ಹಂಪಿ ಗೈಡ್ ಪ್ರೀತಿಗೆ ಮನಸೋತ ಬೆಲ್ಜಿಯಂ ಯುವತಿ: ವಿರೂಪಾಕ್ಷೇಶ್ವರನ ಸನ್ನಿಧಿಯಲ್ಲಿ ಅದ್ಧೂರಿ ಮದುವೆ
ವಿಜಯನಗರ, ನವೆಂಬರ್ 25: ಪ್ರೀತಿಗೆ ಯಾವುದೇ ಮಿತಿ ಇಲ್ಲ. ವಯಸ್ಸಿನ, ಜಾತಿಯ, ಧರ್ಮದ, ದೇಶದ ಮಿತಿ ಇಲ್ಲದೇ ಪ್ರೀತಿ ಆರಂಭವಾಗುತ್ತದೆ. ಮಿತಿಗಳನ್ನು ದಾಟಿದ ಪ್ರೀತಿ ಕೆಲವು ಮದುವೆಯಾಗಿ ಯಾಶಸ್ವಿಯಾಗುತ್ತದೆ. ಇಂತಹ ಗಡಿ ಮೀರಿದ ಪ್ರೀತಿಗೆ ವಿಜಯನಗರದ ಜೋಡಿ ಸಾಕ್ಷಿಯಾಗಿದ್ದಾರೆ.
ವಿಜಯನಗರ ವಿಶ್ವವಿಖ್ಯಾತ ಹಂಪಿಯ ವಿರೂಪಾಕ್ಷೇಶ್ವರನ ಸನ್ನಿಧಿಯಲ್ಲಿ ಶುಕ್ರವಾರ ಅದ್ಧೂರಿ ವಿವಾಹವೊಂದು ನಡೆದಿದ್ದು, ಹಲವು ವಿಶೇಷತೆಗೆ ಸಾಕ್ಷಿಯಾಗಿದೆ.
ಬೆಲ್ಜಿಯಂ ಯುವತಿ ಕೆಮಿಲ್ ಭಾರತದ ಅದರಲ್ಲೂ ಕರ್ನಾಟಕದ ವಿಜಯನಗರದ ಯುವಕನ ಜೊತೆ ಹಸೆಮಣೆ ಏರಿದ್ದು, ಇಬ್ಬರೂ ಪೋಷಕರ ಸಮ್ಮುಖದಲ್ಲಿ ಭಾರತೀಯ ಸಂಪ್ರದಾಯದಂತೆ ಸಪ್ತಪದಿ ತುಳಿದಿದ್ದಾರೆ.

