ಜಾಮೀನು ಸಿಕ್ಕರೂ 19 ವರ್ಷ ಜೈಲಿನಲ್ಲಿದ್ದಳು ಮಹಿಳೆ!

ಈ ಘಟನೆ ನಡೆದಿರುವುದು ಕಾನ್ಪುರದಲ್ಲಿ, ಇಲ್ಲಿನ ನಿವಾಸಿ ವಿಜಯಕುಮಾರಿ ಅವರಿಗೆ ನ್ಯಾಯಾಲಯ ಕೊಲೆ ಪ್ರಕರಣದಲ್ಲಿ 1990ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ನಂತರ ಕಾನೂನು ಹೋರಾಟ ನಡೆಸಿದ ಆಕೆ, 1999ರಲ್ಲಿ ಜಾಮೀನು ಪಡೆದರು.
ಆದರೆ, ಜಾಮೀನು ನೀಡಲು ಐದು ಸಾವಿರ ರೂ. ಪಾವತಿಸಬೇಕೆಂದು ನ್ಯಾಯಾಲಯ ಆದೇಶ ನೀಡಿತು. ಆದರೆ, ವಿಜಯ ಕುಮಾರಿ ಅವರಿಗೆ ಯಾರು ಜಾಮೀನು ನೀಡಲಿಲ್ಲ. ಪತಿಯು ಆಕೆಗೆ ಸಹಾಯ ಮಾಡಲಿಲ್ಲ. ಇದರಿಂದ ಅವರು 19 ವರ್ಷ ಜೈಲು ಶಿಕ್ಷೆ ಅನುಭವಿಸುವಂತಾಯಿತು.
ಜೈಲಿಗೆ ತೆರಳುವಾಗ ಗರ್ಭಿಣಿಯಾಗಿದ್ದ ಆಕೆಗೆ ಅಲ್ಲೆ ಮಗು ಹುಟ್ಟಿದೆ. ಆ ಮಗುವಿಗೆ ಸಸ್ಯ 19 ವರ್ಷ ವಯಸ್ಸಾಗಿದ್ದು, ಗಾರ್ಮೆಂಟ್ಸ್ ನಲ್ಲಿ ಹಗಲು-ರಾತ್ರಿ ದುಡಿದು ಆತ ಐದು ಸಾವಿರ ರೂ.ಹೊಂದಿಸಿ ತಾಯಿಯನ್ನು ಬಿಡುಗಡೆಗೊಳಿಸಲು ಮುಂದಾಗಿದ್ದಾನೆ.
ಶುಕ್ರವಾರ ವಿಜಯಕುಮಾರಿ ಅವರು ಜಾಮೀನು ಪಡೆಯಲಿದ್ದು, ಜೈಲಿನಿಂದ ಬಿಡುಗಡೆಗೊಳ್ಳಲಿದ್ದಾರೆ. ಹೆತ್ತ ತಾಯಿಯನ್ನು ಮಗನೇ ಕೂಲಿ ಮಾಡಿ ಬಿಡುಗಡೆಗೊಳಿಸಿದ ಪ್ರಸಂಗವಿದು.
"ಕಷ್ಟದಲ್ಲಿದ್ದಾಗ ನನಗೆ ಯಾರೊಬ್ಬರೂ ಸಹಾಯ ಮಾಡಲಿಲ್ಲ. ಕಾನೂನು ಕೂಡ ನೆರವಿಗೆ ಬರಲಿಲ್ಲ. ನನ್ನ ಹಕ್ಕಿಗಾಗಿ ನಾನು ಹೋರಾಟ ಮಾಡುತ್ತೇನೆ. ನನ್ನ ಮಗನನ್ನು ವಕೀಲನನ್ನಾಗಿ ಮಾಡುತ್ತೇನೆ" ಎಂದು ಬಿಡುಗಡೆ ಆಗಲಿರುವ ವಿಜಯಕುಮಾರಿ ವಿಶ್ವಾಸದಿಂದ ಹೇಳಿದ್ದಾಳೆ.
ಹೇಗಿದೆ ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆ ಎನ್ನುವುದಕ್ಕೆ ಇದೊಂದು ಉದಾಹರಣೆ ಸಾಕು. ಕೊನೆಗೂ ವಿಜಯ ಕುಮಾರಿ ಬಿಡುಗಡೆ ಆಗುತ್ತಿದ್ದು, ಮಗುವಿಗೆ ಉತ್ತಮ ಭವಿಷ್ಯ ರೂಪಿಸಲಿ ಎಂದು ಹಾರೈಸೋಣ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications