ಪೋರ್ನ್ ಚಟ ಬೆಳೆಸಿದ 'Apple' ಮೇಲೆ ಕೇಸ್

ಟೆನ್ನಿಸ್ಸಿ ಪ್ರಾಂತ್ಯದ ನಿವಾಸಿಯೊಬ್ಬರು ಆಪಲ್ ವಿರುದ್ಧ ಕಾನೂನು ಸಮರ ಸಾರಿರುವ ಸುದ್ದಿಯನ್ನು ಹಫಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ನನಗೆ ಪೋರ್ನ್ ಚಟ ಇರಲಿಲ್ಲ. ಕಂಪನಿ ನನಗೆ ನೀಡಿದ ಸಾಧಕದಲ್ಲಿದ್ದ ದೋಷದಿಂದ ಇದೆಲ್ಲವೂ ಆಗಿದೆ. ಈ ದೋಷದಿಂದ ಅನಿಯಮಿತ ಇಂಟರ್ನೆಟ್ ಸಂಪರ್ಕ ಸಿಕ್ಕಿದ್ದೆ ಮುಳುವಾಗಿದೆ ಎಂದು ಮಾಜಿ ಅಟರ್ನಿ ಕ್ರಿಸ್ ಸೆವಿಯರ್ ದೂರಿದ್ದಾರೆ.
ಸುಮಾರು 50 ಪುಟಗಳ ದೂರಿನಲ್ಲಿ ತನಗೆ ಉಂಟಾದ ತೊಂದರೆಯನ್ನು ಸಂಪೂರ್ಣವಾಗಿ ವಿವರಿಸಿದ್ದಾರೆ. ಅಮೆರಿಕದಲ್ಲಿ ಸಭ್ಯ ನಾಗರೀಕರನ್ನು ಬೆಳೆಸುವ ಕಾನೂನು ಉತ್ತಮವಾಗಿದೆ ಎನ್ನಲಾಗುತ್ತದೆ. ಆದರೆ, ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಆಪಲ್ ಕಂಪನಿಯಿಂದಾದ ಲೋಪ ದೋಷದಿಂದ ನನ್ನ ಬದುಕು ಸ್ಥಿಮಿತ ಕಳೆದುಕೊಂಡಿದೆ ಎಂದು ಕ್ರಿಸ್ ದೂರಿದ್ದಾರೆ.
ಸಮಸ್ಯೆ ಏನು?: ಸಾಮಾನ್ಯವಾಗಿ ಆಪಲ್ ಸಾಧಕಗಳಾದ ಐಫೋನ್, ಐಪ್ಯಾಡ್ ಮುಂತಾದವುಗಳನ್ನು ಗ್ರಾಹಕರಿಗೆ ಮಾರಾಟ ಮಾಡುವ ಮೊದಲು ಸಾಫ್ಟ್ ವೇರ್ ಫ್ಲಿಲ್ಟರ್ ಬಳಸಿ 'ಸೇಫ್' ಮೋಡ್ ನಲ್ಲಿಡಬೇಕಾಗುತ್ತದೆ. ಆದರೆ, ಕ್ರಿಸ್ ಗೆ ಸಿಕ್ಕ ಸಾಧಕದಲ್ಲಿ 'ಸೇಫ್' ಇರಲಿಲ್ಲವಂತೆ.
ಹೀಗಾಗಿ, ಹೊಸ ಸಾಧಕ ಪಡೆದ ತಕ್ಷಣ ಕ್ರಿಸ್ ಸಾಮಾಜಿಕ ಜಾಲ ತಾಣ 'facebook,com' ಬಾಗಿಲು ಬಡಿಯಲು ಯತ್ನಿಸಿದ್ದಾರೆ. ಆದರೆ, ಕೀ ಮಾಡುವಾಗ facebook ಎನ್ನುವುದರ ಬದಲು F**kbook.com ಎಂದು ಕೀ ಮಾಡಿದ್ದಾರೆ. ಇದು ಪೋರ್ನ್ ವೆಬ್ ಸೈಟ್ ಗೆ ಎಂಟ್ರಿ ಕೊಟ್ಟಿದೆ. ಇದರಿಂದ ನನ್ನ ದೈಹಿಕ ಮಾನಸಿಕ ಸ್ಥಿತಿ ಬದಲಾವಣೆಗೊಂಡು ಪೋರ್ನ್ ಸೈಟ್ ನೋಡುವುದೇ ಚಟವಾಗಿ ಬಿಟ್ಟಿದೆ ಎಂದು ಕ್ರಿಸ್ ಹೇಳಿದ್ದಾರೆ.
ಸಾಧಕಗಳು ಸೇಫ್ ಮೋಡ್ ನಲ್ಲಿದ್ದರೆ, ಪೋರ್ನ್ ವೆಬ್ ಸೈಟ್ ಓಪನ್ ಆಗುತ್ತಲೇ ಇರಲಿಲ್ಲ. ಹೀಗಾಗಿ ಆಪಲ್ ಕಂಪನಿಯದ್ದೇ ದೋಷ ಎಂದು ಕ್ರಿಸ್ ದೂರಿದ್ದಾರೆ. ಈ ಚಟ ಹೆಚ್ಚಾಗಿ ಪೋರ್ನ್ ಸೈಟ್ ಹಾಗೂ ನನ್ನ ಹೆಂಡತಿ ನಡುವೆ ಯಾವುದನ್ನು ನೋಡುವುದು ಎಂಬ ಗೊಂದಲದ ಮನಸ್ಥಿತಿ ನನಗೆ ಬಂದು ಬಿಟ್ಟಿತು. ಆಪಲ್ ಉತ್ಪನ್ನಗಳನ್ನು ಬಳಸುವುದೇ ಒಂದು ಚಟ ಅದರಲ್ಲೂ ಇದು ಪೋರ್ನ್ ಸೈಟ್ ಗೆ ದಾರಿ ಮಾಡಿಕೊಂಡರೆ ನಿಯಂತ್ರಣ ಹೇಗೆ ಸಾಧ್ಯ ಎಂದಿದ್ದಾರೆ.
ನನ್ನ ಹೆಂಡತಿ ಅಂಗಾಗಗಳಿಗಿಂತ ಪೋರ್ನ್ ಸೈಟ್ ನ ಯುವ ಹಾಗೂ ಆಕಷಕ ಹುಡುಗಿಯರನ್ನು ನೋಡುವುದೇ ನನಗೆ ಪ್ರಿಯವಾಗಿತ್ತು. ಆಪಲ್ ಸಾಧಕದಿಂದ ಒಟ್ಟಾರೆ ನನ್ನ ಮನಸು, ಸಂಸಾರದ ಸಮತೋಲನ ಕಳೆದುಕೊಂಡಿದೆ ಎಂದು ಕ್ರಿಸ್ ಹೇಳಿದ್ದಾರೆ.
-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ












Click it and Unblock the Notifications