ಫೋನ್,ಲ್ಯಾಪ್ ಟ್ಯಾಪ್ ಇದೆ ಪಾಯಿಖಾನೆ ಇಲ್ಲ

ಭಾರತದ ಪ್ರಧಾನ ನೋಂದಣಾಧಿಕಾರಿ ನೇತೃತ್ವದಲ್ಲಿ ನಡೆಸಿದ ಕೊಳೆಗೇರಿ ಕುಟುಂಬಗಳ ಕುರಿತ ಸಮೀಕ್ಷಾ ವರದಿಯನ್ನು ಗುರುವಾರ ಪ್ರಕಟಿಸಲಾಗಿದ್ದು ವರದಿಯು, ಸುಮಾರು 6.8 ಕೋಟಿ ಭಾರತೀಯರು ಕೊಳೆಗೇರಿಯಲ್ಲಿ ವಾಸಿಸುತ್ತಿದ್ದಾರೆ ಎನ್ನಲಾಗಿದೆ. ಸ್ಲಂಗಳಲ್ಲಿ ವಿದ್ಯುತ್ ಸಂಪರ್ಕವಿದೆ. ಎಲ್ಲರೂ ಮೊಬೈಲ್ ಫೋನ್ ಬಳಸುತ್ತಿದ್ದಾರೆ. ಟಿವಿ ಸಾಮಾನ್ಯ ವಿಷಯವಾಗಿದೆ. ಕೆಲವರು ಲ್ಯಾಪ್ ಟಾಪ್ ಕೂಡಾ ಬಳಸುತ್ತಿದ್ದಾರೆ. ಆದರೆ, ಶೌಚಾಲಯ ಮಾತ್ರ ಇಲ್ಲ ಎಂದು ತಿಳಿದು ಬಂದಿದೆ.
ಬಹುತೇಕ ಕೊಳೆಗೇರಿ ಕುಟುಂಬಗಳು ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು , ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಹಾಗೂ ಮಧ್ಯ ಪ್ರದೇಶದಲ್ಲಿ ನೆಲೆನಿಂತಿದೆ ಎಂದು ಅದು ಹೇಳಿದೆ. ಸಮೀಕ್ಷೆಯ ಮುಖ್ಯಾಂಶಗಳ ಕುರಿತು ವಿವರ ನೀಡಿದ ಸಮೀಕ್ಷಾ ಆಯುಕ್ತ ಸಿ.ಚಂದ್ರವೌಳಿ, ಸಮೀಕ್ಷೆಗೆ ಒಳಪಡಿಸಿದ ಒಟ್ಟು 1.73 ಕೋಟಿ ಮನೆಗಳು ಭಾರತದ ವಿವಿಧ ಭಾಗಗಳಲ್ಲಿ ನೆಲೆ ಕಾಯ್ದುಕೊಂಡಿದ್ದು ಅದರಲ್ಲಿ ಸುಮಾರು 1.37ಕೋಟಿ ಮನೆಗಳು ಕೊಳೆಗೇರಿ ಪ್ರದೇಶದಲ್ಲಿದೆ ಎಂದು ಹೇಳಿದ್ದಾರೆ.
ಮಿಲಿಯನ್ಗಿಂಲೂ ಮೇಲ್ಪಟ್ಟ ಜನಸಂಖ್ಯೆಯನ್ನು ಹೊಂದಿರುವ 19 ಪ್ರಮುಖ ನಗರಗಳ ಪೈಕಿ ಶೇ.25 ಕುಟುಂಬಗಳು ಸ್ಲಂಗಳಲ್ಲಿದೆ ಎಂದು ಅವರು ತಿಳಿಸಿದ್ದಾರೆ. ಕೊಳೆಗೇರಿ ಕುಟುಂಬಗಳು ಹೊಂದಿರುವ ವಿವಿಧ ಸೌಲಭ್ಯಗಳ ಕುರಿತು ಬೆಳಕು ಚೆಲ್ಲಿದ ವೌಳಿ, ಶೇ.90 ಸ್ಲಂ ವಾಸಿಗಳಿಗೆ ವಿದ್ಯುತ್ ಸೌಲಭ್ಯವಿದೆ. ಶೇ.70 ಜನರು ಟಿವಿಯನ್ನು ಹೊಂದಿದ್ದಾರೆ.
ಆದರೆ ಕೇವಲ ಶೇ.10.4 ಕೊಳೆಗೇರಿ ನಿವಾಸಿಗಳು ಮಾತ್ರ ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ ಹೊಂದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಸಚಿವ ಮಾಕನ್ ಮಾತನಾಡಿ, 2001ರಲ್ಲಿ ಒಟ್ಟು ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದವರ ಪೈಕಿ ಶೇ. 23.5 ಮಂದಿ ಸ್ಲಂ ನಿವಾಸಿಗಳಾಗಿದ್ದರು. ಈಗ ಅದರ ಪ್ರಮಾಣವು 17.4 ಶೇ.ಕ್ಕಿಳಿದಿದೆ. ಪ್ರಸ್ತುತ 17.35 ಮಿಲಿಯನ್ ಸ್ಲಂ ಮನೆಗಳಿದ್ದು, 13.74 ಮಿಲಿಯನ್ ಸ್ಲಂ ಕುಟುಂಬಗಳಿವೆ ಎಂದು 2011ರ ಜನಗಣತಿ ಸಮೀಕ್ಷೆಯು ಸಾದರ ಪಡಿಸುತ್ತದೆ ಎಂದು ಅವರು ತಿಳಿಸಿದರು.
ಸ್ಲಂ ಕುಟುಂಬಗಳ ಶೇ.74 ಜನರು ಕುಡಿಯುವ ನೀರಿಗಾಗಿ ನಲ್ಲಿಯನ್ನೇ ಅವಲಂಬಿಸುವ ಪರಿಸ್ಥಿತಿ ಇದೆ. ಇದರಲ್ಲಿ ಶೇ.20.3 ಜನರು ಇದಕ್ಕಾಗಿ ಕೈಪಂಪುಗಳನ್ನು ಅಥವಾ ಕೊಳವೆಗಳನ್ನು ಅವಲಂಬಿಸಿದ್ದಾರೆ ಎಂದು ಅವರು ನುಡಿದರು. ಶೇ.66 ಸ್ಲಂ ನಿವಾಸಿಗಳು ಶೌಚಾಲಯ ಸೌಲಭ್ಯವನ್ನು ಹೊಂದಿದ್ದು, 18.9 ಶೇ.ಸ್ಲಂ ಕುಟುಂಬಗಳು ತೆರೆದ ಪ್ರದೇಶದಲ್ಲಿ ಮಲವಿಸರ್ಜನೆ ಮಾಡುತ್ತಿದ್ದಾರೆ ಎಂದು ತಿಳಿಸಿದ ಸಚಿವರು, ಶೇ.15.1ಸ್ಲಂ ಕುಟುಂಬಗಳು ಸಾರ್ವಜನಿಕ ಶೌಚಾಲಯವನ್ನು ತಮ್ಮ ದೈನಂದಿನ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿ ದ್ದಾರೆ ಎಂದು ಹೇಳಿದ್ದಾರೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications