ಚಿತ್ರದುರ್ಗ : ಸೇವಾಲಾಲ್ ಸ್ವಾಮಿಯ ಕಾಮಪುರಾಣ

ಮಂಗಳವಾರ ಮಾಧ್ಯಮಗಳ ಮುಂದೆ ತನ್ನ ಅಳಲು ತೋರಿಕೊಂಡಿರುವ ಮಹಿಳೆ ಸ್ವಾಮೀಜಿಯ ವಿರುದ್ದ ಲೈಗಿಂಕ ಕಿರುಕುಳ, ವಂಚನೆ ಸೇರಿದಂತೆ ಹಲವಾರು ಆರೋಪಗಳನ್ನು ಮಾಡಿದ್ದಾಳೆ. ನನ್ನೊಂದಿಗೆ ದೈಹಿಕ ಸಂಬಂಧವಿಟ್ಟುಕೊಂಡಿರುವ ಸ್ವಾಮೀಜಿ ಮದುವೆಯಾಗಲು ನಿರಾಕರಿಸುತ್ತಿದ್ದಾಳೆ ಎಂದು ಮಹಿಳೆ ದೂರಿದ್ದಾಳೆ.
ಮಹಿಳೆ ದಾವಣಗೆರೆಯವಳಾಗಿದ್ದು ಮುರಾರ್ಜಿ ದೇಸಾಯಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಈಕೆ ಎಸ್ಎಸ್ಎಲ್ ಸಿ ಓದುತ್ತಿರುವಾಗಲೇ ಪ್ರೀತಿಸುತ್ತಿದ್ದೇನೆ ಎಂದು ಸ್ವಾಮೀ ಆಕೆಯ ಹಿಂದೆ ಸುತ್ತುತ್ತಿದ್ದ. ನಂತರ ಸ್ವಾಮೀಜಿ ಪಟ್ಟ ಏರಿದರೂ ಮಠಕ್ಕೆ ನನ್ನನ್ನು ಕರೆಸಿಕೊಂಡು ಲೈಂಗಿಕ ಸಂಪರ್ಕವಿಟ್ಟುಕೊಂಡಿದ್ದ ಎಂಬುವುದು ಮಹಿಳೆಯ ಆರೋಪ.
ದಾವಣಗೆರೆಯ ತನ್ನ ಮನೆಗೂ ಅನೇಕ ಸಲ ಸ್ವಾಮಿ ಆಗಮಿಸಿದ್ದು, ಕಾರಿನಲ್ಲಿ ನನ್ನ ಜೊತೆ ಸುತ್ತಾಡಿ, ಐಸ್ ಕ್ರೀಂ ಕೊಡಿಸುತ್ತಿದ್ದ. ವಿವಾಹವಾಗುವ ಬಗ್ಗೆ ಕೇಳಿದರೆ, ಮಾನಸಿಕವಾಗಿ ಮದುವೆಯಾಗಿದ್ದೇವೆ. ತಾಳಿ ಕಟ್ಟಬೇಕೆಂದು ನಿಯಮವಿಲ್ಲ ಎಂದು ಸ್ವಾಮೀಜಿ ಉತ್ತರಿಸುತ್ತಾರೆ ಎಂದು ಮಹಿಳೆ ಕಣ್ಣೀರಿಡುತ್ತಾಳೆ.
ಸ್ವಾಮೀಜಿಯೊಂದಿಗಿನ ಸಂಬಂಧ ತಿಳಿದು ಕುಟುಂಬ ಸದ್ಯಸ್ಯರು ನನ್ನಿಂದ ದೂರವಾಗಿದ್ದಾರೆ. ಸ್ವಾಮೀಜಿ ವಿವಾಹವಾಗದಿದ್ದರೆ, ನನಗೆ ಸಾವೇ ಗತಿ ಎಂದು ಮಹಿಳೆ ಹೇಳಿಕೆ ನೀಡಿದ್ದಾಳೆ. ಮುಂದಿನ ವರ್ಷ ಮದುವೆ ಆಗೋಣ ಎಂದು ಪ್ರತಿ ಬಾರಿಯು ಸ್ವಾಮೀಜಿ ಹೇಳುತ್ತಿದ್ದರು.
ಆದರೆ, ಈಗ ವಿವಾಹವಾಗುವುದಿಲ್ಲ ಎಂದು ಹೇಳಿಕೆ ನೀಡುತ್ತಿದ್ದಾರೆ. ನನ್ನೊಂದಿಗೆ 16 ವರ್ಷಗಳಿಂದ ದೈಹಿಕ ಸಂಪರ್ಕವಿಟ್ಟುಕೊಂಡಿರುವ ಸ್ವಾಮೀಜಿ ನನಗೆ ವಂಚನೆ ಮಾಡಿದ್ದಾರೆ ಎಂದು ಮಹಿಳೆ ದೂರಿದ್ದಾಳೆ. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸ್ವಾಮೀಜಿ ಮಹಿಳೆಯ ನೆಡೆತಯೇ ಸರಿ ಇಲ್ಲ ಎಂದು ಆಕೆಯ ವಿರುದ್ಧ ವಾಗ್ದಾಳಿ ನಡೆಸಿದ್ದಾನೆ.
ಪಿಯುಸಿ ಫೇಲ್ ಸ್ವಾಮಿ : ಸರ್ದಾರ್ ಸೇವಾಲಾಲ್ ಸ್ವಾಮಿ ಕಾಲೇಜು ಮೆಟ್ಟಿಲು ಹತ್ತಿದ್ದಾರೆ. ಆದರೆ, ಪಿಯುಸಿಯಲ್ಲಿ ಸಹ ಪಾಸ್ ಆಗಿಲ್ಲ. ಆದರೆ ಕರಾಟೆ ಮತ್ತಿತರ ಚಟುವಟಿಕೆಯಲ್ಲಿ ಸಕ್ರಿಯಾಗಿದ್ದಾನೆ. ತನ್ನ ಕರಾಟೆ ಮೂಲಕವೇ ಚಿತ್ರದುರ್ಗದ ಬಂಜಾರ ಪೀಠದ ಸ್ವಾಮೀಜಿಗೆ ಮೋಡಿ ಮಾಡಿದ ಈತ ಅವರಿಂದ ದೀಕ್ಷೆ ಪಡೆದು ಆಶ್ರಮಕ್ಕೆ ಸ್ವಾಮೀಜಿಯಾಗಿ ಸೇರಿಕೊಂಡಿದ್ದಾನೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications