ಚಾತಕ ಪಕ್ಷಿ ಅಂದರೆ ಯಾವುದು ಅಂದ್ಕೊಂಡಿದ್ದೀರಿ!?
ಬೆಂಗಳೂರು, ಜೂನ್ 1: ಬೆಂಗಳೂರು ಕಂಡ ಮಹಾಮಳೆಗೆ ಮನಸು ಮುದಗೊಂಡಿದೆ. ಹಾಗಾಗಿ ಮತ್ತೆ ಮಳೆಯತ್ತ ಮನಸು ಹೊರಳಿದೆ. ಈ ಸಂದರ್ಭದಲ್ಲಿ ನಿಮಗೆ ಚಾತಕ ಪಕ್ಷಿಯ ಬಗ್ಗೆ ಹೇಳಬೇಕು ಅನಿಸುತ್ತಿದೆ.
ಸದ್ಯಕ್ಕೆ ಚಾತಕಪಕ್ಷಿ ಅಂದ್ರೆ ಸಿಎಂ ಸಿದ್ದರಾಮಯ್ಯ ಅಂತ ಹೇಳಬಹುದು. 'ತಾನು ಮುಖ್ಯಮಂತ್ರಿ ಆಗಿಯೇ ಸಿದ್ಧ' ಎನ್ನುತ್ತಾ ಚಾತಕಪಕ್ಷಿಯಂತೆ ಕಾದಿದ್ದು ಸಿಎಂ ಪಟ್ಟ ದಕ್ಕಿಸಿಕೊಂಡವರು ನಮ್ಮ ಸಿದ್ದರಾಮಯ್ಯ. ಅಂದುಕೊಂಡಿದ್ದನ್ನು ಸಾಧಿಸಿದ ಸಿಎಂ ಸಿದ್ದು ಒಂದರ್ಥದಲ್ಲಿ role model ಆಗಿದ್ದಾರೆ. ಸೋ, ಚಾತಕಪಕ್ಷಿ ಅಂದರೆ ಏನು ಎಂಬುದು ಈಗಾಗಲೇ ನಿಮ್ಮ ಮನಸಿಗೆ ಬಂದಿರಬಹುದು. ಆದರೂ ಈ ಪಕ್ಷಿಯ ಬಗ್ಗೆ ಒಂದಷ್ಟು ಹೇಳಲೇಬೇಕು. ಅದೂ ಮಳೆಗಾಲ ಕಾಲಿಡುತ್ತಿರುವಾಗ.

ಮಳೆಗೂ ಚಾತಕಪಕ್ಷಿಗೂ ಅವಿನಾಭಾವ ಸಂಭಂಧವಿದೆ. ಇದನ್ನು ಇಂಗ್ಲೀಷಿನಲ್ಲಿ Pied Cuckoo, Jacobin Cuckoo, or Pied Crested Cuckoo ಎಂದು ಕರೆಯುತ್ತಾರೆ. Pied Kingfisher (Papiha) ಅಂತಲೂ ಹೇಳುತ್ತಾರೆ. ಇದು ಹೆಚ್ಚಾಗಿ ಏಷ್ಯಾ ಮತ್ತು ಆಫ್ರಿಕಾ ಖಂಡದಲ್ಲಿ ಕಾಣಸಿಗುತ್ತದೆ.
ಜಾನಪದದಲ್ಲಿ ಮತ್ತು ಪುರಾಣಗಳಲ್ಲಿ ಈ ಪಕ್ಷಿಗೆ ವಿಶೇಷ ಸ್ಥಾನವಿದೆ. ಮಳೆಗಾಲದ ನಾಲ್ಕು ಹನಿಗಳಿಗೆ ಈ ಚಾತಕಪಕ್ಷಿ ನಿಜಕ್ಕೂ ಚಾತಕಪಕ್ಷಿಯಂತೆ ಕಾದುಕುಳಿತಿರುತ್ತದೆ. ಮೇ ತಿಂಗಳ ಕೊನೆಕೊನೆಗೆ ಮತ್ತು ಜೂನ್ ತಿಂಗಳಲ್ಲಿ ಇದ್ದಕ್ಕಿದ್ದಂತೆ ಚಾತಕಪಕ್ಷಿ ಕಣ್ಣಿಗೆ ಬೀಳುತ್ತದೆ. ಇದು ಮನುಷ್ಯರಿಗೆ ಕಾಣಿಸಿಕೊಂಡರೆ ಆ ಭಾಗದಲ್ಲಿ ಖಂಡಿತ ಮಳೆ ಆಗುತ್ತದೆ ಎನ್ನುತ್ತದೆ ಜನಪದ.
ಚಾತಕಪಕ್ಷಿಗೆ ಅದರ ತಲೆಯ ಮೇಲೆ ಕೊಕ್ಕೆ ತರಹ ಪುಕ್ಕ ಇರುತ್ತದೆ. ಆ ಕೊಕ್ಕೆಯಲ್ಲಿಯೇ ಅದು ಜೀವಜಲವನ್ನು ಸಂಗ್ರಹಿಸಿಟ್ಟುಕೊಂಡು ಹನಿ ಹನಿ ನೀರನ್ನು ಕುಡಿಯುವುದು. ಮೇಲಿಂದ ಬೀಳುವ ಮಳೆಯ ನೀರೇ ಚಾತಕಪಕ್ಷಿಗೆ ಆಧಾರ. ಏಕೆಂದರೆ ಇದಕ್ಕೆ ಕೆರೆ ನೀರು, ನದಿ ನೀರು ತರಹದ ನಿಂತ ನೀರನ್ನು ತನ್ನ ಕೊಕ್ಕೆಯಿಂದ ಕುಡಿಯಲು ಆಗದು.
ನೀರಿಲ್ಲದೆ ಎಷ್ಟೋ ದಿನಗಳವರೆಗೆ ಇದು ಬದುಕಬಲ್ಲದು. ಈ ಪಕ್ಷಿಗೆ ನೀರಡಿಕೆ ಆದಾಗ ಅದು ವರುಣ ದೇವರಲ್ಲಿ ಪಾರ್ಥಿಸುತ್ತದೆಯಂತೆ. ಅದರ ಪ್ರಾರ್ಥನೆಯನ್ನು ಪ್ರತಿಸಲ ವರುಣ ದೇವನು ಮನ್ನಿಸುತ್ತಾ ಅದಕ್ಕೆ ನೀರುಣಿಸುತ್ತಾನೆ ಎಂಬ ಪ್ರತೀತಿ ಇದೆ. ಚಾತಕಪಕ್ಷಿಯ ನೀರಡಿಕೆ ತಣಿಸಲು ಮಳೆ ಆಗುತ್ತದೆ ಎಂದು ಹಳಬರು ಹೇಳುತ್ತಾರೆ. ಇಂತಿಪ್ಪ ಪಕ್ಷಿಯ ಬಗ್ಗೆ ಕಾಳಿದಾಸ ಕವಿರತ್ನ, ತನ್ನ ಮೇಘದೂತದಲ್ಲಿ ಪ್ರಸ್ತಾಪಿಸಿದ್ದಾನೆ.
ಚಾತಕಪಕ್ಷಿಯ ಚಿತ್ರ ಮೇಲಿನ ಚಿತ್ರದಲ್ಲಿದೆ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ:












Click it and Unblock the Notifications