ಪಿರಿಯಾಪಟ್ಟಣ: ಠೇವಣಿ ನಷ್ಟದತ್ತ ಮುಖಮಾಡಿದ ಬಿಜೆಪಿ

Karnataka assembly election -Piriyapatna- big defeat for BJP
ಮೈಸೂರು, ಮೇ 31-ಪಿರಿಯಾಪಟ್ಟಣದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಹಣಾಹಣಿ ಜೋರಾಗಿದೆ. ಸದ್ಯಕ್ಕೆ ಕಾಂಗ್ರೆಸ್ 1000 ಕ್ಕೂ ಅಧಿಕ ಮತಗಳ ಮುನ್ನಡೆ ಕಾಯ್ದುಕೊಂಡಿದೆ. ತಾಜಾ ಫಲಿತಾಂಶ: Congress 62,054 ಮತ, JDS 59,975 ಮತ, BJP 3731, BSRಗೆ 5669 ಮತಗಳು ಸಂದಾಯವಾಗಿವೆ.

ಹಿಂದಿನ ಸುದ್ದಿ: ದಾಖಲೆಯ ಪ್ರಮಾಣದಲ್ಲಿ ಮತಚಲಾಯಿಸಿದ ಪಿರಿಯಾಪಟ್ಟಣದ ಮತದಾರರು ಬಿಜೆಪಿಗೆ ಹೀನಾಯಸೋಲುಣಿಸುತ್ತಿದ್ದಾರೆ. ಬಿಜೆಪಿ ಪಕ್ಷದ ಅಭ್ಯರ್ಥಿ ಸಣ್ಣಮೊಗೇಗೌಡ ಅವರ ಸಾವಿನಿಂದಾಗಿ ಮತದಾನ ಮುಂದೂಡಲಾಗಿತ್ತು. ಅವರ ಸಾವಿನಿಂದಾಗಿ ಪಕ್ಷಕ್ಕೆ ಅನುಕಂಪದ ಮತ ಬೀಳುತ್ತದೆ ಎಂದು ಎಣಿಸಲಾಗಿತ್ತು. ಆದರೆ ಬುದ್ಧಿವಂತ ಮತದಾರ ಬೇರೆಯದೇ ಉತ್ತರ ನೀಡುತ್ತಿದ್ದಾನೆ.

5 ಸುತ್ತಿನ ಮತಗಳ ಎಣಿಕೆ ಮುಗಿದಿದ್ದು ಕಾಂಗ್ರೆಸ್ ಮತ್ತು ಜೆಡಿಎಸ್ ಮಧ್ಯೆ ಜಿದ್ದಾಜಿದ್ದಿ ನಡೆದಿದೆ. ಇದುವರೆಗೂ ಮುನ್ನಡೆ ಕಾಯ್ದುಕೊಂಡಿದ್ದ ಜೆಡಿಎಸ್ ಈಗ ಹಿನ್ನಡೆಯಲ್ಲಿದೆ. ಕಾಂಗ್ರೆಸ್ ಮುನ್ನಡೆ ಸಾಧಿಸುತ್ತಿದೆ.

ಈ ಮಧ್ಯೆ ಬಿಜೆಪಿಯನ್ನು ಕೇಳುವವರೇ ಇಲ್ಲವಾಗಿದೆ. ಬಿಜೆಪಿ ಠೇವಣಿ ನಷ್ಠ ಅನುಭವಿಸಿದರೂ ಆಶ್ಚರ್ಯವಿಲ್ಲ. ಇದರಿಂದ ಅಧಿಕೃತವಾಗಿ ಪ್ರತಿಪಕ್ಷವಾಗಿ ಹೊರಹೊಮ್ಮಬಹುದಾಗಿದ್ದ ಅವಕಾಶವನ್ನು ಬಿಜೆಪಿ ಕಳೆದುಕೊಂಡಿದೆ.

ಜೆಡಿಎಸ್ ಕಾಂಗ್ರೆಸ್ ತಲಾ 18ಸಾವಿರ ಮತಗಳ ಗಡಿ ದಾಟಿದ್ದರೆ ಬಿಜೆಪಿ ಏದುಸಿರುಬಿಡುತ್ತಾ 1 ಸಾವಿರದ ಗಡಿ ದಾಟಿದೆ. ಬಿಎಸ್ಸಾರ್ ಅಭ್ಯರ್ಥಿಯೇ ಬಿಜೆಪಿಗಿಂತ ತುಸು ಮುಂದಿದ್ದಾರೆ.

ಅಭ್ಯರ್ಥಿಗಳು
ಜೆಡಿಎಸ್‌ - ಕೆ.ಮಹದೇವ್
ಕಾಂಗ್ರೆಸ್‌ - ಕೆ.ವೆಂಕಟೇಶ್
ಬಿಜೆಪಿ - ಆರ್.ಟಿ. ಸತೀಶ್ -
ಬಿಎಸ್‌ಆರ್ ಕಾಂಗ್ರೆಸ್‌ - ಎಚ್.ಡಿ. ಗಣೇಶ್
ಕೆಜೆಪಿ - ಎಸ್.ಸಿ.ಬಸವರಾಜು
ಪಕ್ಷೇತರ ಅಭ್ಯರ್ಥಿ - ಕೆ.ಎಸ್. ಶಿವಕುಮಾರ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+