ಒಂದು ಗ್ಲಾಸ್ ನೀಡಲು ಯೋಗ್ಯತೆ ಇಲ್ಲವೆ ಇವರಿಗೆ?
ಯಾದಗಿರಿ, ಜು. 23 : ಯಾದಗಿರಿ ಜಿಲ್ಲಾಧಿಕಾರಿಗಳ ಕಚೇರಿಗೆ ಬರುವ ಜನರಿಗಾಗಿ ಇಡಲಾಗಿರುವ ಕುಡಿಯುವ ನೀರಿಗೆ ಕನಿಷ್ಠ ಗ್ಲಾಸ್ ಸೌಲಭ್ಯ ನೀಡದ ಜಿಲ್ಲಾಡಳಿತ! ಬಡಜನತೆಗಾಗಿ ಒಂದು ಗ್ಲಾಸ್ ಇಡಲು ಯೋಗ್ಯತೆ ಇಲ್ಲವೆ ಇವರಿಗೆ? ಶೇಮ್.. ಶೇಮ್..
ಪ್ರತಿ ದಿನ ಜಿಲ್ಲೆಯ ವಿವಿಧ ಹಳ್ಳಿಗಳಿಂದ ತಮ್ಮ ಕೆಲ ಸಮಸ್ಯೆಗಳ ಪರಿಹಾರಕ್ಕೆ ಜಿಲ್ಲಾಧಿಕಾರಿ ಕಚೇರಿಗೆ ಬರುವ ಜನರಿಗೆ ಬಾಯಾರಿಕೆಯಾದಾಗ ಕುಡಿಯಲು ಶುದ್ಧೀಕರಿಸಿದ ನೀರಿನ ವ್ಯವಸ್ಥೆ ಮಾಡಲಾಗಿದೆ. ಆದರೆ, ಇಡಲಾಗಿರುವ ಕುಡಿಯುವ ನೀರಿಗೆ ಗ್ಲಾಸ್ ಸೌಲಭ್ಯ ಇಲ್ಲದ್ದರಿಂದ ಹೋಟೆಲ್ಗಳಿಗೆ ಹೋಗಿ ನೀರು ಕುಡಿಯುವುದು ಅಥವಾ ನೀರಿನ ಬಾಟಲ್ ಖರೀದಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸಾಲ-ಸೋಲ ಮಾಡಿಕೊಂಡು ತಮ್ಮ ಕೆಲ ಸಮಸ್ಯೆಗಳ ಪರಿಹಾರಕ್ಕೆ ಬರುವ ಜನರಿಗೆ ಜಿಲ್ಲಾಧಿಕಾರಿಯ ಅಂಗಳದಲ್ಲೇ ನೀರಿನ ಸಮಸ್ಯೆ ಎದುರಾಗಿದೆ. ಜಿಲ್ಲಾಧಿಕಾರಿಯನ್ನು ಭೇಟಿ ಮಾಡಲು ಬಂದ ಜನರು ಜಿಲ್ಲಾಧಿಕಾರಿಯ ಪ್ರವೇಶ ದ್ವಾರದಲ್ಲಿ ಗಂಟೆಗಟ್ಟಲೇ ನಿಂತು ಸುಸ್ತಾಗಿ ಉಸಪ್ಪಾ ಎಂದು ನೀರು ಕುಡಿಯಲು ಹೋದಾಗ, ಗ್ಲಾಸ್ ಸೌಲಭ್ಯ ಇಲ್ಲದೆ ಬೊಗಸೆಯಲ್ಲಿ ನೀರು ಕುಡಿಯುವ ದೃಶ್ಯ ಪ್ರತಿದಿನ ಸರ್ವೆ ಸಾಮಾನ್ಯವಾಗಿದೆ.
ಜಿಲ್ಲಾಧಿಕಾರಿಗಳ ಅಂಗಳದಲ್ಲೇ ಸಮಸ್ಯೆಗಳು ಇರುವಾಗ ನಮ್ಮ ಸಮಸ್ಯೆ ಬಗೆಹರಿಯುವುದಾದರೂ ಹೇಗೆ ಎಂಬ ಚಿಂತೆ ಜನರಲ್ಲಿ ಮನೆಮಾಡಿದೆ. ಈ ವಿಷಯ ಸಣ್ಣದೆನಿಸಬಹುದು. ಆದರೆ, ಈ ಸಣ್ಣ ವಿಷಯದ ಬಗ್ಗೆ ಅನೇಕ ಬಾರಿ ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೂ ತಂದರೂ ಗ್ಲಾಸ್ ಮಾತ್ರ ಇಡದೇ ಇರುವುದು ವಿಪರ್ಯಾಸದ ಸಂಗತಿ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹವಾನಿಯಂತ್ರಿತ ಗಾಳಿಗೆ ಕಾರ್ಯನಿರ್ವಹಿಸುತ್ತಾ ಬಿಸ್ಲೇರಿ ಬಾಟಲ್ ನೀರು ಕುಡಿಯುವ ದಪ್ಪ ಚರ್ಮದ ಅಧಿಕಾರಿಗಳಿಗೆ, ಈ ಬಡ ಜನರ ಬೊಗಸೆಯಲ್ಲಿ ನೀರು ಕುಡಿಯುವ ಸಂಕಷ್ಟ ಅವರಿಗೇನು ತಿಳಿಯಬೇಕು? ಎನ್ನುವುದು ಅನೇಕ ಗ್ರಾಮಸ್ಥರ ಪ್ರಶ್ನೆ. ಈ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ.
ತಮ್ಮ ಕಚೇರಿಯ ಇನ್ನಿತರ ಕಾಮಗಾರಿಗಾಗಿ ಸಾವಿರಾರು ರುಪಾಯಿ ಖರ್ಚು ಮಾಡುವ ಜಿಲ್ಲಾಡಳಿತ ಕೇವಲ 3 ರುಪಾಯಿಯ ಪ್ಲಾಸ್ಟಿಕ್ ಗ್ಲಾಸ್ ಅಥವಾ 15 ರುಪಾಯಿಯ ಸ್ಟೀಲ್ ಗ್ಲಾಸ್ ಇಡುವ ಯೋಗ್ಯತೆ ಜಿಲ್ಲಾಡಳಿತಕ್ಕೆ ಇಲ್ಲವೆ ಎಂದು ಗುಡುಗಿದ್ದಾನೆ ತುಮಕೂರ್ ಗ್ರಾಮದ ಮಲ್ಲಪ್ಪ.
ಯಾದಗಿರಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಇಡಲಾಗಿರುವ ಕುಡಿಯುವ ನೀರಿನ ಯಂತ್ರದ ಬಳಿ ಕೂಡಲೇ ಗ್ಲಾಸ್ ವ್ಯವಸ್ಥೆ ಮಾಡುವ ಮೂಲಕ ಜಿಲ್ಲಾಧಿಕಾರಿಗಳು ಸಮಸ್ಯೆಗೆ ಸುಖಾಂತ್ಯಗೊಳಿಸುವರೇ ಎಂಬುದು ಕಾದು ನೋಡಬೇಕಾಗಿದೆ. ಕನಿಷ್ಠ ಇಷ್ಟು ಸಣ್ಣ ಸೌಲಭ್ಯ ನೀಡಲು ಅವರು ವಿಫಲರಾದರೆ ಆ ಜಾಗದಲ್ಲಿ ಇರಬೇಕಾದರೂ ಏತಕ್ಕೆ?
-
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು? -
ವೈಭವ್ ಸೂರ್ಯವಂಶಿ ಕುರಿತು ಬಿಸಿಸಿಐಗೆ ಹೋಯ್ತು ವಿಶೇಷ ಮನವಿ; ಟೀಮ್ ಇಂಡಿಯಾ ಸೇರ್ತಾರಾ ಯುವ ಪ್ರತಿಭೆ? -
ಒಂದು ಬಟನ್ ಒತ್ತಿದರೆ ಬದಲಾಗುತ್ತೆ BMW ಕಾರಿನ ನಂಬರ್ ಪ್ಲೇಟ್, ಹೈಟೆಕ್ ಕಳ್ಳಾಟದ ವಿಡಿಯೋ ಭಾರಿ ವೈರಲ್ -
Asha Bhosle: ಗಾನ ಕೋಗಿಲೆ ಆಶಾ ಭೋಸ್ಲೆ ನಿಧನ: ದೇಶವೇ ಶೋಕದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ಕಂಬನಿ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
ಬೆಂಗಳೂರಿನಲ್ಲಿ ಇಂದು ಶ್ರೀ ಎಂ ಅವರ "ಉಪನಿಷತ್ತುಗಳು ಮತ್ತು ಜೆ.ಕೃಷ್ಣಮೂರ್ತಿ" ಹೊಸ ಕೃತಿ ಬಿಡುಗಡೆ -
ವಾಂಖೆಡೆಯಲ್ಲಿ ಆರ್ಸಿಬಿ-ಮುಂಬೈ ಇಂಡಿಯನ್ಸ್ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ವರದಿ ಹೀಗಿದೆ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Duet Songs: ಆಶಾ ಭೋಸ್ಲೆ-ಲತಾ ಮಂಗೇಶ್ಕರ್ ಸಹೋದರಿಯರ ಕಂಠಸಿರಿಯಲ್ಲಿ ಅರಳಿದ ಮಾಧುರ್ಯ: ಒಟ್ಟಿಗೆ ಹಾಡಿದ ಹಿಟ್ ಹಾಡುಗಳಿವು -
Karnataka Rains: ಸಮುದ್ರ ಮಲ್ಮೈ ಸುಳಿಗಾಳಿ, ಏಪ್ರಿಲ್ 14-17ರವರೆಗೆ ಬೆಂಗಳೂರು, ಇತರ ಜಿಲ್ಲೆಗಳಲ್ಲಿ ಮಳೆ -
ಎಪಿಎಂಸಿಯಲ್ಲಿ ಮೂಟೆಗಳು ಮೈಮೇಲೆ ಬಿದ್ದರೂ ಪವಾಡಸದೃಶ್ಯದಂತೆ ಬದುಕಿದ ಮಹಿಳೆ Video Viral -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ











Click it and Unblock the Notifications