100 ಅಡಿ ಆಳದ ಕಮರಿಗೆ ಉರುಳಿದ ಬಸ್: ಎಂಟು ಪ್ರವಾಸಿಗರ ಸಾವು
ಅಮರಾವತಿ, ಫೆಬ್ರವರಿ 12: ಆಂಧ್ರಪ್ರದೇಶದ ವಿಶಾಖಪಟ್ಟಣಂನ ಅರಕು ಘಾಟ್ ರಸ್ತೆಯ ಕಣಿವೆಯೊಂದಕ್ಕೆ ಟೂರಿಸ್ಟ್ ಬಸ್ ಒಂದು ಉರುಳಿಬಿದ್ದು ಕನಿಷ್ಠ ಎಂಟು ಮಂದಿ ಜೀವ ಕಳೆದುಕೊಂಡ ದುರ್ಘಟನೆ ಶುಕ್ರವಾರ ಸಂಜೆ ಸಂಭವಿಸಿದೆ. ಮೃತರೆಲ್ಲರೂ ಹೈದರಾಬಾದ್ಗೆ ಸೇರಿದವರಾಗಿದ್ದಾರೆ. ಈ ದುರಂತದಲ್ಲಿ ಇತರೆ ಅನೇಕ ಪ್ರಯಾಣಿಕರು ಗಾಯಗೊಂಡಿದ್ದಾರೆ.
ಹೈದರಾಬಾದ್ನ ದಿನೇಶ್ ಟ್ರಾವೆಲ್ಸ್ಗೆ ಸೇರಿದ ಈ ಟೂರಿಸ್ಟ್ ಬಸ್, ಅರಕು ಕಣಿವೆಯ ಸೊಬಗನ್ನು ಪ್ರವಾಸಿಗರಿಗೆ ತೋರಿಸಲು ಸಾಗುತ್ತಿತ್ತು. ಅನಂತಗಿರಿ ಗ್ರಾಮದ ಸಮೀಪದಲ್ಲಿನ ದುಮುಕು ಎಂಬ ಸಣ್ಣಹಳ್ಳಿ ಬಳಿಯ ಕಡಿದಾದ ತಿರುವು ತೆಗೆದುಕೊಳ್ಳುತ್ತಿತ್ತು. ಆಗ ಅದು ಸುಮಾರು 100 ಅಡಿ ಆಳವಾದ ಕಮರಿಗೆ ಉರುಳಿಬಿದ್ದಿದೆ.
ಬಸ್ನಲ್ಲಿ 30 ಜನರು ಪ್ರವಾಸಿಗರಿದ್ದು ಎಲ್ಲರೂ ಹೈದರಾಬಾದ್ನ ಶೈಕ್ಪೇಟ್ನವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಲವು ಗಾಯಾಳುಗಳ ಪರಿಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಆಂಬುಲೆನ್ಸ್ನಲ್ಲಿ ವಿಶಾಖಪಟ್ಟಣಂನ ವಿವಿಧ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಅವಘಡದ ಬಗ್ಗೆ ಸಚಿವ ಅವಂತಿ ಶ್ರೀನಿವಾಸ್ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿ ವಿಜಯ್ ಚಾಂದ್ ಅವರೊಂದಿಗೆ ಮಾತನಾಡಿದ್ದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ.












Click it and Unblock the Notifications