ಚಾತಕ ಪಕ್ಷಿ ಅಂದರೆ ಯಾವುದು ಅಂದ್ಕೊಂಡಿದ್ದೀರಿ!?
ಬೆಂಗಳೂರು, ಜೂನ್ 1: ಬೆಂಗಳೂರು ಕಂಡ ಮಹಾಮಳೆಗೆ ಮನಸು ಮುದಗೊಂಡಿದೆ. ಹಾಗಾಗಿ ಮತ್ತೆ ಮಳೆಯತ್ತ ಮನಸು ಹೊರಳಿದೆ. ಈ ಸಂದರ್ಭದಲ್ಲಿ ನಿಮಗೆ ಚಾತಕ ಪಕ್ಷಿಯ ಬಗ್ಗೆ ಹೇಳಬೇಕು ಅನಿಸುತ್ತಿದೆ.
ಸದ್ಯಕ್ಕೆ ಚಾತಕಪಕ್ಷಿ ಅಂದ್ರೆ ಸಿಎಂ ಸಿದ್ದರಾಮಯ್ಯ ಅಂತ ಹೇಳಬಹುದು. 'ತಾನು ಮುಖ್ಯಮಂತ್ರಿ ಆಗಿಯೇ ಸಿದ್ಧ' ಎನ್ನುತ್ತಾ ಚಾತಕಪಕ್ಷಿಯಂತೆ ಕಾದಿದ್ದು ಸಿಎಂ ಪಟ್ಟ ದಕ್ಕಿಸಿಕೊಂಡವರು ನಮ್ಮ ಸಿದ್ದರಾಮಯ್ಯ. ಅಂದುಕೊಂಡಿದ್ದನ್ನು ಸಾಧಿಸಿದ ಸಿಎಂ ಸಿದ್ದು ಒಂದರ್ಥದಲ್ಲಿ role model ಆಗಿದ್ದಾರೆ. ಸೋ, ಚಾತಕಪಕ್ಷಿ ಅಂದರೆ ಏನು ಎಂಬುದು ಈಗಾಗಲೇ ನಿಮ್ಮ ಮನಸಿಗೆ ಬಂದಿರಬಹುದು. ಆದರೂ ಈ ಪಕ್ಷಿಯ ಬಗ್ಗೆ ಒಂದಷ್ಟು ಹೇಳಲೇಬೇಕು. ಅದೂ ಮಳೆಗಾಲ ಕಾಲಿಡುತ್ತಿರುವಾಗ.

ಮಳೆಗೂ ಚಾತಕಪಕ್ಷಿಗೂ ಅವಿನಾಭಾವ ಸಂಭಂಧವಿದೆ. ಇದನ್ನು ಇಂಗ್ಲೀಷಿನಲ್ಲಿ Pied Cuckoo, Jacobin Cuckoo, or Pied Crested Cuckoo ಎಂದು ಕರೆಯುತ್ತಾರೆ. Pied Kingfisher (Papiha) ಅಂತಲೂ ಹೇಳುತ್ತಾರೆ. ಇದು ಹೆಚ್ಚಾಗಿ ಏಷ್ಯಾ ಮತ್ತು ಆಫ್ರಿಕಾ ಖಂಡದಲ್ಲಿ ಕಾಣಸಿಗುತ್ತದೆ.
ಜಾನಪದದಲ್ಲಿ ಮತ್ತು ಪುರಾಣಗಳಲ್ಲಿ ಈ ಪಕ್ಷಿಗೆ ವಿಶೇಷ ಸ್ಥಾನವಿದೆ. ಮಳೆಗಾಲದ ನಾಲ್ಕು ಹನಿಗಳಿಗೆ ಈ ಚಾತಕಪಕ್ಷಿ ನಿಜಕ್ಕೂ ಚಾತಕಪಕ್ಷಿಯಂತೆ ಕಾದುಕುಳಿತಿರುತ್ತದೆ. ಮೇ ತಿಂಗಳ ಕೊನೆಕೊನೆಗೆ ಮತ್ತು ಜೂನ್ ತಿಂಗಳಲ್ಲಿ ಇದ್ದಕ್ಕಿದ್ದಂತೆ ಚಾತಕಪಕ್ಷಿ ಕಣ್ಣಿಗೆ ಬೀಳುತ್ತದೆ. ಇದು ಮನುಷ್ಯರಿಗೆ ಕಾಣಿಸಿಕೊಂಡರೆ ಆ ಭಾಗದಲ್ಲಿ ಖಂಡಿತ ಮಳೆ ಆಗುತ್ತದೆ ಎನ್ನುತ್ತದೆ ಜನಪದ.
ಚಾತಕಪಕ್ಷಿಗೆ ಅದರ ತಲೆಯ ಮೇಲೆ ಕೊಕ್ಕೆ ತರಹ ಪುಕ್ಕ ಇರುತ್ತದೆ. ಆ ಕೊಕ್ಕೆಯಲ್ಲಿಯೇ ಅದು ಜೀವಜಲವನ್ನು ಸಂಗ್ರಹಿಸಿಟ್ಟುಕೊಂಡು ಹನಿ ಹನಿ ನೀರನ್ನು ಕುಡಿಯುವುದು. ಮೇಲಿಂದ ಬೀಳುವ ಮಳೆಯ ನೀರೇ ಚಾತಕಪಕ್ಷಿಗೆ ಆಧಾರ. ಏಕೆಂದರೆ ಇದಕ್ಕೆ ಕೆರೆ ನೀರು, ನದಿ ನೀರು ತರಹದ ನಿಂತ ನೀರನ್ನು ತನ್ನ ಕೊಕ್ಕೆಯಿಂದ ಕುಡಿಯಲು ಆಗದು.
ನೀರಿಲ್ಲದೆ ಎಷ್ಟೋ ದಿನಗಳವರೆಗೆ ಇದು ಬದುಕಬಲ್ಲದು. ಈ ಪಕ್ಷಿಗೆ ನೀರಡಿಕೆ ಆದಾಗ ಅದು ವರುಣ ದೇವರಲ್ಲಿ ಪಾರ್ಥಿಸುತ್ತದೆಯಂತೆ. ಅದರ ಪ್ರಾರ್ಥನೆಯನ್ನು ಪ್ರತಿಸಲ ವರುಣ ದೇವನು ಮನ್ನಿಸುತ್ತಾ ಅದಕ್ಕೆ ನೀರುಣಿಸುತ್ತಾನೆ ಎಂಬ ಪ್ರತೀತಿ ಇದೆ. ಚಾತಕಪಕ್ಷಿಯ ನೀರಡಿಕೆ ತಣಿಸಲು ಮಳೆ ಆಗುತ್ತದೆ ಎಂದು ಹಳಬರು ಹೇಳುತ್ತಾರೆ. ಇಂತಿಪ್ಪ ಪಕ್ಷಿಯ ಬಗ್ಗೆ ಕಾಳಿದಾಸ ಕವಿರತ್ನ, ತನ್ನ ಮೇಘದೂತದಲ್ಲಿ ಪ್ರಸ್ತಾಪಿಸಿದ್ದಾನೆ.
ಚಾತಕಪಕ್ಷಿಯ ಚಿತ್ರ ಮೇಲಿನ ಚಿತ್ರದಲ್ಲಿದೆ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ:
-
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ












Click it and Unblock the Notifications