ತನ್ನ ವೀರ್ಯದಿಂದ ತಾನೇ ಮಗು ಹೆರಲು ಮುಂದಾದ ಗುಜರಾತ್ ಮಂಗಳಮುಖಿ ವೈದ್ಯೆ
ಅಹಮದಾಬಾದ್, ಫೆಬ್ರವರಿ 18: ಗಂಡಾಗಿ ಹುಟ್ಟಿ ಹೆಣ್ಣಾಗಿ ಪರಿವರ್ತನೆಯಾಗಿರುವ ಮಂಗಳಮುಖಿ ವೈದ್ಯರೊಬ್ಬರು ತಮ್ಮ ವೀರ್ಯದಿಂದ ತಾವೇ ಮಗು ಹೆರಲು ಸಿದ್ಧರಾಗಿದ್ದು, ಇದಕ್ಕಾಗಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲಿದ್ದಾರೆ.
25 ವರ್ಷದ ಜೆನ್ಸೂರ್ ದಯಾರಾ, ಗುಜರಾತ್ ನ ಮೊದಲ ಮಂಗಳಮುಖಿ ವೈದ್ಯೆ ಎನಿಸಿಕೊಂಡವರು. ರಷ್ಯಾದ ವಿಶ್ವವಿದ್ಯಾಲಯದಲ್ಲಿ ಎಂಬಿಬಿಎಸ್ ಪದವಿ ಪಡೆದಿರುವ ಅವರು, ಗುಜರಾತ್ನ ಪಂಚಮಹಲ್ ಗೋಧ್ರಾ ಇವರ ಹುಟ್ಟೂರು. ಗಂಡಾಗಿ ಹುಟ್ಟಿ ಆನಂತರ ಹೆಣ್ಣಾಗಿ ಪರಿವರ್ತನೆಯಾಗಿರುವ ಇವರು, ವೈದ್ಯ ವೃತ್ತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
"ನನಗೆ ಮಗು ಪಡೆಯಬೇಕೆಂಬ ಹಂಬಲವಿದೆ. ಹೀಗಾಗಿ ಗರ್ಭಕೋಶ ಕಸಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಿದ್ದೇನೆ. ನನ್ನ ವೀರ್ಯವನ್ನು ಘನೀಕೃತ ಪ್ರಕ್ರಿಯೆಯಲ್ಲಿ ಶೇಖರಿಸಿಟ್ಟಿದ್ದು, ಶಸ್ತ್ರಚಿಕಿತ್ಸೆ ಯಶಸ್ವಿಯಾದರೆ, ಕೃತಕ ಗರ್ಭಧಾರಣೆ ಮೂಲಕ ನಾನು ನನ್ನದೇ ಮಗು ಪಡೆಯಲು ಸಾಧ್ಯವಿದೆ. ಇದು ಸಾಧ್ಯವಾಗಿಲ್ಲವಾದರೆ ಬಾಡಿಗೆ ತಾಯಿ ಮೂಲಕ ಮಗು ಪಡೆಯುತ್ತೇನೆ" ಎಂದು ಡಾ. ಜೆನ್ಸೂರ್ ದಯಾರಾ ತಿಳಿಸಿದ್ದಾರೆ.

2019ರ ಲೋಕಸಭಾ ಅಧಿವೇಶನದಲ್ಲಿ ಬಾಡಿಗೆ ತಾಯ್ತನದ ಕುರಿತು ಕಾಯ್ದೆ ತರಲಾಯಿತು. ಆದರೆ ಇದರಲ್ಲಿ ಒಂಟಿ ಪುರುಷ ಅಥವಾ ಗೇ, ಲೆಸ್ಬಿಯನ್, ಬೈಸೆಕ್ಸುಯಲ್ ಹಾಗೂ ಮಂಗಳಮುಖಿ ದಂಪತಿ ಅಥವಾ ಲಿವ್ ಇನ್ ರಿಲೇಷನ್ ಷಿಪ್ ನಲ್ಲಿರುವವರು ಬಾಡಿಗೆ ತಾಯ್ತನಕ್ಕೆ ಅರ್ಹರಲ್ಲ ಎಂದು ತಿಳಿಸಿದೆ. ಹೀಗಾಗಿ ಬಾಡಿಗೆ ತಾಯ್ತನ ಅಥವಾ ಗರ್ಭಧಾರಣೆ ಕುರಿತು ಯಾವುದೇ ಕಠಿಣ ಕಾನೂನು ಇಲ್ಲದಿರುವ ಕಾರಣ ವಿದೇಶದಲ್ಲಿ ನೆಲೆಸಲಿರುವುದಾಗಿ ಹೇಳಿದ್ದಾರೆ.
"ನಾನು ಮಂಗಳಮುಖಿ ಎಂಬುದನ್ನು ನನಗೆ ನಾನೇ ಒಪ್ಪಿಸಿಕೊಳ್ಳಲು, ನನ್ನ ಕುಟುಂಬ ಹಾಗೂ ಸಮಾಜವನ್ನು ಒಪ್ಪಿಸಲು ಸಾಕಷ್ಟು ಧೈರ್ಯ ತೆಗೆದುಕೊಂಡಿದ್ದೆ. ಈಗ ಮಗು ಪಡೆಯಲು ಇನ್ನಷ್ಟು ಧೈರ್ಯದ ಅಗತ್ಯವಿದೆ. ಈ ವರ್ಷ ಅಥವಾ ಮುಂದಿನ ವರ್ಷ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದೇನೆ. ನಂತರ ನಾನು ಸಂಪೂರ್ಣ ಮಹಿಳೆ ಎನಿಸಿಕೊಳ್ಳುತ್ತೇನೆ" ಎಂದು ಹೇಳಿದ್ದಾರೆ.
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ












Click it and Unblock the Notifications