ಹಂಪೆಯಲ್ಲಿ ಆಟೋ ಚಾಲಕನಾಗಿ ಹಾಗೂ ಗೈಡ್ ಆಗಿ ಕೆಲಸ ಮಾಡುತ್ತಿದ್ದ ಅನಂತರಾಜು ಹಾಗೂ ಬೆಲ್ಜಿಯಂನಲ್ಲಿ ಸಮಾಜ ಸೇವಕಿಯಾಗಿದ್ದ ಕೆಮಿಲ್ ಮೊದಲ ಬಾರಿಗೆ ಹಂಪಿಯಲ್ಲಿ ಭೇಟಿಯಾಗಿದ್ದರು. ಕುಟುಂಬದ ಜೊತೆ ಹಂಪಿಗೆ ಬಂದಿದ್ದ ಕೆಮಿಲ್ಗೆ, ಅನಂತರಾಜು ಹಂಪಿ ವೀಕ್ಷಣೆಗೆ ಸಹಾಯ ಮಾಡಿದ್ದರು. ಈ ವೇಳೆ ಅನಂತರಾಜು ಅವರ ಪ್ರಾಮಾಣಿಕತೆಗೆ ಕೆಮಿಲ್ ಕುಟುಂಬದವರು ಮನಸೋತಿದ್ದರು. ಅನಂತರಾಜು ಹಾಗೂ ಕೆಮಿಲ್ ಪರಿಚಯ, ಸ್ನೇಹವಾಗಿತ್ತು. ಕೆಲ ದಿನಗಳ ಬಳಿಕ ಈ ಸ್ನೇಹ ಪ್ರೀತಿಯಾಗಿದ್ದು, ಅನಂತರಾಜು ಹಾಗೂ ಕೆಮಿಲ್ ಕಳೆದ ನಾಲ್ಕೈದು ವರ್ಷಗಳಿಂದ ಪ್ರೀತಿಸುತ್ತಿದ್ದರು.
ಬೆಲ್ಜಿಯಂನ ಜೀಪ್ ಫಿಲಿಪ್ಪೆ ಅವರ ತೃತೀಯ ಪುತ್ರಿ ಆಗಿರುವ ಕೆಮಿಲ್ ಹಾಗೂ ಅನಂತರಾಜು ಮೂರು ವರ್ಷಗಳ ಹಿಂದೆಯೇ ಪ್ರೇಮ ವಿವಾಹ ಆಗಬೇಕಿತ್ತು. ಆದರೆ ಕೊರೊನಾದಿಂದ ಇವರ ಮದುವೆ ಮೂಂದೂಡಲಾಗಿತ್ತು.ಮಗಳ ಮದುವೆಯನ್ನು ಬೆಲ್ಜಿಯಂನಲ್ಲೇ ಅದ್ಧೂರಿಯಾಗಿ ಮಾಡಬೇಕು ಎಂದು ಕೆಮಿಲ್ ಪೋಷಕರು ಎಂದುಕೊಂಡಿದ್ದರು. ಆದರೆ ಹಿಂದೂ ಸಂಪ್ರದಾಯದಂತೆ ಹಂಪಿಯಲ್ಲೇ ಮದುವೆಯಾಗಬೇಕು ಎಂದು ಅನಂತರಾಜು ಹಾಗೂ ಕುಟುಂಬಸ್ಥರು ಹೇಳಿದ್ದಾರೆ. ವರನ ಕಡೆಯವರು ಹೇಳಿರುವ ಮಾತಿಗೆ ಒಪ್ಪಿದ ಜೀಪ್ ಫಿಲಿಪ್ಪ ಮಗಳಿಗೆ ಹಂಪಿಯಲ್ಲೇ ಮದುವೆ ಮಾಡಿದ್ದಾರೆ.

ಗುರುವಾರ ಸಂಜೆ ಅನಂತರಾಜು ಹಾಗೂ ಕೆಮಿಲ್ ನಿಶ್ಚಿತಾರ್ಥ ನೆರವೇರಿದ್ದು, ಶುಕ್ರವಾರ ಬೆಳಗ್ಗೆ 8:30 ರಿಂದ 9:30ರ ಕುಂಭ ಲಗ್ನ ಶುಭ ಮುಹೂರ್ತದಲ್ಲಿ ಅದ್ಧೂರಿಯಾಗಿ ಮದುವೆ ನಡೆದಿದೆ. ಮದುವೆಯಲ್ಲಿ ಜೀಪ್ ಫಿಲಿಪ್ಪ ಅವರ ಕುಟುಂಬಸ್ಥರು ಹಾಗೂ ಅನಂತರಾಜು ಅವರ ತಾಯಿ ರೇಣುಕಮ್ಮ ಸೇರಿದಂತೆ ಕುಟುಂಬಸ್ಥರು ಹಾಗೂ ಹಂಪೆಯ ಜನ ಈ ಅಪರೂಪದ ಮದುವೆಗೆ ಸಾಕ್ಷಿಯಾಗಿದ್ದಾರೆ. ಶುದ್ಧ ಹಿಂದೂ ಸಂಪ್ರದಾಯದಂತೆ ಮದುವೆ ನಡೆದಿದ್ದು, ಕೆಮಿಲ್ ರೇಷ್ಮೇ ಸೀರೆ ಉಟ್ಟು, ಕೈತುಂಬ ಬಳೆ ತೊಟ್ಟು, ತಲೆ ತುಂಬ ಹೂವು ಮುಡಿದು ಮಿಂಚಿದ್ದಾರೆ.
-
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ












Click it and Unblock the Notifications