ಉರಗತಜ್ಞನಿಗೇ ಭೀತಿ ಹುಟ್ಟಿಸಿದ ಕಾಳಿಂಗ ಸರ್ಪ
ಶಿವಮೊಗ್ಗ, ಜು. 6 : "ನಾನು ಸಾಕಷ್ಟು ಹಾವುಗಳನ್ನು ಹಿಡಿದಿದ್ದೇನೆ. ಆದರೆ, ಇಷ್ಟು ಉದ್ದವಿರುವ, ಇಷ್ಟು ಭಯಾನಕವಾಗಿರುವ ಸರ್ಪವನ್ನು ಜನ್ಮದಲ್ಲಿ ನೋಡಿಲ್ಲ, ಹಿಡಿದೂ ಇಲ್ಲ. ಇದನ್ನು ನೋಡಿದಾಗ ನನಗೆ ಸ್ವಲ್ಪ ಭಯ ಆಗಿದ್ದು ಕೂಡ ನಿಜ" ಇದು ಶಿವಮೊಗ್ಗದ ಉರಗತಜ್ಞ ಕಿರಣ್ ಅವರ ಉದ್ಘಾರ.
ಉರಗತಜ್ಞರೇ ಈ ಹಾವನ್ನು ನೋಡಿ ಭಯಪಟ್ಟ ಮೇಲೆ ಇದು ಹೇಗಿದ್ದಿರಬಹುದು ಕಲ್ಪಿಸಿಕೊಳ್ಳಬಹುದು. ಶಿವಮೊಗ್ಗ ತಾಲೂಕಿನ ಪುರದಾಳು ಗ್ರಾಮದಲ್ಲಿ ಗ್ರಾಮಸ್ಥರಿಗೆ ಶುಕ್ರವಾರ ಅಚ್ಚರಿ ಕಾದಿತ್ತು. ಅವರೆಂದೂ ನೋಡದಂತಹ ಭಯಾನಕ ಕಾಳಿಂಗ ಸರ್ಪ ಅಲ್ಲಿ ಆಗಮಿಸಿತ್ತು.

ಸುಮಾರು 14 ಅಡಿ ಉದ್ದದ ಕರಿ ಕಾಳಿಂಗ ಸರ್ಪ ಪುರದಾಳು ಗ್ರಾಮದ ಗಂಗಾಧರ ಎಂಬುವವರ ತೋಟದಲ್ಲಿ ಪ್ರತ್ಯಕ್ಷವಾಗಿತ್ತು. ಬೆಚ್ಚಿಬಿದ್ದ ಗಂಗಾಧರ ಅವರು ಕೂಡಲೆ ಉರಗ ಪ್ರೇಮಿ 'ಸ್ನೇಕ್' ಕಿರಣ್ ಅವರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಸ್ನೇಕ್ ಕಿರಣ್ ಅವರು ಬುಸುಗುಡುತ್ತಿದ್ದ ಕಾಳಿಂಗ ಸರ್ಪವನ್ನು ಅತ್ಯಂತ ಚಾಕಚಕ್ಯತೆಯಿಂದ ಪಳಗಿಸಿ ಹಿಡಿದರು ಮತ್ತು ಕಾಡಿನೊಳಗೆ ಸುರಕ್ಷಿತವಾಗಿ ಬಿಟ್ಟುಬಂದರು.
ಕಾಳಿಂಗ ಸರ್ಪ ಬೃಹತ್ ಗಾತ್ರವಿದ್ದರಿಂದ ಸ್ವಲ್ಪ ಗಾಬರಿಯಾಗಿದ್ದ ಕಿರಣ್ ಅವರು ಅದನ್ನು ಹಿಡಿಯಲು ಸಾಕಷ್ಟು ಸಮಯ ತೆಗೆದುಕೊಂಡರು. ಅದನ್ನು ಹಿಡಿಯಲು ಕಿರಣ್ ಅವರು ತಮ್ಮೆಲ್ಲ ಅನುಭವವನ್ನು ಬಳಸಬೇಕಾಯಿತು. ಈ ದೃಶ್ಯವನ್ನು ಅಕ್ಕಪಕ್ಕದ ಗ್ರಾಮಸ್ಥರೆಲ್ಲ ಅತ್ಯಂತ ಕುತೂಲಹದಿಂದ ನೋಡುತ್ತಿದ್ದರು. ಕೊನೆಗೂ ಕಾಳಿಂಗ ಸರ್ಪವನ್ನು ಕಿರಣ್ ಅವರು ಯಶಸ್ವಿಯಾಗಿ ಹಿಡಿದಾಗ ಗ್ರಾಮಸ್ಥರಲ್ಲಿ ನಿರಾಳ ಭಾವ ಮೂಡಿತ್ತು.
ಇಂತಹ ಬೃಹತ್ ಸರ್ಪಗಳು ಅಪರೂಪವೆ. ಆದರೆ, ಜನರು ಭೀತಿಗೊಳಗಾಗಿ ಅವರನ್ನು ಕೊಲ್ಲಲು ಮುಂದಾಗಬಾರದು. ಕೆಣಕಲು ಹೋಗದಿದ್ದರೆ ಅವೇನೂ ಮಾಡುವುದಿಲ್ಲ. ಆದರೆ, ಕಂಡತಕ್ಷಣ ಉರಗತಜ್ಞರಿಗೆ ತಿಳಿಸಬೇಕು ಎಂದು ಉರಗ ಪ್ರೇಮಿ ಕಿರಣ್ ಅವರು ಜನರಲ್ಲಿ ವಿನಂತಿಸಿಕೊಂಡಿದ್ದಾರೆ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications