ವಯಾಗ್ರಾ ನುಂಗಿದರೆ ಎಂದೂ ದಪ್ಪಗಾಗಲ್ಲ

ನೀವು ಸೇವಿಸುವ ಆಹಾರದ ಕೊಬ್ಬಿನ ಕೋಶಗಳು ಹೊಟ್ಟಿಗೆ ಹೊಂದಿಕೊಂಡಂತೆ ಕ್ಯಾಲೋರಿ ಹೆಚ್ಚಿಸಿ ಸ್ಥೂಲಕಾಯರನ್ನಾಗಿಸುತ್ತದೆ. ಆದರೆ, ವಯಾಗ್ರಾ ಸೇವಿಸುವುದರಿಂದ ಕ್ಯಾಲೋರಿಗಳನ್ನು ಕರಗಿಸಿ ದೇಹವನ್ನು ನವ ಚೈತನ್ಯವನ್ನು ತುಂಬಲಿದೆ.
ಸಂಶೋಧಕರು ಇಲಿ ಮೇಲೆ ಈ ಪ್ರಯೋಗ ಮಾಡಿ ಉತ್ತಮ ಫಲಿತಾಂಶ ಪಡೆದಿದ್ದಾರೆ, ವಯಾಗ್ರಾ ತಿಂದ ಇಲಿ ಹೆಚ್ಚೆಚ್ಚು ತಿಂದರೂ ದೇಹದ ತೂಕದಲ್ಲಿ ಹೆಚ್ಚಿನ ಬದಲಾವಣೆ ಕಂಡು ಬಂದಿಲ್ಲ ಎಂದು ಸನ್ ವರದಿ ಮಾಡಿದೆ.
ಪ್ರೊ ಅಲೆಕ್ಸಾಂಡರ್ ಫೈಜರ್ ಅವರು ಹೇಳುವಂತೆ ಶಿಶ್ನ ನಿಮಿರುವಿಕೆ ಸಮಸ್ಯೆ ನಿವಾರಣೆಯೊಂದೇ ವಯಾಗ್ರಾದ ಉದ್ದೇಶವಲ್ಲ. ದೇಹದ ಸುಸ್ಥ್ತಿ ಕಾಯ್ದುಕೊಂಡು ದೇಹ ದಪ್ಪವಾಗುವುದನ್ನು ತಡೆಗಟ್ಟಲು ಉಪಯೋಗ ಎಂದಿದ್ದಾರೆ.
ಕಳೆದ ಕೆಲ ವರ್ಷಗಳಿಂದ ವಯಾಗ್ರಾ ಸೇವಿಸುವುದರಿಂದ ಆಗಬಹುದಾದ ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಕೂಗೆದ್ದಿತ್ತು. ಅಮೆರಿಕದ 86ರ ಹರೆಯದ ಚಿರ ಯುವಕನೊಬ್ಬ ವಯಾಗ್ರಾ ನುಂಗಿ ತನ್ನ ಕಣ್ಣು ಕಳೆದುಕೊಂಡು ಅಂಧತ್ವ ಅನುಭವಿಸಿ ಕೋರ್ಟ್ ಮೆಟ್ಟಿಲೇರಿದ್ದ. ಈ ಕಥೆ ಇಲ್ಲಿದೆ.
ವಯಾಗ್ರಾ ಸಮಸ್ಯೆಗಳೇನು?: 1998ರಿಂದ ಮಾರುಕಟ್ಟೆಯಲ್ಲಿರುವ 'ವಂಡರ್ ಗುಳಿಗೆ' ವಯಾಗ್ರಾದಿಂದ ಈ ವರೆಗೂ ಯಾರಿಗೂ ಕಣ್ಣು ಹೋದ ದಾಖಲೆಗಳಿಲ್ಲ. 55 ವರ್ಷ ದಾಟಿದವರು ಈ ಔಷಧಗಳನ್ನು ಬಳಸಿದಾಗ ಕಿವುಡರಾಗಿರುವುದು ಸಮೀಕ್ಷೆ ಹೇಳಿತ್ತು.
ಶಿಶ್ನ ನಿಮಿರುವಿಕೆ ಸಮಸ್ಯೆಯಿಂದ ಬಳಲುತ್ತಿರುವ ಪುರುಷರು ವಯಾಗ್ರಾ ಸೇವಿಸಿ ಹೆಚ್ಚಿನ ಲೈಂಗಿಕ ಸುಖ ಅನುಭವಿಸುವುದು ಮಾಮೂಲಿನ ಸಂಗತಿಯಾಗಿದೆ. ಎಲ್ಲಾ ಮಾತ್ರೆಗಳಂತೆ ವಯಾಗ್ರಾ ಸೇವಿಸುವುದರಿಂದಲೂ ಸೈಡ್ ಎಫೆಕ್ಟ್ ಉಂಟಾಗುತ್ತದೆ.
ಸೈಡ್ ಎಫೆಕ್ಟ್ಸ್ ವ್ಯಕ್ತಿಯಿಂದ ವ್ಯಕ್ತಿಗೆ ಬೇರೆ ಬೇರೆಯಾಗಿರುತ್ತದೆ. ಸಾಮಾನ್ಯವಾಗಿ, ತಲೆನೋವು, ಶೀತ, ಮಲಬದ್ಧತೆ, ಕಣ್ಣು ಕತ್ತಲೆ ಕಟ್ಟುವಿಕೆ ಮುಂತಾದ ಸಮಸ್ಯೆಗಳು ಎದುರಾಗುತ್ತದೆ. ಅದರೆ, ಕೆಲವೊಮ್ಮೆ ಎದೆನೋವು, ಮೈಕೈ ನೋವು, ಚರ್ಮದಲ್ಲಿ ತುರಿಕೆ, ನಿದ್ರಾಹೀನತೆ, ಸ್ಪರ್ಶ ಹೀನತೆ, ಬಾಯಿ ಒಣಗುವಿಕೆ, ಅತಿಯಾಗಿ ಬೆವರುವಿಕೆ ಮುಂತಾದ ಸಮಸ್ಯೆಗಳು ಕಾಣಿಸಿಕೊಂಡ ಉದಾಹರಣೆಗಳಿದೆ.
ಆದರೆ, ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಗುಳಿಗೆ ಸೇವಿಸಿದರೆ, ಸೈಡ್ ಎಫೆಕ್ಟ್ ದೊಡ್ಡದಾಗೆ ಕಾಡುತ್ತದೆ. ಪಾರ್ಶ್ವವಾಯು, ಮೂರ್ಛೆ ಹೋಗುವುದು, ಮೂಗಿನಲ್ಲಿ ರಕ್ತ ಸೋರುವುದು, ಅಧಿಕ ರಕ್ತದೊತ್ತಡ, ಕಿವುಡಾಗುವಿಕೆ ಅಲ್ಲದೆ ಹೃದಯಾಘಾತ ಕೂಡಾ ಸಂಭವಿಸುವ ಸಾಧ್ಯತೆಗಳಿರುತ್ತದೆ.
ವಿಚಿತ್ರವೆಂದರೆ ಕೆಲವು ಪ್ರಕರಣಗಳಲ್ಲಿ ನಿಮಿರಿಕೆಗೆ ಒಳಪಟ್ಟ ಶಿಶ್ನ ಸುಮಾರು 4 ಗಂಟೆಗಳ ಅದೇ ಸ್ಥಿತಿಯಲ್ಲೇ ಉಳಿದು ಸಮಸ್ಯೆ ಉಂಟು ಮಾಡಿದ್ದು ಇದೆ. ಅದರೆ, ಮೇಲ್ಕಂಡ ಪ್ರಕರಣದಲ್ಲಿ ಅಂಥೋನಿ ವಯಸ್ಸು 86 ವರ್ಷವಾದ್ದರಿಂದ ಸೈಡ್ ಎಫೆಕ್ಟ್ ಗೂ ಮೀರಿದ ಸಮಸ್ಯೆ ಎದುರಾಗಿದ್ದರೆ ಅದರಲ್ಲಿ ಆಶ್ಚರ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.
-
Summer Alert: ಬೇಸಿಗೆಯಲ್ಲಿ ಫ್ರಿಜ್ ನೀರು ಕುಡಿಯುತ್ತಿದ್ದೀರಾ? ಮೊದಲು ಈ ವಿಷಯ ತಿಳಿದುಕೊಳ್ಳಿ -
ಅಪ್ಪನ ಸಕ್ಕರೆ ಚಟ ಬಿಡಿಸಲು ಮೋದಿ ಮೊರೆ ಹೋದ ಯುವಕ: ವಿಡಿಯೋ Viral, ಪ್ರಧಾನಿಯಿಂದ ಬಂತು ಅಚ್ಚರಿಯ ರಿಪ್ಲೈ -
ವಾಸ್ತು ಮಾತ್ರ ಸಾಲದು! ನಿಮ್ಮ ಜಾತಕವೇ ಯಶಸ್ಸನ್ನು ನಿರ್ಧರಿಸುತ್ತದೆ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ












Click it and Unblock the Notifications