶನಕ್ಕಿಡಲಾಗುತ್ತದೆ.

ಅಂತಿಮ ಹಂತದ ಸಿದ್ಧತೆಗಳು

ಅಂತಿಮ ಹಂತದ ಸಿದ್ಧತೆಗಳು

ಎರಡು ದಿನಗಳ ಹಂಪಿ ಉತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಹಂಪಿ ಬೈಸ್ಕೈ, ಸಾಸುವೆಕಾಳು ಗಣಪ ಮುಂಭಾಗದಲ್ಲಿ ಸಾಹಸಕ್ರೀಡೆಗಳು, ಕಮಲಾಪುರ ಕೆರೆಯಲ್ಲಿ ಪಾರಂಪರಿಕ ಸ್ಪರ್ಧೆ, ಮಾತಂಗಪರ್ವತ ಮೈದಾನದ ಆವರಣದಲ್ಲಿ ಮತ್ಸ್ಯಮೇಳ, ವಿರೂಪಾಕ್ಷೇಶ್ವರ ದೇವಸ್ಥಾನದ ಮುಂಭಾಗದಲ್ಲಿ ರಂಗೋಲಿ ಹಾಗೂ ಮೆಹಂದಿ ಪ್ರದರ್ಶನ ಮುಂತಾದ ಕಾರ್ಯಕ್ರಮ ನಡೆಯಲಿದೆ.

ಸಮಾರೋಪ ಸಮಾರಂಭ

ಸಮಾರೋಪ ಸಮಾರಂಭ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಬಳ್ಳಾರಿ ಜಿಲ್ಲಾಡಳಿತದ ಸಂಯುಕ್ತ ಆಶ್ರಯದಲ್ಲಿ ನಡೆಯಲಿರುವ ಹಂಪಿ ಉತ್ಸವದ ಸಮಾರೋಪ ಸಮಾರಂಭ ಜನವರಿ 11ರಂದು ಸಂಜೆ 6ಕ್ಕೆ ಕೃಷ್ಣದೇವರಾಯ ವೇದಿಕೆಯಲ್ಲಿ ನಡೆಯಲಿದೆ.

ಕೇಂದ್ರ ಸಚಿವರಾದ ಪ್ರಲ್ಹಾದ್‍ ಸಿಂಗ್ ಪಟೇಲ್, ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಣ ಸವದಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+