ಕೆಟ್ಟ ಹೇರ್ ಕಟ್ ನಾಂದಿಯಾಯಿತು ಗಿನ್ನೆಸ್ ವಿಶ್ವ ದಾಖಲೆಗೆ
ಅಹ್ಮದಾಬಾದ್ (ಗುಜರಾತ್), ಡಿಸೆಂಬರ್ 24: ಒಂದು ದಿನ ಮಾಡಿದ ಕೆಟ್ಟ ಹೇರ್ ಕಟ್ ಕೂಡ ಹೇಗೆ ಒಂದು ಸಾಧನೆಗೆ ಮುನ್ನುಡಿ ಬರೆಯುತ್ತದೆ ಎಂಬುದಕ್ಕೆ ಇಲ್ಲಿ ಉದಾಹರಣೆ ಇದೆ. ಆಕೆ ಹೆಸರು ನೀಲಾಂಶಿ ಪಟೇಲ್. ಹತ್ತು ವರ್ಷದ ಹಿಂದೆ ಕೆಟ್ಟದಾಗಿ ಹೇರ್ ಕಟ್ ಮಾಡಿದರು ಎಂಬ ಸಿಟ್ಟಲ್ಲಿ ಇನ್ನು ತನ್ನ ಕೇಶದ ಮೇಲೆ ಕತ್ತರಿ ಆಡಿಸಲು ಬಿಡಲ್ಲ ಎಂದು ನಿರ್ಧಾರ ಮಾಡಿದ್ದಾರೆ.
ಇದೀಗ ಹದಿನಾರು ವರ್ಷದ ಆಕೆ ಗಿನ್ನೆಸ್ ಬುಕ್ ನಲ್ಲಿ ತಮ್ಮ ಅತ್ಯಂತ ಉದ್ದದ ಕೇಶದ ಮೂಲಕ ಸ್ಥಾನ ಪಡೆದಿದ್ದಾರೆ. ಹದಿಹರೆಯದವರ (ಟೀನೇಜರ್) ವಿಭಾಗದಲ್ಲಿ ನೀಲಾಂಶಿ ಪಟೇಲ್ ಸ್ಥಾನ ಪಡೆದಿದ್ದಾರೆ. ಅವರ ತಲೆಗೂದಲ ಎತ್ತರ 5 ಅಡಿ 7 ಇಂಚು. "ನನಗೆ ಬಹಳ ಕೆಟ್ಟದಾಗಿ ಹೇರ್ ಕಟ್ ಮಾಡಿದ್ದರು. ಆ ನಂತರ ನನ್ನ ತಲೆಗೂದಲ ಮೇಲೆ ಕತ್ತರಿ ಆಡಿಸಲು ಬಿಡಲ್ಲ ಎಂದು ನಿರ್ಧರಿಸಿದೆ. ಆಗ ನನಗೆ ಆರು ವರ್ಷ ವಯಸ್ಸು. ಆಗಿನಿಂದ ಹೇರ್ ಕಟ್ ಮಾಡಿಸಿಲ್ಲ" ಎಂದು ವಿವರಣೆ ನೀಡುತ್ತಾರೆ.
ನೀಲಾಂಶಿಗೆ ತಲೆ ಸ್ನಾನ ಮಾಡುವುದಕ್ಕೆ, ಬಾಚುವುದಕ್ಕೆ ತಾಯಿ ನೆರವಾಗುತ್ತಾರಂತೆ. "ನನ್ನ ಈ ಉದ್ದ ಕೂದಲಿಂದ ಬಹಳ ಕಷ್ಟ ಎದುರಿಸಿದ್ದೀನಿ ಎಂದು ಜನರು ಭಾವಿಸುತ್ತಾರೆ. ಆದರೆ ನಾನು ಯಾವುದೇ ಸಮಸ್ಯೆ ಪಟ್ಟಿಲ್ಲ. ಆಟ ಆಡ್ತೀನಿ ಹಾಗೂ ಬೇರೆಲ್ಲವನ್ನೂ ಮಾಡ್ತೀನಿ. ಈ ಕೇಶರಾಶಿ ನನ್ನ ಪಾಲಿಗೆ ಸೌಂದರ್ಯ ಎನ್ನುತ್ತಾರೆ ನೀಲಾಂಶಿ.

ಯಾವುದಾದರೂ ಕಾರ್ಯಕ್ರಮಕ್ಕೆ ಹೋಗುವಾಗ, ಟೇಬಲ್ ಟೆನಿಸ್ ಆಡುವಾಗ ಕೂದಲನ್ನು ಸುರುಳಿ ಸುತ್ತಿ, ಬನ್ ನಂತೆ ತಲೆಯ ಮೇಲೆ ಕಟ್ಟಿಕೊಳ್ಳುತ್ತೇನೆ. ಅದು ನನಗೆ ಆರಾಮವಾಗಿ ಇರುತ್ತದೆ ಎನ್ನುತ್ತಾರೆ ನೀಲಾಂಶಿ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications