ಭಾರತದಲ್ಲಿ ಬ್ಯಾಂಕ್ ಆರಂಭಿಸಲು ಬಿ.ಆರ್.ಶೆಟ್ಟರು ರೆಡಿ!

ಭಾರತೀಯ ರಿಸರ್ವ್ ಬ್ಯಾಂಕ್ಗೆ ಅರ್ಜಿ ಸಲ್ಲಿಸಿರುವ ಬಿ.ಆರ್.ಶೆಟ್ಟಿ, ದೇಶದಲ್ಲಿ ಬ್ಯಾಂಕ್ ಸ್ಥಾಪಿಸಲು ಅವಕಾಶ ದೊರೆಯುವ ವಿಶ್ವಾಸದಲ್ಲಿದ್ದಾರೆ. ಅನುಮತಿ ದೊರೆತರೆ ಶೆಟ್ಟರು, 800 ಶಾಖೆಗಳನ್ನು ತೆರೆಯಲು ಸಿದ್ಧತೆ ಆರಂಭಿಸಿದ್ದಾರೆ.
ಜಾಗತಿಕ ಮಟ್ಟದಲ್ಲಿ ವಿದೇಶಿ ವಿನಿಮಯ ವರ್ಗಾವಣೆ ಸೇವೆ ಒದಗಿಸುತ್ತಿರುವ ಯುಎಇ ಎಕ್ಸ್ಚೇಂಜ್ ಕಂಪನಿಯ ಸಂಸ್ಥಾಪಕರಾಗಿರುವ ಬಿ.ಆರ್. ಶೆಟ್ಟಿ, ಇದೀಗ ಅದೇ ಕಂಪೆನಿಯ ಹೆಸರಲ್ಲಿ ಬ್ಯಾಂಕಿಂಗ್ ಲೈಸೆನ್ಸ್ ಕೋರಿ ರಿಸರ್ವ್ ಬ್ಯಾಂಕ್ಗೆ ಅರ್ಜಿ ಸಲ್ಲಿಸಿದ್ದಾರೆ.
ಪಿಟಿಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಬ್ಯಾಂಕಿಗ್ ಉದ್ಯಮ ಆರಂಭಿಸುವ ಕುರಿತು ಮಾತನಾಡಿರುವ ಶೆಟ್ಟರು, ನಮ್ಮ ಯುಎಐ ಎಕ್ಸ್ ಚೇಂಜ್ ಸಮೂಹ, ಜಾಗತಿಕವಾಗಿ ಒಂದು ಲಕ್ಷ ಮಂದಿಗೆ ನಿತ್ಯ ಸೇವೆ ಒದಗಿಸುತ್ತಿದೆ. ಬ್ಯಾಂಕಿಗ್ ಲೈಸೆನ್ಸ್ ಸಿಕ್ಕರೆ, ಗ್ರಾಮೀಣ ಪ್ರದೇಶಕ್ಕೆ ಆದ್ಯತೆ ನೀಡುವುದಾಗಿ ಹೇಳಿದ್ದಾರೆ. (ಗಲ್ಫ್ ಶ್ರೀಮಂತರ ಪಟ್ಟಿಯಲ್ಲಿ ಕನ್ನಡಿಗ ಬಿ.ಆರ್ ಶೆಟ್ಟಿ)
ಯಾರು ಅರ್ಜಿ ಹಾಕಿದ್ದಾರೆ : ಉದ್ಯಮಿ ಬಿ.ಆರ್.ಶೆಟ್ಟಿ ಜೊತೆಗೆ ಅನಿಲ್ ಅಂಬಾನಿ, ಕುಮಾರ ಮಂಗಳಂ ಬಿರ್ಲಾ, ರತನ್ ಟಾಟಾ ಒಡೆತನದ ಕಂಪೆನಿಗಳು ಸಹ ಭಾರತದಲ್ಲಿ ಬ್ಯಾಂಕಿಂಗ್ ಲೈಸನ್ಸ್ ಪಡೆಯಲು ಅರ್ಜಿ ಸಲ್ಲಿಸಿವೆ.
ಲೈಸೆನ್ಸ್ ಪಡೆಯಲು ಬಹುದೊಡ್ಡ ಕಂಪನಿಗಳ ಜೊತೆಗೆ ಶೆಟ್ಟರು ಸ್ಪರ್ಧೆ ಎದುರಿಸಬೇಕಾಗುತ್ತದೆ. ನನ್ನ ಪ್ರತಿಸ್ಪರ್ಧಿಗಳು ದೊಡ್ಡವರೇ ಇರಬಹುದು. ಆದರೆ, ನನ್ನ ಸಮೂಹವೇನು ಸಣ್ಣದಲ್ಲ. ನಮಗೆ ಬ್ಯಾಂಕಿಂಗ್ ಲೈಸೆನ್ಸ್ ಸಿಗುತ್ತದೆ ಎಂಬ ವಿಶ್ವಾಸವನ್ನು ಶೆಟ್ಟರು ವ್ಯಕ್ತಪಡಿಸಿದ್ದಾರೆ.
ಶೆಟ್ಟರ ಕುರಿತು : ಕರ್ನಾಟಕದಲ್ಲಿ ಜನಿಸಿದ ಶೆಟ್ಟರು, ಕ್ಲಿನಿಕಲ್ ಫಾರ್ಮಾಸಿಸ್ಟ್ ಶಿಕ್ಷಣ ಪಡೆದು, ಅರಬ್ ಸಂಯುಕ್ತ ಸಂಸ್ಥಾನದಲ್ಲಿ 70ರ ದಶಕದಲ್ಲಿ ಹೆಲ್ತ್ಕೇರ್ ವ್ಯವಹಾರ ಆರಂಭಿಸಿದರು. 1980ರಲ್ಲಿ ಯುಎಇ ಎಕ್ಸ್ಚೇಂಜ್ ಪ್ರಾರಂಭಿಸಿದರು. (ಬುರ್ಜ್ ಖಲೀಫಾದಲ್ಲಿ ಕನ್ನಡ ಡಿಂಡಿಮ)
-
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ? -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
Hardik vs Krunal: ತಮ್ಮ ಹಾರ್ದಿಕ್ ವಿಕೆಟ್ ಕಿತ್ತ ಬೌಲರ್ಗಿಂತ ಹೆಚ್ಚಾಗಿ ಸಂಭ್ರಮಿಸಿದ ಕೃನಾಲ್ ಪಾಂಡ್ಯ, ಭಾರಿ ವೈರಲ್ -
Namma Metro: ಪ್ರಯಾಣಿಕರಿಗೆ ಸಿಹಿ ಸುದ್ದಿ, ಹಳದಿ ಮಾರ್ಗಕ್ಕಾಗಿ ಬಂತು ಹೊಸ ಡ್ರೈವರ್ ಲೆಸ್ ರೈಲು












Click it and Unblock the Notifications