ಲೇಹ್ ನಲ್ಲಿ ಚೀನಿಯರ ಮತ್ತೊಂದು ಟೆಂಟ್ ಸ್ಥಾಪನೆ

ಡಿಬಿಓ ವಲಯದಲ್ಲಿ ಚೀನಿ ಸೇನೆಯು ಸ್ಥಾಪಿಸಿರುವ ಶಿಬಿರಗಳ ಸಂಖ್ಯೆ ಐದಕ್ಕೇರಿದೆ.ಚೀನಿ ಪಡೆಗಳು ತಾವು ಅತಿಕ್ರಮಿಸಿರುವ ಡಿಬಿಓ ವಲಯದಿಂದ ಹಿಂದೆ ಸರಿಯುವ ಯಾವುದೇ ಲಕ್ಷಣಗಳೂ ಕಂಡುಬರುತ್ತಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಡಿಬಿಓ ವಲಯದಿಂದ ಹಿಂದೆ ಸರಿಯ ಬೇಕಾದರೆ ಅಲ್ಲಿನ ವಿವಾದಾತ್ಮಕ ಸ್ಥಳವೊಂದರಲ್ಲಿ ಭಾರತೀಯ ಸೇನೆಯು ನಿರ್ಮಿಸಿರುವ ಕೆಲವು ಬಂಕರ್ಗಳನ್ನು ತೆಗೆದುಹಾಕಬೇಕೆಂಬ ಷರತ್ತನ್ನು ಚೀನಿ ಸೇನೆಯು ಭಾರತಕ್ಕೆ ವಿಧಿಸಿದೆ ಎನ್ನಲಾಗಿದೆ. ಈ ವಿವಾದಾತ್ಮಕ ಸ್ಥಳವನ್ನು ಚೀನಾವು ತನಗೆ ಸೇರಿದ್ದೆಂದು ವಾದಿಸುತ್ತಿದೆ.
ಚೀನಿ ಪಡೆಗಳು ಡಿಬಿಓ ವಲಯದಲ್ಲಿ 19 ಕಿ.ಮೀ. ಒಳನುಗ್ಗಿದ್ದು, ಅಲ್ಲಿ ಕಳೆದ ಮೂರು ವಾರಗಳಿಂದ ಸುಮಾರು 50 ಚೀನಿ ಸೈನಿಕರು ಬೀಡುಬಿಟ್ಟಿದ್ದಾರೆ. ಏತನ್ಮಧ್ಯೆ ಚೀನಿ ಸೈನಿಕರು ಗಡಿಯಾಚೆಯಿಂದ ಟ್ರಕ್ಗಳು ಹಾಗೂ ಲಘು ವಾಹನಗಳ ಮೂಲಕ ಅವಶ್ಯಕ ಸಾಮಾಗ್ರಿಗಳನ್ನು ತರಿಸಿಕೊಳ್ಳುತ್ತಿದ್ದಾರೆಂಬ ಮಾಹಿತಿಯೂ ದೊರೆತಿದೆ.
ಈ ಆಯಕಟ್ಟಿನ ಜಾಗದಿಂದ ಭಾರತವು ತನ್ನ ಬಂಕರ್ಗಳನ್ನು ತೆಗೆದುಹಾಕಬೇಕೆಂಬ ತನ್ನ ಬೇಡಿಕೆಗೆ ಚೀನಾವು ಬಲವಾಗಿ ಅಂಟಿಕೊಂಡಿರುವ ಕಾರಣದಿಂದಲೇ ಕಳೆದ ಒಂದುವಾರದಿಂದ ಉಭಯದೇಶಗಳ ಸೇನಾಧಿಕಾರಿಗಳ ಮಧ್ಯೆ ಧ್ವಜ ಸಭೆಯು ನಡೆಯಲು ಸಾಧ್ಯವಾಗಿಲ್ಲ ಎನ್ನಲಾಗಿದೆ.
ಏ.15 ರಿಂದ ಭಾರತೀಯ ಗಡಿಯಲ್ಲಿ ಚೀನಿ ತಂಡ ಸುತ್ತಾಡಲೇ ಇದೆ. ಅದರಲ್ಲೂ ವಿವಾದಿತ ಗಡಿಭಾಗದಲ್ಲೇ ಚೀನಿ ಪಡೆ ಕಾಣಿಸಿಕೊಂಡಿರುವುದು ಆತಂಕಕಾರಿಯಾಗಿದೆ.
ಚೀನಿ ತಂಡ ಬೀಡು ಬಿಟ್ಟಿರುವ ಸ್ಥಳಕ್ಕೆ ಪೂರಕ ವಾಹನಗಳು, ಇನ್ನಷ್ಟು ಸಾಮಾನು ಸರಂಜಾನುಗಳು ಪ್ರತಿ ದಿನ ಸೇರ್ಪಡೆಗೊಳ್ಳುತ್ತಿದೆ ಎಂಬ ವಿಷಯ ಹೊರ ಬಿದ್ದಿದೆ. ಇದೆಲ್ಲವೂ ಧ್ವಜ ಸಭೆ ನಡೆಯದೆ ವಿಫಲವಾದ ನಂತರದ ಬೆಳವಣಿಗೆಯಾಗಿದೆ.
ಲಡಾಕ್ ನಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಸರಿಯಾದ ಸಮಯದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು ಸದ್ಯಕ್ಕೆ ಯುದ್ಧದ ಪರಿಸ್ಥಿತಿ ಎದುರಾಗಿಲ್ಲ, ಜನತೆ ಆತಂಕಪಡಬೇಕಾಗಿಲ್ಲ ಎಂದು ಕಾಂಗ್ರೆಸ್ ವಕ್ತಾರ ಸಂದೀಪ್ ದೀಕ್ಷಿತ್ ಹೇಳಿದ್ದಾರೆ.
ಕೇಂದ್ರ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಅವರು ಸದ್ಯ ಮಾಸ್ಕೋದಲ್ಲಿದ್ದು, ಚೀನಾ ಅತಿಕ್ರಮಣದ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಿಲ್ಲ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications