ವೈರಲ್ ಸುದ್ದಿ : ರೇಷ್ಮೆ ಸೀರೆ ಮೇಲೆ 13 ಭಾಷೆಯಲ್ಲಿ 32,200 ಬಾರಿ ಜೈ ಶ್ರೀರಾಮ್ ಬರೆದ ನೇಕಾರ
ಆಂಧ್ರಪ್ರದೇಶ, ಏಪ್ರಿಲ್ 21 : ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯ ಧರ್ಮಾವರಂ ನೇಕಾರರೊಬ್ಬರು ಕೈ ಮಗ್ಗದಲ್ಲಿ ತಯಾರಿಸಿದ ರೇಷ್ಮೆ ಸೀರೆಯಲ್ಲಿ 13 ಭಾರತೀಯ ಭಾಷೆಗಳಲ್ಲಿ 32,200 ಬಾರಿ ಜೈ ಶ್ರೀರಾಮ್ ಅಂತ ಬರೆದು ದಾಖಲೆ ನಿರ್ಮಿಸಿದ್ದಾರೆ. ಈ ರೇಷ್ಮೆ ಸೀರೆಯು 60 ಮೀಟರ್ ಉದ್ದ ಹಾಗೂ 44 ಇಂಚು ಅಗಲವಿದ್ದು, ಹಳದಿ ಹಾಗೂ ಹಸಿರು ಬಣ್ಣದಲ್ಲಿ ಕಂಗೊಳಿಸುತ್ತಿದೆ.
ಧರ್ಮಾವರಂನ ನೇಕಾರರಾದ 40 ವರ್ಷದ ಜುಜಾರು ನಾಗರಾಜು ಕೈಮಗ್ಗ ನಡೆಸುತ್ತಿದ್ದು, ಈ ರೇಷ್ಮೆ ಸೀರೆಯನ್ನು ಸ್ವತಃ ಅವರೇ ತಮ್ಮ ಕೈಯಲ್ಲಿ ನೇಯ್ದಿದ್ದಾರೆ. ಅಲ್ಲದೆ ಈ ವಿಶೇಷ ರೇಷ್ಮೆ ಸೀರೆಗೆ "ರಾಮ ಕೋಟಿ ವಸ್ತ್ರಂ" ಅಂತ ನಾಮಕರಣ ಮಾಡಿದ್ದಾರೆ. ಈ ಸೀರೆಯಲ್ಲಿ ಕೇವಲ ಬೇರೆ ಬೇರೆ ಭಾಷೆಯಲ್ಲಿ ಬರೆದಿರುವ ಶ್ರೀ ರಾಮನ ಘೋಷಣೆಗಳು ಮಾತ್ರವಲ್ಲದೆ, ರಾಮಾಯಣದಲ್ಲಿರುವ ರಾಮನ 168 ವಿಭಿನ್ನ ಚಿತ್ರಗಳನ್ನು ಸಹ ಸೀರೆಯ ಬಾರ್ಡರ್ನಲ್ಲಿ ಚಿತ್ರಿಸಿದ್ದಾರೆ.

ಈ ವಿಶಿಷ್ಟವಾದ ರೇಷ್ಮೆ ಸೀರೆಯನ್ನ ಸಾಕಷ್ಟು ಶ್ರಮ ಹಾಗೂ ಹಣವನ್ನ ನಾಗರಾಜುರವರು ವ್ಯಯ ಮಾಡಿದ್ದಾರೆ. 16 ಕೆ.ಜಿ ತೂಕದ ರೇಷ್ಮೆ ಬಟ್ಟೆಯನ್ನು ವಿನ್ಯಾಸಗೊಳಿಸಲು ಮತ್ತು ನೇಯಲು ಸುಮಾರು ನಾಲ್ಕು ತಿಂಗಳನ್ನ ತೆಗೆದುಕೊಂಡಿದ್ದಾರೆ. ಇವರ ಸಹಾಯಕ್ಕಾಗಿ ಮೂರು ಜನರನ್ನು ನೇಮಿಸಿಕೊಂಡಿದ್ದರು. ಅಲ್ಲದೆ ಈ ಸೀರೆಗೆ ನಾಗರಾಜು ರವರು 1.5 ಲಕ್ಷ ಹಣವನ್ನ ವಿನಿಯೋಗಿಸಿ ಈ ಸೀರೆಯನ್ನ ತಯಾರಿಸಿದ್ದಾರೆ. ಸದ್ಯ ಈ ಸೀರೆಯನ್ನು ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರಕ್ಕೆ ಊಡುಗೊರೆಯಾಗಿ ನೀಡಲು ನಾಗರಾಜು ರವರು ನಿರ್ಧರಿಸಿದ್ದಾರೆ.

ಸದ್ಯ ನೇಕಾರ ನಾಗರಾಜು ರವರು ತಯಾರಿಸಿರುವ ಈ ಸೀರೆಯ ಪೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಪೋಟೋಸ್ ನೋಡಿದ ನೆಟ್ಟಿಗರು ನಾಗರಾಜುರವರ ಶ್ರಮ ಹಾಗೂ ರಾಮನ ಮೇಲೆ ಇಟ್ಟಿರುವ ಭಕ್ತಿಗೆ ಮನಸೋತಿದ್ದಾರೆ. ನೂರಾರು ಮಂದಿ ಜೈ ಶ್ರೀರಾಮ್ ಅಂತ ಕಮೆಂಟ್ ಮಾಡಿದ್ದಾರೆ.
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications