ಜಗನ್ ರೆಡ್ಡಿ ಸಿಎಂ ಪದವಿ ವಹಿಸಿಕೊಂಡ ತಕ್ಷಣ ವೃದ್ಧಾಪ್ಯ ಪಿಂಚಣಿ ಏರಿಕೆಗೆ ಮೊದಲ ಅಂಕಿತ
Recommended Video
ಅಮರಾವತಿ, ಮೇ 30: ಆಂಧ್ರಪ್ರದೇಶದ ಮುಖ್ಯಮಂತ್ರಿ ಆಗಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಗುರುವಾರ ಅಧಿಕಾರ ವಹಿಸಿಕೊಂಡ ತಕ್ಷಣವೇ ಕೆಲವು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಅವುಗಳಲ್ಲಿನ ಪ್ರಮುಖಾಂಶಗಳು ಹೀಗಿವೆ.
* ಮುಂದಿನ ವರ್ಷದಿಂದ ವೃದ್ಧಾಪ್ಯ ವೇತನ 2500 ರುಪಾಯಿಗೆ ಏರಿಕೆ. ಆ ನಂತರ ವರ್ಷಕ್ಕೆ 250 ರುಪಾಯಿಯಂತೆ, ಆ ಮೊತ್ತವು ತಿಂಗಳಿಗೆ 3000 ರುಪಾಯಿ ತಲುಪುವ ತನಕ ಏರಿಕೆ ಮಾಡಲಾಗುತ್ತದೆ.
* ಗ್ರಾಮಸೇವಕರು ಎಂಬ ಹುದ್ದೆ ಮೂಲಕ 4 ಲಕ್ಷ ಉದ್ಯೋಗವನ್ನು ಆಗಸ್ಟ್ 15ರೊಳಗೆ ಸೃಷ್ಟಿಸಲಾಗುತ್ತದೆ. ಸರಕಾರಿ ಯೋಜನೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕೆಲಸ ಅವರದಾಗಿರುತ್ತದೆ.

* ಒಂದು ಹಳ್ಳಿಯಲ್ಲಿ ಪ್ರತಿ 50 ಮನೆಗೆ ಒಬ್ಬ ಗ್ರಾಮ ಸೇವಕರನ್ನು ನೇಮಿಸಲಾಗುತ್ತದೆ. ಅವರು ಸಲ್ಲಿಸುವ ಸೇವೆಗೆ ಪ್ರತಿ ತಿಂಗಳು 5000 ಪಾವತಿಸಲಾಗುತ್ತದೆ.
* ಜನರಿಗೆ ಸೌಲಭ್ಯ ದೊರೆಯದಿದ್ದಲ್ಲಿ ಅಥವಾ ಲಂಚಕ್ಕೆ ಒತ್ತಾಯಿಸುತ್ತಿದ್ದಲ್ಲಿ ದೂರು ನೀಡುವುದಕ್ಕೆ ಮುಖ್ಯಮಂತ್ರಿಯ ಕಚೇರಿಯಲ್ಲಿ ಕಾಲ್ ಸೆಂಟರ್ ತೆರೆಯಲಾಗುತ್ತದೆ.
* ಗ್ರಾಮ ಸಚಿವಾಲಯವನ್ನು ಸ್ಥಾಪಿಸಲಾಗುತ್ತದೆ. ಇಲ್ಲಿ ಹತ್ತು ಮಂದಿಗೆ ಉದ್ಯೋಗವನ್ನು ಒದಗಿಸಲಾಗುತ್ತದೆ.
* 72 ಗಂಟೆಯೊಳಗೆ ದೂರನ್ನು ಪರಿಹರಿಸಲಾಗುತ್ತದೆ.
* ಲಂಚ ಅಥವಾ ಶಿಫಾರಸು ಒಡ್ಡುವವರಿಗೆ ಸರಕಾರಿ ಸೌಲಭ್ಯ ದೊರೆಯುವುದಿಲ್ಲ.
ಇನ್ನು ಇಡೀ ಸರಕಾರದ ಆಡಳಿತವನ್ನು ಮೇಲಿನ ಹಂತದಿಂದ ತಳ ಮಟ್ಟದವರೆಗೆ ಬದಲಾವಣೆ ತರುವುದಾಗಿ ಜಗನ್ ಮೋಹನ್ ರೆಡ್ಡಿ ಭರವಸೆ ನೀಡಿದ್ದಾರೆ.
* ಯಾವುದೇ ಗುತ್ತಿಗೆಯಲ್ಲಿ ಅವ್ಯವಹಾರ ಅಥವಾ ಭ್ರಷ್ಟಾಚಾರ ಕಂಡುಬಂದರೆ ಅವುಗಳನ್ನು ರದ್ದುಪಡಿಸಲಾಗುತ್ತದೆ.
* ಜಾಗತಿಕ ದರಕ್ಕಿಂತ ಆಂಧ್ರಪ್ರದೇಶದಲ್ಲಿ ಪವನ ಶಕ್ತಿಯ ಯೂನಿಟ್ ದರ ಹೆಚ್ಚಿದ್ದು, ವಿದ್ಯುತ್ ದರದ ಇಳಿಕೆ ಮಾಡುವ ಭರವಸೆ.
* ವಿದ್ಯುತ್ ಖರೀದಿ ಒಪ್ಪಂದದ ಪರಿಶೀಲನೆಯಲ್ಲಿದ್ದು, ಮತ್ತೊಮ್ಮೆ ದರದ ಪರಿಶೀಲನೆ ನಡೆಸಿ, ವಿದ್ಯುತ್ ಪೂರೈಕೆ ದರ ಇಳಿಸುವ ಭರವಸೆ.
* ಗುತ್ತಿಗೆ ನೀಡುವ ವಿಚಾರದಲ್ಲಿ ಪಾರದರ್ಶಕತೆ ತರಲು ಹಾಲಿ ನ್ಯಾಯಮೂರ್ತಿಯೊಬ್ಬರ 'ನ್ಯಾಯಾಂಗ ಆಯೋಗ' ನೇಮಕಕ್ಕೆ ಮುಖ್ಯನಾಯಮೂರ್ತಿಗಳಲ್ಲಿ ವಿನಂತಿ.












Click it and Unblock the Notifications