ಚಿತ್ರ ಚುಟುಕು ಸುದ್ದಿ : ಗ್ರಹಣ, ಜಾತ್ರೆ, ಕ್ರಿಕೆಟ್
ಬೆಂಗಳೂರು, ಏ.26: ಚಂದ್ರ ಗ್ರಹಣ, ಪ್ರತಿಭಟನೆ, ಕ್ರಿಕೆಟ್ ಚಿತ್ರಗಳ ಜೊತೆಗೆ ಧಾರ್ಮಿಕ ಆಚರಣೆಗಳ ಚಿತ್ರಗಳು ಇಂದಿನ ಚಿತ್ರಾವಳಿಯಲ್ಲಿ ನಿಮಗಾಗಿ ಕಾದಿದೆ.
ಇದರ ಜೊತೆಗೆ 'ಭಾರತೀಯ ಸಿನಿಮಾಕ್ಕೆ ನೂರರ ಸಂಭ್ರಮ' ಕಾರ್ಯಕ್ರಮಕ್ಕೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಮನೀಶ್ ತಿವಾರಿ ಅವರು ಚಾಲನೆ ನೀಡಿದ್ದಾರೆ. ದೆಹಲಿಯ ಹಸುಳೆ ಮೇಲಿನ ಅತ್ಯಾಚಾರ ಖಂಡಿಸಿ ಹಲವೆಡೆ ಪ್ರತಿಭಟನೆ ಮುಂದುವರೆದಿದೆ.
ಐಪಿಎಲ್ 6 ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಾಯಕ ಎಂಎಸ್ ಧೋನಿ ಅವರ ಭರ್ಜರಿ ಬ್ಯಾಟಿಂಗ್ ಮೂಲಕ ಜಯ ತಂದಿತ್ತಾರೆ. ಉಳಿದಂತೆ ಕೆಲವು ಸಾಂಪ್ರದಾಯಿಕ ಆಚರಣೆಗಳ ಚಿತ್ರಗಳು ಚಿತ್ರಾವಳಿಯಲ್ಲಿದೆ.. ಇನ್ನಷ್ಟು ನಿರೀಕ್ಷಿಸಿ...

ಚಿತ್ರ ಚುಟುಕು ಸುದ್ದಿ : ಗ್ರಹಣ, ಜಾತ್ರೆ, ಕ್ರಿಕೆಟ್
ಬೆಲೂರಸ್ ನ ರಾಜಧಾನಿ ಮಿನ್ಸ್ಕ್ ನಲ್ಲಿ ಗುರುವಾರ ರಾತ್ರಿ ಕಂಡ ಪಾರ್ಶ್ವ ಚಂದ್ರ ಗ್ರಹಣ ಚಿತ್ರ.AP/PTI Photo

ಚಿತ್ರ ಚುಟುಕು ಸುದ್ದಿ : ಗ್ರಹಣ, ಜಾತ್ರೆ, ಕ್ರಿಕೆಟ್
ಕಠ್ಮಂಡು: ಲ್ಹುತಿ ಪೂರ್ಣಿಮಾ ಹಬ್ಬದ ಅಂಗವಾಗಿ ಪವಿತ್ರ ಜಲವನ್ನು ಪ್ರೋಕ್ಷಿಸಿಕೊಳ್ಳುತ್ತಿರುವ ನೇಪಾಳಿ ಹಿಂದೂ ಭಕ್ತೆ

ಚಿತ್ರ ಚುಟುಕು ಸುದ್ದಿ : ಗ್ರಹಣ, ಜಾತ್ರೆ, ಕ್ರಿಕೆಟ್
ಹರಿದ್ವಾರ: ಚಂದ್ರ ಗ್ರಹಣದ ಅಂಗವಾಗಿ ಪವಿತ್ರ ನದಿ ಗಂಗೆಗೆ ಆರತಿ ಬೆಳಗುತ್ತಿರುವ ಭಕ್ತ ಸಮೂಹ

ಚಿತ್ರ ಚುಟುಕು ಸುದ್ದಿ : ಗ್ರಹಣ, ಜಾತ್ರೆ, ಕ್ರಿಕೆಟ್
ಗುರ್ ಗಾಂವ್: ಮಹಿಳಾ ಪ್ರತಿಭಟನಾಕಾರರು ಬೊಂಬೆಗಳು, ಕೈ ಬಳೆ ಹಿಡಿದುಕೊಂಡು ರಕ್ಷಣೆಗಾಗಿ ಬೀದಿಗಿಳಿದ್ದಾರೆ. ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಖಂಡಿಸಿ ದೇಶದ ವಿವಿಧೆಡೆ ಪ್ರತಿಭಟನೆ ಮುಂದುವರೆದಿದೆ.

ಚಿತ್ರ ಚುಟುಕು ಸುದ್ದಿ : ಗ್ರಹಣ, ಜಾತ್ರೆ, ಕ್ರಿಕೆಟ್
ನವದೆಹಲಿ: ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಮನೀಶ್ ತಿವಾರಿ ಕೈಗೆ ಸಿಕ್ಕ ಸಿನಿಮಾ ಮೂವಿಂಗ್ ಕೆಮೆರಾ.. ಭಾರತೀಯ ಸಿನಿಮಾ 100 ಚಿತ್ರೋತ್ಸವಕ್ಕೆ ಚಾಲನೆ

ಚಿತ್ರ ಚುಟುಕು ಸುದ್ದಿ : ಗ್ರಹಣ, ಜಾತ್ರೆ, ಕ್ರಿಕೆಟ್
ಚೆನ್ನೈ: ಹೈದರಾಬಾದಿನ ಸನ್ ರೈಸರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗೆಲುವು ಸಾಧಿಸಿದಾಗ ನಾಯಕ ಧೋನಿ ಕುಣಿದಿದ್ದು ಹೀಗೆ.. ಗ್ಯಾಲರಿಯಲ್ಲಿ ಅವರ ಪತ್ನಿ ಸಾಕ್ಷಿ ಗಂಡನನ್ನು ನೋಡುತ್ತಿದ್ದಾರೆ

ಚಿತ್ರ ಚುಟುಕು ಸುದ್ದಿ : ಗ್ರಹಣ, ಜಾತ್ರೆ, ಕ್ರಿಕೆಟ್
ಫರಿದಾಬಾದ್: ಸ್ವಯಂ ರಕ್ಷಣೆಗಾಗಿ ಸಮರ ಕಲೆ ಅಭ್ಯಾಸ, ತರಬೇತಿ ನಿರತ ವಿದ್ಯಾರ್ಥಿನಿಯರು

ಚಿತ್ರ ಚುಟುಕು ಸುದ್ದಿ : ಗ್ರಹಣ, ಜಾತ್ರೆ, ಕ್ರಿಕೆಟ್
ಕೊಲ್ಹಾಪುರ: ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ಮಧ್ಯಪ್ರದೇಶ ಸೇರಿದಂತೆ ಹಲವೆಡೆಯಿಂದ ಅಸಂಖ್ಯ ಭಕ್ತಾದಿಗಳು ಜ್ಯೋತಿಬಾ ಯಾತ್ರೆಯಲ್ಲಿ ಪಾಲ್ಗೊಂಡರು












Click it and Unblock the Notifications