ನಿರ್ಗತಿಕನ ಶವಕ್ಕೆ ಹೆಗಲು ಕೊಟ್ಟ ಮಹಿಳಾ ಎಸ್ಐಗೆ ಹ್ಯಾಟ್ಸ್ ಆಫ್; ವೈರಲ್ ವಿಡಿಯೋ
ಅಮರಾವತಿ, ಫೆಬ್ರುವರಿ 02: ಹೊಲದಲ್ಲಿ ಸತ್ತು ಬಿದ್ದಿದ್ದ ನಿರ್ಗತಿಕನ ಶವವನ್ನು ಮುಟ್ಟಲು ಇಡೀ ಗ್ರಾಮವೇ ಹಿಂದೇಟು ಹಾಕಿತು. ಗೊತ್ತು ಗುರಿ ಇಲ್ಲದ ಆತನ ಶವ ಹೊರಲು ಯಾರೂ ಮುಂದೆ ಬರದಿದ್ದಾಗ ಆ ಶವಕ್ಕೆ ಮಹಿಳಾ ಎಸ್ ಐ ತಾವೇ ಹೆಗಲುಕೊಟ್ಟಿದ್ದಾರೆ. ಮಹಿಳಾ ಎಸ್ಐ ಶವ ಹೊತ್ತು ನಡೆದಿರುವ ಈ ವಿಡಿಯೋ ವೈರಲ್ ಆಗಿದ್ದು, ಎಸ್ ಐ ಕೆಲಸಕ್ಕೆ ನೆಟ್ಟಿಗರೆಲ್ಲರೂ ಹ್ಯಾಟ್ಸ್ ಆಫ್ ಎನ್ನುತ್ತಿದ್ದಾರೆ.
ಆಂಧ್ರ ಪ್ರದೇಶದ ಶ್ರೀಕಾಕುಲಂ ಎಂಬಲ್ಲಿ ಈ ಸಂಗತಿ ನಡೆದಿದೆ. ಸೋಮವಾರ ಹೊಲವೊಂದರಲ್ಲಿ ನಿರ್ಗತಿಕ ವ್ಯಕ್ತಿಯ ಶವ ಕಂಡುಬಂದಿದೆ. ಆದರೆ ಆ ಶವ ಎತ್ತುಕೊಂಡು ಹೋಗಲು ಗ್ರಾಮದಲ್ಲಿ ಯಾರೂ ಮುಂದೆ ಬರದಿದ್ದಾಗ ಮಹಿಳಾ ಎಸ್ ಐ ತಾವೇ ಶವ ಹೊತ್ತುಕೊಂಡು ಹೊರಟಿದ್ದಾರೆ. ಮುಂದೆ ಓದಿ...

ಗ್ರಾಮಸ್ಥರಿಗೆ ಸಹಾಯಕ್ಕೆ ಮನವಿ ಮಾಡಿದ ಎಸ್ ಐ
ಸೋಮವಾರ ಕಾಸಿಬುಗ್ಗ ಪೊಲೀಸರಿಗೆ ನಿರ್ಗತಿಕ ವ್ಯಕ್ತಿಯೊಬ್ಬ ಸಂಪಂಗಿಪುರಂನ ಅಡವಿ ಕುಟ್ಟೂರಿನ ಹೊಲವೊಂದರಲ್ಲಿ ಸತ್ತುಬಿದ್ದಿರುವುದಾಗಿ ಮಾಹಿತಿ ಬಂದಿದೆ. ಈ ಮಾಹಿತಿ ಬರುತ್ತಿದ್ದಂತೆ ಕಾನ್ ಸ್ಟೆಬಲ್ ಗಳ ಜೊತೆ ಕೊಟ್ಟೂರು ಎಸ್ ಐ ಸಿರಿಶಾ ಸ್ಥಳಕ್ಕೆ ತೆರಳಿದ್ದಾರೆ. ಹೊಲದ ಮಧ್ಯೆ ಶವ ಬಿದ್ದಿದ್ದು, ಅಲ್ಲಿಗೆ ವಾಹನ ತೆರಳಲು ಸಾಧ್ಯವಿಲ್ಲದ ಕಾರಣ ಗ್ರಾಮಸ್ಥರಿಗೆ ಶವ ಕೊಂಡೊಯ್ಯಲು ಸಹಾಯ ಮಾಡುವಂತೆ ಕೇಳಿಕೊಂಡರು.

ತಾವೇ ಶವ ಹೊತ್ತ ಮಹಿಳಾ ಎಸ್ ಐ
ಆದರೆ ಗ್ರಾಮಸ್ಥರು ಯಾರೂ ನಿರ್ಗತಿಕನ ಶವವನ್ನು ಮುಟ್ಟವುದಕ್ಕೆ ಒಪ್ಪಲಿಲ್ಲ. ಆತನ ಶವವನ್ನು ವಾಹನದವರೆಗೆ ಹೊತ್ತುಕೊಂಡು ಹೋಗಲೂ ನಿರಾಕರಿಸಿದ್ದಾರೆ. ಆಗ ತಾವೇ ಶವ ಹೊರುವ ನಿರ್ಧಾರಕ್ಕೆ ಬಂದಿದ್ದಾರೆ ಎಸ್ ಐ. ಲಲಿತಾ ಚಾರಿಟಬಲ್ ಟ್ರಸ್ಟ್ ಸದಸ್ಯನ ಸಹಾಯದೊಂದಿಗೆ ಶವವನ್ನು ತಾವೇ ಎತ್ತಿಕೊಂಡು ಹೋಗಲು ಮುಂದಾದರು.

ಎರಡು ಕಿ.ಮೀವರೆಗೆ ಶವ ಹೊತ್ತರು
ಮೃತದೇಹ ತೆಗೆದುಕೊಂಡು ಹೋಗುವ ವಾಹನ ಹೊಲದಿಂದ ಎರಡು ಕಿಲೋ ಮೀಟರ್ ದೂರದಲ್ಲಿ ನಿಂತಿದ್ದು, ಅಲ್ಲಿಗೆ ಅರ್ಧ ಗಂಟೆಯಲ್ಲಿ ಶವವನ್ನು ಎಸ್ ಐ ಹೊತ್ತುಕೊಂಡು ಹೋಗಿದ್ದು, ಸ್ಥಳೀಯರು ಈ ವಿಡಿಯೋ ಮಾಡಿದ್ದಾರೆ. ಹೊಲಗಳ ನಡುವೆಯೇ ಅವರು ಶವವನ್ನು ವಾಹನದವರೆಗೆ ಸಾಗಿಸಿದರು.
|
ಮಹಿಳಾ ಎಸ್ ಐ ಕಾರ್ಯಕ್ಕೆ ಹ್ಯಾಟ್ಸ್ ಆಫ್
ಮಹಿಳಾ ಎಸ್ ಐ ಶವವನ್ನು ಹೊತ್ತುಕೊಂಡು ಹೋಗುತ್ತಿರುವ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಹಿಳಾ ಎಸ್ ಐ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ನಿರ್ಗತಿಕನ ಶವಕ್ಕೆ ಗೌರವ ಕೊಟ್ಟ ಮಹಿಳಾ ಅಧಿಕಾರಿಗೆ ಹ್ಯಾಟ್ಸ್ ಆಫ್ ಎನ್ನುತ್ತಿದ್ದಾರೆ. ಆತ ಭಿಕ್ಷುಕನಾಗಿದ್ದು, ಹಸಿವಿನಿಂದ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.
-
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ












Click it and Unblock the Notifications