ಅಬ್ಬಾ! ಗುಜರಾತಿಗಳು ಘೋಷಿಸಿದ್ದ ತೆರಿಗೆ ಕಟ್ಟದ ಮೊತ್ತ 18,000 ಕೋಟಿ
ಅಹಮದಾಬಾದ್ (ಗುಜರಾತ್), ಅಕ್ಟೋಬರ್ 2: ಇನ್ ಕಮ್ ಟ್ಯಾಕ್ಸ್ ಡಿಕ್ಲರೇಷನ್ ಸ್ಕೀಮ್ (ಐಡಿಎಸ್) ಅಡಿಯಲ್ಲಿ ಗುಜರಾತಿಗಳು ಘೋಷಣೆ ಮಾಡಿಕೊಂಡ ಮೊತ್ತ ಎಷ್ಟು ಗೊತ್ತಾ? 18,000 ಕೋಟಿ ರುಪಾಯಿ. ಅದು ಕೂಡ ಬರೀ ನಾಲ್ಕು ತಿಂಗಳ ಅವಧಿಯಲ್ಲಿ ಆಚೆಗೆ ಬಂದ ಮೊತ್ತ.
ಇಡೀ ದೇಶದಲ್ಲಿ ಬಯಲಾದ ಲೆಕ್ಕಕ್ಕೆ ನೀಡದ ಹಣದಲ್ಲಿ ಗುಜರಾತಿಗಳ ಪಾಲು 29%. ಇದು ಜೂನ್ ಹಾಗೂ ಸೆಪ್ಟೆಂಬರ್ 2016ರ ಮಧ್ಯೆ ನಡೆದಿದೆ. ಅಪನಗದೀಕರಣ ಘೋಷಣೆಗೂ ಮುನ್ನ ಘೋಷಣೆಯಾದ ಮೊತ್ತ ಇದು. ಮಹೇಶ್ ಶಾರ ಕಾನೂನುಬಾಹಿರ ಆದಾಯ 13,860 ಕೋಟಿ ಬಯಲು ಮಾಡಿದ ಮುಂಚಿನ ಲೆಕ್ಕಾಚಾರ ಇದು.
ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಹಾಕಿದ ಅರ್ಜಿಗೆ ಆದಾಯ ತೆರಿಗೆ ಇಲಾಖೆ ಈ ಉತ್ತರ ನೀಡಿದೆ. ಜೂನ್ ನಿಂದ ಸೆಪ್ಟೆಂಬರ್ 2016ರ ಮಧ್ಯೆ ಗುಜರಾತ್ ನಲ್ಲಿ ಐಡಿಎಸ್ ಅಡಿಯಲ್ಲಿ 18,000 ಘೋಷಣೆ ಆಗಿತ್ತು. ಇಡೀ ದೇಶದಲ್ಲಿ ಘೋಷಣೆಯಾದ 65,250 ಕೋಟಿಗೆ ಲೆಕ್ಕ ಹಾಕಿ ಹೇಳುವುದಾದರೆ ಆ ಮೊತ್ತದ 29%ನಷ್ಟು ಒಂದು ರಾಜ್ಯದಲ್ಲಿ ಸಿಕ್ಕಂತಾಗಿದೆ ಎಂದಿದ್ದಾರೆ.

ಆರ್ ಟಿಐ ಅರ್ಜಿದಾರ ಭರತ್ ಸಿನ್ಹಾ ಝಲ ಕೇಳಿದ ಈ ಪ್ರಶ್ನೆಗೆ ಮಾಹಿತಿ ಒದಗಿಸುವುದಕ್ಕೆ ಆದಾಯ ತೆರಿಗೆ ಇಲಾಖೆ ಎರಡು ವರ್ಷ ತೆಗೆದುಕೊಂಡಿದೆ. ಅರ್ಜಿದಾರರು ಡಿಸೆಂಬರ್ 21,2016ರಲ್ಲಿ ಮಾಹಿತಿ ಕೇಳಿದ್ದರು. ಅಹಮದಾಬಾದ್ ಮೂಲದ ಆಸ್ತಿಗಳ ಮಾರಾಟ ಉದ್ಯಮಿ ಮಹೇಶ್ ಶಾ 13,860 ಕೋಟಿ ಘೋಷಿಸಿದ ನಂತರ ಅರ್ಜಿ ಹಾಕಲಾಗಿತ್ತು.
ಐಡಿಎಸ್ ಅಡಿಯಲ್ಲಿ ಮೊದಲ ಕಂತು ಪಾವತಿಸುವುದಕ್ಕೆ ವಿಫಲವಾದ ನಂತರ ಆತನ ಘೋಷಣೆಯನ್ನು ವಜಾ ಮಾಡಲಾಯಿತು. ಪೊಲೀಸ್ ಅಧಿಕಾರಿಗಳು, ರಾಜಕೀಯ ಮುಖಂಡರು ಹಾಗೂ ಅಧಿಕಾರಿಗಳು ಘೋಷಿಸಿಕೊಂಡ ಹಣದ ಬಗ್ಗೆ ಐಟಿ ಇಲಾಖೆ ತುಟಿ ಬಿಚ್ಚಲಿಲ್ಲ.
"ಇದು ಎರಡು ವರ್ಷದ ಶ್ರಮ. ಮೊದಲಿಗೆ ಅರ್ಜಿ ಕಳೆದುಹೋಗಿದೆ ಎಂದರು. ಆ ನಂತರ ಅರ್ಜಿ ಗುಜರಾತಿ ಭಾಷೆಯಲ್ಲಿದೆ ಮಾಹಿತಿ ನೀಡಲು ಸಾಧ್ಯವಿಲ್ಲ ಎಂಬ ಉತ್ತರ ಬಂತು. ಈ ವರ್ಷದ ಸೆಪ್ಟೆಂಬರ್ ಐದನೇ ತಾರೀಕು ಮುಖ್ಯ ಮಾಹಿತಿ ಆಯುಕ್ತರು ಮಾಹಿತಿ ಒದಗಿಸುವಂತೆ ಸೂಚಿಸಿದ ನಂತರ ಒದಗಿಸಲಾಯಿತು" ಎಂದು ಆರ್ ಟಿಐ ಅರ್ಜಿದಾರ ಝಲ ಹೇಳಿದ್ದಾರೆ.
2016ರ ಜೂನ್ ನಿಂದ ಸೆಪ್ಟೆಂಬರ್ ಮಧ್ಯೆ ಐಡಿಎಸ್ ಅಡಿಯಲ್ಲಿ ಆದಾಯ ಘೋಷಿಸಿಕೊಳ್ಳಲು ಕೇಂದ್ರ ಸರಕಾರ ಅವಕಾಶ ನೀಡಿತ್ತು. ಆ ನಂತರ ಮೂರು ಕಂತಿನಲ್ಲಿ ತೆರಿಗೆ ಪಾವತಿಸಲು ಕಾಲಾವಕಾಶ ಇತ್ತು.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications