ಮೂರ್ತಿ ಮರುಪ್ರತಿಷ್ಠಾಪನೆ: ಇನ್ಫಿ ಷೇರಿಗೆ ಅಗ್ನಿಪರೀಕ್ಷೆ

ಹಾಗಾಗಿಯೇ ಬೆಳೆದುನಿಂತ 32 ವರ್ಷದ ಕೂಸನ್ನು ಆರೈಕೆ ಮಾಡಲು ಕಂಪನಿಯ ಪಿತಾಮಹ ಎನ್ಆರ್ ನಾರಾಯಣ ಮೂರ್ತಿ ಅವರೇ ಆತಂಕದಿಂದ ಧಾವಿಸಿದ್ದಾರೆ.
ಅವರೇ ಹೇಳಿದಂತೆ ಇದು ನಿಜಕ್ಕೂ ಇನ್ಫಿಗೆ ಅನಪೇಕ್ಷಿತ ಆದರೆ ಅನಿರೀಕ್ಷಿತವಂತೂ ಅಲ್ಲ. ಇತ್ತೀಚೆಗೆ ಇನ್ಫಿ ಆರ್ಥಿಕ ಸಾಧನೆ ಜತೆಜತೆಗೆ ಐಟಿ ವಲಯದಲ್ಲಿ ಆಗುತ್ತಿರುವ ತಲ್ಲಣಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದು ಅನಿರೀಕ್ಷಿತವೇನೂ ಅಲ್ಲ.
ಜೂನ್ 1, 2013ರಿಂದ ಜಾರಿಗೆ ಬರುವಂತೆ ಬೋರ್ಡ್ ಚೇರ್ಮನ್ ಹಾಗೂ ಹೆಚ್ಚುವರಿ ನಿರ್ದೇಶಕರಾಗಿ ನಾರಾಯಣಮೂರ್ತಿ ಇನ್ಫಿಗೆ ಮರಳಿದ್ದಾರೆ. 2011ರಲ್ಲಿ ಇನ್ಫಿಗೆ ರಾಜೀನಾಮೆ ನೀಡಿ ಹೊರ ನಡೆದಾಗ ಕಂಪನಿ ಚೆನ್ನಾಗಿಯೇ ಇತ್ತು. ಆ ನಂತರವೇ ಕಂಪನಿ ಸಾಧನೆ ಇಳಿಜಾರುತ್ತಾ ಸಾಗಿದ್ದು.
BSE 2,407.6065.45 (2.79%) NSE 2,411.7070.25 (3.00%)
ಕಂಪನಿ ಇಂದು ಮತ್ತೊಂದು ಮಜಲಿಗೆ ಬಂದು ನಿಂತಿದೆ. 32 ವರ್ಷದ ಕಂಪನಿಗೆ ಇಂದು ಅಗ್ನಿಪರೀಕ್ಷೆ. ಜತೆಗೆ ನಾರಾಯಣ ಮೂರ್ತಿ ನೇಮಕಕ್ಕೆ ಉದ್ಯಮ ಅದರಲ್ಲೂ ಷೇರು ಮಾರುಕಟ್ಟೆ ಹೇಗೆ ಪ್ರತಿಕ್ರಿಯಿಸುತ್ತದೆ ಮತ್ತು ಪ್ರತಿಸ್ಪಂದಿಸುತ್ತದೆ ಎಂಬುದು ಕುತೂಹಲಕಾರಿಯಾಗಿದೆ.
ಹಾಗೆ ನೋಡಿದರೆ ಮೂರ್ತಿ ಪ್ರತಿಷ್ಠಾಪನೆ ಕಂಪನಿಗೆ ಅತ್ಯಗತ್ಯವಾಗಿತ್ತು. ಮಾಗಿದ ಮೂರ್ತಿ ಇನ್ಫಿಗೆ ಮರುಜೀವ ನೀಡಬೇಕಿದೆ. ಆದರೆ ಮೂರು ದಶಕಗಳ ಹಿಂದೆ ಐಟಿ ಉದ್ಯಮಕ್ಕೆ ಪೂರಕವಾಗಿತ್ತು. ಆದರೆ ಇಂದು ಉದ್ಯಮದ ಅಸ್ತಿತ್ವಕ್ಕೇ ಧಕ್ಕೆ ಬಂದಿದೆ. ಹಾಗಾಗಿ ಡಾ. ನಾರಾಯಣ ಮೂರ್ತಿ ತಮ್ಮ ಇನ್ಫೋಸಿಸ್ ಕಂಪನಿಗೆ ಹೇಗೆ ಚಿಕಿತ್ಸೆ ನೀಡುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ.
ಅದಕ್ಕೂ ಮುನ್ನ ಮಾರುಕಟ್ಟೆಯಲ್ಲಿ ಜನ ಮೂರ್ತಿ ಪ್ರತಿಷ್ಠಾಪನೆಗೆ ಹೇಗೆ ಮಣೆ ಹಾಕುತ್ತಾರೆ ಎಂಬುದನ್ನು ಇಡೀ ಉದ್ಯಮ ಎಚ್ಚರಿಕೆ/ ಆತಂಕದಿಂದ ಎದುರು ನೋಡುತ್ತಿದೆ. ಮುಂಬೈ ಷೇರು ಮಾರುಕಟ್ಟೆಯಲ್ಲಿ trading session ಎಂದಿನಂತೆ ವಾರದ ಆರಂಭ ಪಡೆಯುತ್ತಿದ್ದಂತೆ ಇನ್ಫಿಗೆ ಏನು ಕಾದಿದೆಯೋ ಎಂಬುದನ್ನು ಸಾಮಾನ್ಯ ಜನ ಕುತೂಹಲದಿಂದ ನೋಡುವಂತಾಗಿದೆ.
ಸದ್ಯಕ್ಕಿಂದು ಮೂರ್ತಿ ಅವರ ಹಳೆಯ ರೆಕಾರ್ಡ್ ಅನ್ನು ನೋಡಿ BSE ಧನಾತ್ಮಕವಾಗಿ ಸ್ವಾಗತ ಕೋರುವ ಅಂದಾಜಿದೆಯಾದರೂ ವ್ಯವಹಾರದಲ್ಲಿ ಭಾವನಾತ್ಮಕತೆಗೆ ಜಾಗವಿರುವುದಿಲ್ಲ. ಕಂಪನಿ ಮುಂದಿನ ದಿನಗಳಲ್ಲಿ ಹೇಗೆ ಮತ್ತೆ ಪ್ರಗತಿಪಥದತ್ತ ಹೊರಳುತ್ತದೆ ಎಂಬುದನ್ನು ಆಧರಿಸಿ, BSE ಪ್ರತಿಸ್ಪಂದಿಸುತ್ತದೆ ಅನ್ನುವುದು ವಾಸ್ತವ.
All the Best Mr. Murthy & Infy!
-
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ -
ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಾತಿ 2026: ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು, ಪೋಷಕರೇ ಈಗಲೇ ಗಮನಿಸಿ












Click it and Unblock the Notifications