ಬೋಗಿಗಳಿಂದ ಬೇರ್ಪಟ್ಟು ಹತ್ತು ಕಿ.ಮೀ. ಚಲಿಸಿದ ರೈಲು ಎಂಜಿನ್
ವಿಶಾಖಪಟ್ಟಣ, ಆಗಸ್ಟ್ 20: ಆಂಧ್ರಪ್ರದೇಶದಲ್ಲಿ ಸೋಮವಾರ ಬೋಗಿಗಳಿಂದ ಬೇರ್ಪಟ್ಟ ರೈಲು ಎಂಜಿನ್, ಕನಿಷ್ಠ ಹತ್ತು ಕಿಲೋಮೀಟರ್ ಚಲಿಸಿದ ಘಟನೆ ನಡೆದಿದೆ. ಎಂಜಿನ್ ಬೇರ್ಪಟ್ಟ ಮೇಲೆ ಪ್ರಯಾಣಿಕರಿದ್ದ ಬೋಗಿಗಳು ನಿಂತಿವೆ. ಈ ಘಟನೆ ಬಗ್ಗೆ ಪ್ರಯಾಣಿಕರು ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿದ್ದಾರೆ.
Engine went ahead, leaving 25 bogies of Visakha express train while on the move near Narsipatnam in Visakhapatnam district this evening. Passengers were panicked. Engine was brought back and attached to the bogies. pic.twitter.com/XjBtlBTahe
— P Pavan (@pavanmirror) August 19, 2019
ಭುವನೇಶ್ವರ್ ಹಾಗೂ ಸಿಕಂದರಾಬಾದ್ ಮಧ್ಯೆ ಸಂಚರಿಸುವ ವಿಶಾಖ ಎಕ್ಸ್ ಪ್ರೆಸ್ ಗೆ ಸೇರಿದ ಎಂಜಿನ್ ಇದಾಗಿದೆ. ನರಸಿಪಟ್ಟಣಂ ಹಾಗೂ ತುನಿ ರೈಲು ನಿಲ್ದಾಣದ ಮಧ್ಯೆ ಬೋಗಿಗಳು ಎಂಜಿನ್ ನಿಂದ ಬೇರ್ಪಟ್ಟಿವೆ. ಎಂಜಿನ್ ಹಾಗೂ ಬೋಗಿಗಳನ್ನು ಬೆಸೆಯುವ ರಾಡ್ ಗಳು ಮುರಿದಿದ್ದರಿಂದ ಈ ಘಟನೆ ಸಂಭವಿಸಿದೆ. ಈ ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ತೊಂದರೆಯಾಗಿಲ್ಲ.

ತಾಂತ್ರಿಕ ಸಿಬ್ಬಂದಿಯ ತಂಡವೊಂದನ್ನು ನೇಮಿಸಿ, ಎಂಜಿನ್ ಮತ್ತು ಬೋಗಿಯನ್ನು ಮತ್ತೆ ಸೇರಿಸಲಾಗಿದೆ. ಈ ಮಾರ್ಗದಲ್ಲಿ ಸಂಚರಿಸುವ ಇತರ ರೈಲುಗಳಿಗೆ ಈ ಕಾರಣಕ್ಕೆ ತಡವಾಗಿವೆ. ರೈಲಿನ ಎಂಜಿನ್ ಮಾತ್ರ ಚಲಿಸುತ್ತಿರುವ ವಿಡಿಯೋ ಮಾಡಿರುವ ಕೆಲವರು, ಅದನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಎಂಜಿನ್ ಬೇರ್ಪಟ್ಟು, ಸಂಚರಿಸಿದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.
-
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
ಕರ್ನಾಟಕ PGCET 2026 ಅಧಿಸೂಚನೆ ಪ್ರಕಟ: ಎಂಬಿಎ ಸೇರಿ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಮಾರ್ಚ್ 23 ರಿಂದ ಅರ್ಜಿ ಆಹ್ವಾನ -
ವಿಶ್ವಮಾತೆ ಎನ್ನುತ್ತಾ ಶ್ರೀಚಾಮುಂಡೇಶ್ವರಿಯ ಕನ್ನಡ ಹಾಡು ಹಂಚಿಕೊಂಡ ಪ್ರಧಾನಿ ಮೋದಿ












Click it and Unblock the Notifications