ಚಿತ್ರಗಳಲ್ಲಿ : ಸ್ಕೂಟರಿನಲ್ಲಿ ದೀಪಿಕಾ ಹಿಂದೆ ಕಿಂಗ್ ಖಾನ್
ಅಗರ್ತಲ, ಜು.2: ಕರ್ನಾಟಕ ಕರಾವಳಿ ಮೂಲದ ರೋಹಿತ್ ಶೆಟ್ಟಿ ನಿರ್ದೇಶನದ 'ಚೆನ್ನೈ ಎಕ್ಸ್ ಪ್ರೆಸ್' ಚಿತ್ರ ನಿಧಾನವಾಗಿ ಸದ್ದು ಮಾಡುತ್ತಿದೆ. ಶಾರುಖ್ ಖಾನ್ ಪತ್ನಿ ಗೌರಿ ಖಾನ್ ನಿರ್ಮಾಣದ ಈ ಚಿತ್ರದಲ್ಲಿ ಶಾರುಖ್ ಹಾಗೂ ದೀಪಿಕಾ ಪಡುಕೋಣೆ ಮುಖ್ಯ ಭೂಮಿಕೆಯಲ್ಲಿದ್ದಾರೆ.
ಜನಪ್ರಿಯ ಟಿವಿ ಹಾಸ್ಯ ಸರಣಿ ಕಾಮಿಡಿ ನೈಟ್ಸ್ ವಿತ್ ಕಪಿಲ್ ಕಾರ್ಯಕ್ರಮದಲ್ಲಿ ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಸ್ಕೂಟರ್ ಹತ್ತಿ ಫೋಸ್ ಕೊಟ್ಟ ಚಿತ್ರ ನಿಮಗಾಗಿ ಇಲ್ಲಿದೆ.
ತ್ರಿಪುರ ವಿಧಾನಸಭೆಗೆ 'ಗೋಲ್ಡನ್ ಜ್ಯುಬಿಲಿ' ಸಂಭ್ರಮ. ಉಜ್ಜಯಂತ ಅರಮನೆ ತುಂಬಾ ದೀಪಗಳನ್ನು ಬೆಳಗಿಸಿ ಚೆಂದಗಾಣಿಸಲಾಗಿದೆ. ಈ ಚೆಂದದ ಚಿತ್ರ ನಿಮಗಾಗಿ ಇಲ್ಲಿದೆ.
ವಿಂಬಲ್ಡನ್ ನಲ್ಲಿ ಈಗ ಸ್ಟಾರ್ ಆಟಗಾರರು ಒಬ್ಬೊಬ್ಬರಾಗಿ ಮನೆಗೆ ತೆರಳುತ್ತಿದ್ದಾರೆ. ರೋಜರ್ ಫೆಡರರ್, ನಡಾಲ್, ಮರಿಯಾ ಶೆರಪೋವಾ, ಅಜರೆಂಕಾ ನಂತರ ಸೆರೆನಾ ವಿಲಿಯಮ್ಸ್ ಅವರು ಟೂರ್ನಿಯಿಂದ ನಿರ್ಗಮಿಸಿದ್ದಾರೆ.
ಜರ್ಮನಿಯ ಸಬಿನ್ ಲಿಶಿಕಿ ವಿರುದ್ಧ ಅಮೆರಿಕದ ಸೆರೆನಾ ವಿಲಿಯಮ್ಸ್ ಸೋತಿದ್ದಾರೆ. ಇಂಗ್ಲೆಂಡಿನ ಆಟಗಾರ ಮರೆ ಗೆಲುವಿನ ಸಂಭ್ರಮದಲ್ಲಿದ್ದಾರೆ. ವಿಂಬಲ್ಡನ್ ನ ಒಂದಷ್ಟು ಚಿತ್ರಗಳು ಇಲ್ಲಿವೆ.
ವೆಸ್ಟ್ ಇಂಡೀಸ್ ನಲ್ಲಿ ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಸ್ನಾಯುಸೆಳೆತಕ್ಕೆ ಒಳಗಾಗಿ ಗಾಯಗೊಂಡಿದ್ದಾರೆ. ಅಂಬಟಿ ರಾಯುಡು ಅವರ ಬದಲಿಗೆ ತಂಡ ಸೇರುತ್ತಿದ್ದಾರೆ. ಬೆಂಗಳೂರಿಗೆ ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಆಗಮಿಸಿ ಚರ್ಚೆ ನಡೆಸಿದ ಚಿತ್ರ ಇಲ್ಲಿದೆ. ಇನ್ನಷ್ಟು ಕುತೂಹಲಕಾರಿ ಚಿತ್ರಗಳು ಇಂದಿನ ಪ್ಯಾಕೇಜಿನಲ್ಲಿದೆ ತಪ್ಪದೇ ನೋಡಿ

ಸ್ಕೂಟರ್ ಸವಾರಿ
ಜನಪ್ರಿಯ ಟಿವಿ ಹಾಸ್ಯ ಸರಣಿ ಕಾಮಿಡಿ ನೈಟ್ಸ್ ವಿತ್ ಕಪಿಲ್ ಕಾರ್ಯಕ್ರಮದಲ್ಲಿ ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಸ್ಕೂಟರ್ ಹತ್ತಿ ಫೋಸ್

ಅಗರ್ತಲ ಅರಮನೆ
ದೀಪಾಂಲಕಾರದಿಂದ ಕಂಗೊಳಿಸುತ್ತಿರುವ ಅಗರ್ತಲದ ವಿಧಾನಸೌಧಕ್ಕೆ 50 ರ ಹರೆಯ

ಧೋನಿ ಗಾಯಾಳು
ವೆಸ್ಟ್ ಇಂಡೀಸ್ ನಲ್ಲಿ ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಸ್ನಾಯುಸೆಳೆತಕ್ಕೆ ಒಳಗಾಗಿ ಗಾಯಗೊಂಡಿದ್ದಾರೆ. ಅಂಬಟಿ ರಾಯುಡು ಅವರ ಬದಲಿಗೆ ತಂಡ ಸೇರುತ್ತಿದ್ದಾರೆ.

ಬೆಂಗಳೂರಲ್ಲಿ ಖರ್ಗೆ
ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಹೆಚ್ಚುವರಿ 300 ಕೋಟಿ ರು ಕೇಂದ್ರ ಸರ್ಕಾರ ನೀಡಲಿದೆ ಎಂದು ಭರವಸೆ ಕೊಟ್ಟ ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ

ಅಲಹಾಬಾದ್ ನಲ್ಲಿ ಮಳೆ
ಗಂಗಾ ನದಿ ತಟದಲ್ಲಿ ಸಾಧುಗಳು ತಾತ್ಕಾಲಿಕವಾಗಿ ನಿರ್ಮಿಸಿಕೊಂಡಿದ್ದ ಗುಡಿಸಲುಗಳು ಗಂಗೆ ಪಾಲಾಗಿದೆ. ಅಲಹಾಬಾದಿನಲ್ಲಿ ಸೋಮವಾರ ಭರ್ಜರಿ ಮಳೆಯಾಗಿದೆ.

ಅಸ್ಸಾಂನಲ್ಲೂ ಮಳೆ
ನಾಗಾಂವ್: ಬಾಳೆದಿಂಡನ್ನು ದೋಣಿಯಾಗಿ ಪರಿವರ್ತಿಸಿಕೊಂಡು ಸೂಕ್ತ ನೆಲೆ ಹುಡುಕಾಟದಲ್ಲಿರುವ ಬೊಂಗಾಂವ್ ಗ್ರಾಮಸ್ಥರು. ಅಸ್ಸಾಂನಲ್ಲೂ ಸೋಮವಾರ ಭಾರಿ ಮಳೆ ಬಿದ್ದಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ.

ವಿಂಬಲ್ಡನ್ ಚಿತ್ರಗಳು
ಜರ್ಮನಿಯ ಲಿಶಿಕಿ ಗೆಲುವಿನ ನಗೆ, ಅಮೆರಿಕಾದ ಸೆರೆನಾ ಸೋಲಿನ ವಿಷಾದ

ವಿಂಬಲ್ಡನ್ ಚಿತ್ರ
ಇಂಗ್ಲೆಂಡಿನ ಆಂಡೆ ಮರೆ ಮತ್ತೊಮ್ಮೆ ವಿಂಬಲ್ಡನ್ ಪ್ರಶಸ್ತಿ ಗೆಲ್ಲುವ ಕನಸು ಹೊತ್ತಿದ್ದು, ಮುಂದಿನ ಸುತ್ತು ತಲುಪಿದ ಖುಷಿಯಲ್ಲಿದ್ದಾರೆ.

ಮಾರ್ಟಿನ್ ಡೆಲ್ ಪೊಟ್ರೋ
ವಿಂಬಲ್ಡನ್ : ಇಟಲಿಯ ಆಂಡ್ರೂಸ್ ಸೆಪ್ಪಿ ಸೋಲಿಸಿದ ನಂತರ ಅರ್ಜೆಂಟೀನಾದ ಯುವಾನ್ ಮಾರ್ಟಿನ್ ಡೆಲ್ ಪೊಟ್ರೋ ಪ್ರತಿಕ್ರಿಯೆ

ವಿಂಬಲ್ಡನ್ ಚಿತ್ರಗಳು
ವಿಂಬಲ್ಡನ್ : ಕ್ರೋಶಿಯಾದ ಇವಾನ್ ಡೊಡಿಗ್ ಅವರನ್ನು ಸೋಲಿಸಿದಾಗ ಸ್ಪೇನಿನ ಡೇವಿಡ್ ಫೆರರ್ ಅಬ್ಬರಿಸಿದ್ದು ಹೀಗೆ

ವಿಂಬಲ್ಡನ್ ಚಿತ್ರಗಳು
ಬಲ್ಗೇರಿಯಾದ ಸೆಟ್ವಾನಾ ಪಿರೊನ್ಕೋವಾ ಅವರನ್ನು ಸೋಲಿಸಿದ ಪೊಲೆಂಡ್ ನ ಅಗ್ನಿಸಂಜ್ಕಾ ರಾವಾನ್ಸ್ಕ
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications