ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಪಂಜಾಬ್ನಲ್ಲಿ ಸ್ಪೋಟ; ಇಬ್ಬರು ದುರ್ಮರಣ
ಅಮೃತಸರ್, ಫೆಬ್ರವರಿ 8; ಪಂಜಾಬ್ನ ಸಿಖ್ಖರ ಧಾರ್ಮಿಕ ಮೆರವಣಿಗೆಯಲ್ಲಿ ರಸಾಯಿನಿಕ ವಸ್ತುವೊಂದು ಸ್ಪೋಟಗೊಂಡು ಇಬ್ಬರು ಮೃತಪಟ್ಟು ಹಲವರು ಗಾಯಗೊಂಡ ಘಟನೆ ಶನಿವಾರ ಸಂಜೆ ನಡೆದಿದೆ.
ಘಟನೆಯಲ್ಲಿ ಮೃತಪಟ್ಟವರನ್ನು ಗುರುಪ್ರೀತ್ ಸಿಂಗ್, ಅಮೋಲ್ ಸಿಂಗ್ ಎಂದು ಗುರುತಿಸಲಾಗಿದೆ. ಇತರ ಹನ್ನೊಂದು ಯುವಕರು ಗಾಯಗೊಂಡಿದ್ದಾರೆ.
ಅಮೃತಸರ ದಾಳಿ ಹಿಂದೆ ಪಾಕ್ ಮೂಲದ ಖಲಿಸ್ತಾನ ಉಗ್ರರ ಕೈವಾಡ?
ತರನ್ ಜಿಲ್ಲೆಯಲ್ಲಿ ಛಬ್ಬಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಯುವಕರು ಟ್ರಾಕ್ಟರ್ನಲ್ಲಿ ಗುರುದ್ವಾರಕ್ಕೆ ಹೋಗುವಾಗ ಈ ಘಟನೆ ನಡೆದಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ. ಟ್ರಾಕ್ಟರ್ನಲ್ಲಿ ಇಟ್ಟಿದ್ದ ರಸಾಯಿನಿಕ ವಸ್ತುವಿನಿಂದ ಸ್ಪೋಟ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ. ಸ್ಪೋಟದ ತೀವ್ರತೆ ಹೆಚ್ಚಿದ್ದಿದ್ದರಿಂದ ಗಾಯಾಳುಗಳ ಸಂಖ್ಯೆ ಹೆಚ್ಚಾಗಿ ಎಂದು ತಿಳಿಸಿದ್ದಾರೆ.
ಗಾಯಾಳುಗಳನ್ನು ಗುರುನಾನಕ್ ದೇವ್ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಗಜೀತ್ ಸಿಂಗ್ ತಿಳಿಸಿದ್ದಾರೆ.
Comments
English summary
Blast In Punjab; 2 Persons Dead. A Chemical Powder Cause for this blast, police said.
Story first published: Saturday, February 8, 2020, 21:30 [IST]